ಒಂದು ವೇಳೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಅವರು ಗೆಲುವು ಸಾಧಿಸದಿದ್ದರೆ ಕುದ್ರೋಳಿ ದೇವಸ್ಥಾನ ಪ್ರವೇಶ ಮಾಡುವುದಿಲ್ಲ ಎಂದು ಜನಾರ್ದನ ಪೂಜಾರಿ ಶಪಥ ಮಾಡಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಮಿಥುನ್ ರೈ ಹೀನಾಯವಾಗಿ ಸೋಲು ಕಂಡಿದ್ದರು.
ಕುದ್ರೋಳಿ ಗೋಕರ್ಣನಾಥ ದೇವಸ್ಥಾನವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪೂಜಾರಿಯವರ ಶಪಥ ಕರಾವಳಿಯಲ್ಲಿ ದಿಗ್ಭ್ರಮೆ ಮೂಡಿಸಿತ್ತು. ದೇವಸ್ಥಾನ ಪ್ರವೇಶಿಸುವುದಿಲ್ಲ ಅನ್ನುವ ಶಪಥವನ್ನು ಅವರು ಕೈಗೊಳ್ಳಬಾರದಿತ್ತು. ಎಂದು ಪಕ್ಷ ಬೇಧ ಮರೆತು ಜನ ಹೇಳಿದ್ದರು. ರಾಜಕೀಯವಾಗಿ ಪೂಜಾರಿಯವರು ಏನೇ ಹೇಳಿಕೆ ಕೊಡಲಿ, ಆದರೂ ಇಂದಿಗೂ ಕರಾವಳಿಯಲ್ಲಿ ಜನಾರ್ಧನ ಪೂಜಾರಿ ಅಂದ್ರೆ ಕಾಂಗ್ರೆಸ್ ಅನ್ನು ಹೊರತು ಪಡಿಸಿ ಉಳಿದ ಪಕ್ಷದ ಕಾರ್ಯಕರ್ತರೂ ಕೂಡಾ ಗೌರವ ಕೊಡುತ್ತಾರೆ. ದಕ್ಷಿಣ ಕನ್ನಡಕ್ಕೆ ಅವರ ಸಲ್ಲಿಸಿದ ಸೇವೆ ಜನರ ಮನಸ್ಸಿನಲ್ಲಿ ಇಂದಿಗೂ ನೆಲೆಸಿರುವುದು ಇದಕ್ಕೆ ಕಾರಣ.
ಆದರೆ ಇದೀಗ ಪ್ರತಿಜ್ಞೆ ಮುರಿದಿರುವ ಪೂಜಾರಿಯವರು ಮೊದಲ ಬಾರಿಗೆ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಕ್ಷೇತ್ರಕ್ಕೆ ಭೇಟಿ ಕೊಟ್ಟಿರುವ ಅವರು ಗೋಕರ್ಣನಾಥನಿಗೆ ಕ್ಷಮೆ ಕೇಳಿದ್ದಾರೆ.
ಹಾಗೇ ನೋಡಿದರೆ ಇದು ಒಳ್ಳೆಯ ನಡೆ. ದುರಂತ ಅಂದ್ರೆ ಪೂಜಾರಿಯವರು ದೇವಸ್ಥಾನ ಪ್ರವೇಶಿಸುವ ವೇಳೆ ನಳಿನ್ ವಿರುದ್ಧ ಸೋತ ಮಿಥುನ್ ರೈ ನಾಪತ್ತೆಯಾಗಿದ್ದರು.
Discussion about this post