11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ವರ್ಗಾವಣೆ ಪಟ್ಟಿಯಲ್ಲಿ ಗಮನ ಸೆಳೆದದ್ದು ಮಂಗಳೂರಿನ ಇಬ್ಬರು ಐಪಿಎಸ್ ಅಧಿಕಾರಿಗಳ ವರ್ಗಾವಣೆ.
ಇದರೊಂದಿಗೆ ಐಎಂಎ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಮುಖ್ಯಸ್ಥ ರವಿಕಾಂತೇಗೌಡರನ್ನೂ ವರ್ಗಾಯಿಸಲಾಗಿದ್ದು ಅವರಿಗೆ ಜಾಗ ತೋರಿಸಲಾಗಿಲ್ಲ.
ಇನ್ನು ಎಸಿಬಿಯಲ್ಲಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರಿಗೆ ಸ್ಥಳ ನಿಯುಕ್ತಿ ಮಾಡಲಾಗಿಲ್ಲ. ಡಿಸಿಪಿ ದೇವರಾಜ್ ಅವರೂ ವರ್ಗಾವಣೆ ಆಗಿದ್ದೂ ಅವರಿಗೂ ಸ್ಥಳ ನಿಯುಕ್ತಿ ಮಾಡಿಲ್ಲ. ಈ ಮೂವರು ಅಧಿಕಾರಿಗಳು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಆತ್ಮೀಯತೆ ಹೊಂದಿದ್ದರು ಅನ್ನುವುದು ಗಮನಾರ್ಹ.
ಜೊತೆಗೆ ಎಸಿಬಿ ಈ ಅಧಿಕಾರಿಗಳನ್ನು ಕುಮಾರಸ್ವಾಮಿಯವರೇ ನೇಮಿಸಿದ್ದರು. ಈ ಹಿಂದೆ ಅಧಿಕಾರಕ್ಕೆ ಬಂದರೆ ಎಸಿಬಿಯನ್ನು ರದ್ದುಗೊಳಿಸುವುದಾಗಿ ಬಿಜೆಪಿ ಹೇಳಿತ್ತು. ಇದಕ್ಕೆ ಪೂರಕವಾಗಿ ಎಸಿಬಿಯಲ್ಲಿದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
Discussion about this post