ಸದಾ ನೆಗೆಟಿವ್ ಕಾರಣದಿಂದ ಸುದ್ದಿಯಲ್ಲಿರುವ ದುನಿಯಾ ವಿಜಿ ಇಂದು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಲ್ಲಿರುವುದು ಮತ್ತೆ ಹೊಡೆದಾಟ,ಬಡಿದಾಟದ ಕಾರಣಕ್ಕೆ. ದುನಿಯಾ ವಿಜಿ ಸುದ್ದಿಯಾಗಿರುವ ಮತ್ತೊಂದು ಹೆಸರು ಪಾನಿ ಪೂರಿ ಕಿಟ್ಟಿ.
ಗಾಂಧಿನಗರದ ಎಲ್ಲಾ ಸ್ಟಾರ್ ನಟರಿಗೆ ಬೇಕಾಗಿರುವ ಪಾನಿ ಪೂರಿ ಕಿಟ್ಟಿ ಒಂದು ಕಾಲದಲ್ಲಿ ದುನಿಯಾ ವಿಜಯ್ ಗೆ ದುಷ್ಮನ್ ಆಗಿದ್ದವರು ಅಂದ್ರೆ ನೀವು ನಂಬಲೇಬೇಕು.
ಯಾಕೆಂದರೆ ಇದನ್ನು ದುನಿಯಾ ವಿಜಿ 2016ರಲ್ಲೇ ಇದನ್ನು ಹೇಳಿದ್ದರು. ಕಿಟ್ಟಿ ವಿದ್ಯಾರಣ್ಯಪುರದಲ್ಲಿ ‘ಮಸಲ್ ಪ್ಲಾನೆಟ್’ ಜಿಮ್
ತೆರೆಯುವ ಸಂದರ್ಭದಲ್ಲಿ ವಿಜಿಯವರನ್ನು ಉದ್ಘಾಟನೆಗೆ ಆಹ್ವಾನಿಸಿದ್ದರು. ಆ ವೇಳೆ ಪಾನಿಪೂರಿ ಕಿಟ್ಟಿ ಬಗ್ಗೆ ಬರೆದಿಟ್ಟುಕೊಂಡಿದ್ದ ವಿಜಿ, ಕಿಟ್ಟಿಯ ಸಾಧನೆಯನ್ನು ಹೊಗಳಿದ್ದರು.
ಆದರೆ ಅದ್ಯಾಕೆ ಅವರ ನಡುವೆ ದ್ವೇಷ ಇತ್ತು, ಅದು ಹೇಗೆ ಮರೆಯಾಯ್ತು ಅನ್ನುವುದನ್ನು ಹೇಳಲಿಲ್ಲ. ಇಬ್ಬರು ಗೆಳೆಯರಾದ ನಂತರ ದುನಿಯಾ ವಿಜಯ್ ಅಭಿನಯದ ‘ಶಂಕರ್ ಐ.ಪಿ.ಎಸ್’ ಸಿನಿಮಾದಿಂದ ಹಿಡಿದು ಮಾಸ್ತಿ ಗುಡಿ ಚಿತ್ರದವರೆಗೂ ದುನಿಯಾ ವಿಜಯ್ ಗೆ ಪರ್ಸನಲ್ ಟ್ರೇನರ್ ಆಗಿ ಪಾನಿ ಪೂರಿ ಕಿಟ್ಟಿ ಜೊತೆಗಿದ್ದರು.
ಬಳಿಕ ಅದ್ಯಾಕೋ ಬಳಿಕ ಸಂಬಂಧ ಹಳಸಿತು. ನಿನ್ನೆ ಹೈಗ್ರೌಂಡ್ ಸ್ಟೇಷನ್ ತನಕ ಬಂದು ನಿಲ್ಲಿಸಿತು.
Discussion about this post