ಬೆಂಗಳೂರು, ಫೆ. 8- ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ), ಸಮರ್ಥನಂ ಟ್ರಸ್ಟ್ ಸಹಭಾಗಿತ್ವದಲ್ಲಿ ಮೂರನೇ ಇಂಡಸ್ಇಂಡ್ ಬ್ಯಾಂಕ್ ಅಂಧರ ನಾಗೇಶ್ ಟ್ರೋಫಿ ರಾಷ್ಟ್ರೀಯ ಟಿ20 ಕ್ರಿಕೆಟ್ ಟೂರ್ನಿ ಇಂದು (ಸೋಮವಾರ) ಆರಂಭಗೊಂಡಿದೆ.
ಟೂರ್ನಿಯನ್ನು ಉದ್ಘಾಟಿಸಿದ ಶಾಸಕ ಬಿ. ಶಿವಣ್ಣ ಅವರು ವಿಕಲಚೇತನರಲ್ಲಿ ವಿಶೇಷವಾದ ಪ್ರತಿಭೆಗಳಿರುತ್ತವೆ ಎನ್ನುವುದಕ್ಕೆ ಈ ಕ್ರಿಕೆಟ್ ಸಾಕ್ಷಿ. ದೇಶದ ವಿವಿಧ ಭಾಗಗಳಲ್ಲಿರುವ ಅಂಧ ಕ್ರಿಕೆಟ್ ಆಟಗಾರರನ್ನು ಪ್ರೋತ್ಸಾಹಿಸಲೆಂದೇ ನಡೆಯುತ್ತಿರುವ ಈ ಟೂರ್ನಿಯನ್ನು ಉದ್ಘಾಟಿಸಲು ಹರ್ಷ ಎನಿಸುತ್ತದೆ. ಪ್ರತಿಯೊಬ್ಬ ಆಟಗಾರರಿಗೂ ನನ್ನ ಅಭಿನಂದನೆಗಳು” ಎಂದು ಹೇಳಿದರು.
24 ರಾಜ್ಯಗಳಿಂದ ಆಗಮಿಸಿದ 290 ಅಂಧ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಟೂರ್ನಿಯಲ್ಲಿ 24 ರಾಜ್ಯಗಳ 290 ಅಂಧ ಕ್ರಿಕೆಟ್ ಆಟಗಾರರು ಭಾಗವಹಿಸುತ್ತಿದ್ದಾರೆ. ನಾಲ್ಕು ಗುಂಪುಗಳಲ್ಲಿ ತಲಾ ಎಂಟು ತಂಡಗಳಿವೆ. ಲೀಗ್ ಮತ್ತು ನಾಕೌಟ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಪ್ರತಿ ಗುಂಪಿನಿಂದ ಅಗ್ರಸ್ಥಾನದಲ್ಲಿರುವ ಎರಡು ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ.
ಫೆ 8ರಿಂದ ಆರಂಭಗೊಂಡಿರುವ ಪಂದ್ಯದ ಫೈನಲ್ 16ರಂದು ನಡೆಯಲಿದೆ. ಮೊದಲ ಪಂದ್ಯ ಕರ್ನಾಟಕ ಮತ್ತು ಜಾರ್ಖಂಡ್ ತಂಡಗಳ ನಡುವೆ ನಡೆಯಲಿದೆ. ಬೆಂಗಳೂರಿನ ಹೊರವಲಯದಲ್ಲಿರುವ ನಿರ್ಮಾಣ್ ಗ್ರೌಂಡ್, ಸಚಿನ್ ತೆಂಡೂಲ್ಕರ್ ಗ್ರೌಂಡ್, ಅಲ್ಟಾಯರ್, ಅಥೆನಾ, ಮತ್ತು ಪಿಎಸ್ಎ ಗ್ರೌಂಡ್ಗಳಲ್ಲಿ ಎರಡು ಅವಧಿಗಳಲ್ಲಿ ಪಂದ್ಯಗಳು ನಿರಂತರವಾಗಿ ನಡೆಯಲಿವೆ.
ಭಾನುವಾರ ರಾತ್ರಿ ಬೊಮ್ಮಸಂದ್ರದ ಗೀಗಾಬೈಟ್ ಕಾನ್ಫರೆನ್ಸ್ ಸಭಾಂಗಣದಲ್ಲಿ ಆನೆಕಲ್ ಶಾಸಕ ಬಿ. ಶಿವಣ್ಣ ಅವರು ಟೂರ್ನಿಯನ್ನು ಉದ್ಘಾಟಿಸಿದರು. ಕರ್ನಾಟಕ ಕ್ರಿಕೆಟ್ ತಂಡದ ಮಾಜಿ ಮ್ಯಾನೇಜರ್ ಬಿ. ಸಿದ್ದರಾಮು, ಹೆಲ್ತ್ ಸೊಲ್ಯೂಷನ್ಸ್ ಇಂಡಿಯಾದ ಸಿಇಒ ಡಾ. ಆನಂದ್ ಲಕ್ಷ್ಮಣ್, ಸಮರ್ಥನಂ ಟ್ರಸ್ಟ್ನ ಸ್ಥಾಪಕರಾದ ಡಾ. ಮಹಾಂತೇಶ್ ಜಿ. ಕಿವದಾಸಣ್ಣನವರ್, ಇನ್ನಿತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
Discussion about this post