ಉತ್ತರ ಪ್ರದೇಶ : ದೇವಸ್ಥಾನದೊಳಗೆ ನೀರು ಕುಡಿದ ಕಾರಣಕ್ಕೆ ಮುಸ್ಲಿಂ ಬಾಲಕನಿಗೆ ಥಳಿಸಲಾಗಿದೆ ಅನ್ನುವ ಸುದ್ದಿ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶೃಂಗಿ ನಂದನ್ ಅನ್ನುವ ವ್ಯಕ್ತಿಯನ್ನು ಬಂಧಿಸಿದ್ದರು.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಬುದ್ದಿಜೀವಿ ಎಂದು ಕರೆಸಿಕೊಂಡವರು ಮನಸ್ಸಿಗೆ ಬಂದ ರೀತಿಯಲ್ಲಿ ಕಮೆಂಟ್ ಮಾಡಿದ್ದರು.
ಮಾತ್ರವಲ್ಲದೆ #sorryasif ಅನ್ನುವ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿತ್ತು. ಡಾ. ಬಿ.ಆರ್. ಅಂಬೇಡ್ಕರ್ ನಡೆಸಿದ ಚೌಡಾರ್ ಕೆರೆ ಹೋರಾಟವನ್ನು ನೆಟ್ಟಿಗರು ನೆನಪಿಸಿದ್ದರು. ಮಾತ್ರವಲ್ಲದೆ ಅಸಿಫ್ ನನ್ನು ಅಂಬೇಡ್ಕರ್ ಸಂತೈಸುತ್ತಿರುವ ಕಾರ್ಟೋನ್ ವೈರಲ್ ಆಗಿತ್ತು.
ಆದರೆ ಇದೀಗ ಇದೇ ಸುದ್ದಿಯ ಮತ್ತೊಂದು ಮುಖದ ಪರಿಚಯವಾಗಿದೆ.
ಘಟನೆ ಕುರಿತಂತೆ ಮಾತನಾಡಿರುವ ದೇವಸ್ಥಾನದ ಆರ್ಚಕರೊಬ್ಬರು, ಅಸಿಫ್ ನೀರು ಕುಡಿಯಲು ದೇವಸ್ಥಾನಕ್ಕೆ ಬಂದಿಲ್ಲ. ಹಿಂದೂ ಹುಡುಗಿಯರನ್ನು ಚುಡಾಯಿಸಲು ಆತ ಬಂದಿದ್ದ ಅಂದಿದ್ದಾರೆ.
ಘಟನೆ ಕುರಿತಂತೆ ಮಾತನಾಡಿರುವ ದೇವಸ್ಥಾನದ ಆರ್ಚಕರೊಬ್ಬರು, ಅಸಿಫ್ ನೀರು ಕುಡಿಯಲು ದೇವಸ್ಥಾನಕ್ಕೆ ಬಂದಿಲ್ಲ. ಹಿಂದೂ ಹುಡುಗಿಯರನ್ನು ಚುಡಾಯಿಸಲು ಆತ ಬಂದಿದ್ದ ಅಂದಿದ್ದಾರೆ.
ನೀರು ಕುಡಿಯುವುದಾಗಿದ್ದರೆ ದೇವಸ್ಥಾನದ ಪ್ರವೇಶ ದ್ವಾರದಲ್ಲೇ ಕುಡಿಯುವ ನೀರಿನ ನಲ್ಲಿ ಇತ್ತು ಎಂದು ಹೇಳಿರುವ ಅರ್ಚಕರು ಹಲವು ಆರೋಪಗಳನ್ನು ಹೊರಿಸಿದ್ದಾರೆ. ಇದೀಗ #IStandWithShringiYadav ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದೆ
Discussion about this post