ಬೆಂಗಳೂರು : ದೂರದ ಊರುಗಳಿಂದ ಬಸ್ ನಲ್ಲಿ ಬಂದು ಬೆಳಕು ಹರಿಯುವ ಮುನ್ನ ಬೆಂಗಳೂರಿನಲ್ಲಿ ಇಳಿಯುವವರಾಗಿದ್ದರೆ ಎಚ್ಚರಿಕೆ ವಹಿಸಿ.
ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ವಹಿಸಿದ್ರೆ ಮಾತ್ರ ಬಸ್ ಒಂಟಿಯಾಗಿ, ನಿರ್ಜನ ಪ್ರದೇಶಗಳಲ್ಲಿ ಬಸ್ ನಿಂದ ಇಳಿಯೋ ಧೈರ್ಯ ಮಾಡಿ. ಇಲ್ಲವಾದರೆ ಅಪಾಯ ಗ್ಯಾರಂಟಿ.
ಯಾಕಂದ್ರೆ ಬೆಳಕು ಹರಿಯುವ ಮುನ್ನ ಬೆಂಗಳೂರಿಗೆ ಬಂದಿಳಿಯುವ ಮಂದಿಯನ್ನು ಗುರಿಯಾಗಿರಿಸಿ ದರೋಡೆ ಮಾಡುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.
ಜನವರಿ 30 ರಂದು ತಮಿಳುನಾಡು ಮೂಲಕ ಅರುಣಾಚಲಂ ಬೆಳಗ್ಗೆ 5 ಗಂಟೆ ಸುಮಾರಿಗೆ ಎ.ಎಂ. ರಸ್ತೆಯ ರಾಯಲ್ ಟ್ರಾವೆಲ್ಸ್ ಬಳಿ ಬಸ್ ನಿಂದ ಇಳಿದಿದ್ದಾರೆ.
ದೇವನಹಳ್ಳಿ ಕಡೆ ಹೋಗಬೇಕಾದ ಕಾರಣ ಕಲಾಸಿಪಾಳ್ಯ ಕಡೆಯಿಂದ ಕೆ ಆರ್ ಮಾರುಕಟ್ಟೆ ಕಡೆ ನಡೆದು ಹೋಗುತ್ತಿದ್ದರು. ಈ ವೇಳೆ ಬಂಬೂ ಬಜಾರ್ ಬಳಿಯ ಶಾರ್ಟ್ ಕಟ್ ರಸ್ತೆಯಲ್ಲಿ ಬೈಕ್ ನಲ್ಲಿ ಬಂದ ದರೋಡೆಕೋರರು ಅರುಣಾಚಲಂ ಅವರನ್ನು ಅಡ್ಡ ಹಾಕಿದ್ದಾರೆ.
ಕೈ ಹಾಗೂ ಎದೆ ಭಾಗಕ್ಕೆ ಹಲ್ಲೆ ಮಾಡಿ 60 ಗ್ರಾಮ್ ಚಿನ್ನಾಭರಣ, ನಗದು ಹಾಗೂ ಮೊಬೈಲ್ ದೋಚಿದ್ದಾರೆ.
ಜೊತೆಗೆ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ ಭಯಗೊಂಡ ಅವರು ಪೊಲೀಸರಿಗೆ ದೂರು ಕೊಟ್ಟಿರಲಿಲ್ಲ.
ನಂತರ ಕಚೇರಿಗೆ ಹೋದ ವೇಳೆ ಸಹೋದ್ಯೋಗಿಗಳು ಕೈಗೆ ಆದ ಗಾಯದ ಬಗ್ಗೆ ವಿಚಾರಿಸಿದ್ದಾರೆ. ಆಗ ನಿಜ ವಿಷಯ ತಿಳಿಸಿದ್ದಾರೆ. ಬಳಿಕ ಸ್ವೇಹಿತರ ಸಲಹೆ ಮೇರೆಗೆ ಸ್ಥಳೀಯ ಠಾಣೆಗೆ ದೂರು ನೀಡಿದ್ದಾರೆ.
ಈ ದೂರಿನ ಆಧಾರದಲ್ಲಿ ಕಾಟನ್ ಪೇಟೆ ವಿಘ್ನೇಶ್ (25), ರಾಜೇಂದ್ರ ನಗರದ ಸುರೇಶ್ (20) ಮತ್ತು ಅಂಜಿನಪ್ಪ ಗಾರ್ಡನ್ ದಿನೇಶ್ ( 21) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಗೆ 60 ಗ್ರಾಮ್ ಚಿನ್ನಾಭರಣ, 14 ಮೊಬೈಲ್ ಮತ್ತು 4 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಾಗಿದೆ.
ಈ ಗ್ಯಾಂಗ್ ದೂರದ ಊರಿನಿಂದ ಬೆಂಗಳೂರಿಗೆ ಬಂದಿಳಿಯುವ ಮಂದಿಯನ್ನೇ ಗುರಿಯಾಗಿರಿಸಿ ದರೋಡೆ ಮಾಡುತ್ತಿದ್ದರು ಎಂದು ಗೊತ್ತಾಗಿದೆ.
Discussion about this post