ಬೆಂಗಳೂರು : ನಿರ್ಭಯಾ ನಿಧಿಯಡಿ ಬೆಂಗಳೂರು ನಗರ ಸುರಕ್ಷಾ ಯೋಜನೆಯ ಕುರಿತಂತೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಮತ್ತು ಡಿ ರೂಪಾ ನಡುವೆ ನಡೆದಿದ್ದ ಮುಸುಕಿನ ಗುದ್ದಾಟಕ್ಕೆ ತೆರೆ ಬಿದ್ದಿದೆ.
ನಿಧಿಯನ್ನು ಖರ್ಚು ಮಾಡಲು ಕರೆದಿದ್ದ ಟೆಂಡರ್ ನಲ್ಲಿ ಅಕ್ರಮದ ಸುಳಿವು ಕೊಟ್ಟಿದ್ದ ಡಿ. ರೂಪಾ ಈ ಮೂಲಕ ಗೆಲುವು ಸಾಧಿಸಿದ್ದಾರೆ.
ಈ ಹಿಂದೆ ಕರೆಯಲಾಗಿದ್ದ ಟೆಂಡರ್ ಕುರಿತಂತೆ ಡಿ.ರೂಪಾ ಆಕ್ಷೇಪಗಳನ್ನು ಎತ್ತಿದ್ದರು. ಅನರ್ಹರಿಗೆ ಟೆಂಡರ್ ಕೊಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದರು.
ಇದೀಗ 670 ಕೋಟಿ ಮೊತ್ತದ ಸಿಸಿಟಿವಿ ಅಳವಡಿಸುವ ಟೆಂಡರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸದೆ ಹೊಸ ನಿಯಮಗಳ ಪ್ರಕಾರ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.
ಒಟ್ಟಿನಲ್ಲಿ ನಗರ ಸುರಕ್ಷತೆಯ ವಿಚಾರದಲ್ಲೂ ಕಾಸು ಮಾಡಲು ಹೊರಟಿದ್ದ ಮಂದಿಗೆ ನಗರ ಪೊಲೀಸ್ ಆಯುಕ್ತರು ಬ್ರೇಕ್ ಹಾಕಿರುವುದು ಒಳ್ಳೆಯ ಬೆಳವಣಿಗೆಯೇ ಸರಿ
Discussion about this post