ಬೆಂಗಳೂರು : ಆರೋಪ ಪಟ್ಟಿ ಸಲ್ಲಿಸುವ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಹಲಸೂರು ಗೇಟ್ ಠಾಣೆ ಇನ್ಸ್ ಪೆಕ್ಟರ್ ರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.
ಇದನ್ನೂ ಓದಿ : ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾದ ಪೊಲೀಸ್ ಮೇಡಂ ತಿಂದಿದ್ದು ಎಷ್ಟು ಗೊತ್ತಾ…?
ಎನ್.ಎಚ್. ರಾಜಶೇಖರ್ ಅಮಾನತುಗೊಂಡ ಅಧಿಕಾರಿಯಾಗಿದ್ದು, ನಿರ್ಲಕ್ಷ್ಯ ತೋರಿದ ಅಧಿಕಾರಿಗೆ ಈ ಮೂಲಕ ಬಿಸಿ ಮುಟ್ಟಿಸಲಾಗಿದೆ.
ಇದನ್ನೂ ಓದಿ : ಮದುವೆಯಾಗುವುದಾಗಿ ನಂಬಿಸಿ ಮಹಿಳಾ PSI ಗೆ ಕೈ ಕೊಟ್ಟ ಸಬ್ ಇನ್ಸ್ ಪೆಕ್ಟರ್
ಕಳೆದ ವರ್ಷ ಅಂದ್ರೆ 2020ರ ಅ.19 ರಂದು ಪತ್ರ ಬರೆದಿದ್ದ ಅಪರಿಚಿತನೊಬ್ಬ ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಲಯ ಸ್ಛೋಟಿಸುವುದಾಗಿ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬರೆದಿದ್ದ.
ಇದನ್ನೂ ಓದಿ : ನ್ಯಾಯ ಎಲ್ಲಿದೆ…. ಬಿ ರಿಪೋರ್ಟ್ ಸಲ್ಲಿಸಲು 10 ಲಕ್ಷ ಪಡೆದ ಇನ್ಸ್ ಪೆಕ್ಟರ್ ವಿರುದ್ಧ ದೂರು ದಾಖಲು
ಜೊತೆಗೆ ಚಂದನವನದ ಡ್ರಗ್ಸ್ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಿಡುಗಡೆ ಮಾಡುವಂತೆಯೂ ಪತ್ರದಲ್ಲಿ ಒತ್ತಾಯಿಸಲಾಗಿತ್ತು.
ಇದನ್ನೂ ಓದಿ : ಖಾಕಿಗಳ ಕರ್ಮಕಾಂಡ : 15 ಲಕ್ಷ ಸುಲಿಗೆ ಆರೋಪ : ಗೃಹ ಇಲಾಖೆಗೆ ನೋಟಿಸ್
ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಗುಬ್ಬಿ ಮೂಲದ ವ್ಯಕ್ತಿಯನ್ನು ಬಂಧಿಸಿದ್ದರೂ ಕೂಡಾ.
ಆದರೆ ನಿಯಮಗಳ ಪ್ರಕಾರ 90 ದಿನಗಳ ಒಳಗಾಗಿ ಆರೋಪಪಟ್ಟಿ ಸಲ್ಲಿಸಬೇಕಾಗಿತ್ತು. ಆದರೆ ನಿರ್ಲಕ್ಷ್ಯ ವಹಿಸಿದ್ದ ಎನ್.ಎಚ್. ರಾಜಶೇಖರ್ 95 ದಿನಗಳು ಕಳೆದ ಬಳಿಕ ಆರೋಪ ಪಟ್ಟಿ ಸಲ್ಲಿಸಿದ್ದರು.
Discussion about this post