ಬೆಂಗಳೂರು : ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿ ಚೈತ್ರ ಕೊಟ್ಟೂರು ವಿವಾಹ ವಿವಾದ ಇನ್ನೂ ಮುಂದುವರಿದಿದೆ. ಪರಿಸ್ಥಿತಿ ನೋಡಿದರೆ ಈ ವಿವಾದ ಸುಖಾಂತ್ಯವಾಗುವ ಯಾವುದೇ ಲಕ್ಷಣಗಳಿಲ್ಲ.
ವಿವಾಹ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸೋಮವಾರ ಎರಡೂ ಕಡೆಯವರನ್ನೂ ಕರೆಸಿದ್ದ ಪೊಲೀಸರು, ನೀವೇ ಒಂದು ತೀರ್ಮಾನಕ್ಕೆ ಬರುವುದಾದರೆ ಬನ್ನಿ, ಇಲ್ಲವಾದರೆ ನಾವೇ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪೊಲೀಸರ ಎಚ್ಚರಿಕೆಯಿಂದ ಎಚ್ಚೆತ್ತುಕೊಂಡಿರುವ ಎರಡೂ ಕಡೆಯವರು ಎರಡು ದಿವಸದ ಕಾಲಾವಕಾಶ ಕೇಳಿದ್ದಾರೆ.
ಈ ನಡುವೆ ಚೈತ್ರಾ ಕೊಟ್ಟೂರೂ ಹಾಗೂ ನಾಗಾರ್ಜುನ್ ವಿವಾಹ ಮಾಡಿದ ಅಖಂಡ ಕರ್ನಾಟಕ ರಕ್ಷಣಾ ಸೇವಾದಳ ಸಂಘಟನೆ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕ ರಕ್ಷಣಾ ದಳ ಎಂದು ಹೆಸರಿಟ್ಟುಕೊಂಡವರು ಕನ್ನಡದ, ಕರ್ನಾಟಕದ ಸೇವೆ ಮಾಡಬೇಕು ಅದನ್ನು ಬಿಟ್ಟು ಬಲವಂತದ ವಿವಾಹ ಮಾಡಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ಒಂದು ವೇಳೆ ಚೈತ್ರಾ ಕೊಟ್ಟೂರಿಗೆ ನಾಗಾರ್ಜುನ್ ಕಡೆಯಿಂದ ಮೋಸವಾಗಿದ್ದರೆ ಅದನ್ನು ಇತ್ಯರ್ಥಗೊಳಿಸಲು ಪೊಲೀಸರಿದ್ದಾರೆ, ನ್ಯಾಯಾಲಯಗಳಿದೆ ಅದನ್ನು ಬಿಟ್ಟು ಸಂಘಟನೆಯೇ ಪೊಲೀಸರ ಕಾರ್ಯವನ್ನು ಕೈಗೆತ್ತಿಕೊಂಡಿದ್ಯಾಕೆ.
Discussion about this post