ಊಟಿ : ನಮ್ಮ ಪಕ್ಕದ ದೇಶದಲ್ಲೇ ಉಗ್ರವಾದಿಗಳ ಬೇರುಗಳಿದ್ದು, ಅಗತ್ಯ ಬಿದ್ರೆ ಅವರ ದೇಶಕ್ಕೆ ನುಗ್ಗಿ ಹೊಡೆಯಬೇಕಾಗುತ್ತದೆ ಎಂದು ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆಯನ್ನು ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ನೀಡಿದ್ದಾರೆ.
ಊಟಿಯ Defence Services Staff College (DSSC) ನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಜಾಗತೀಕರಣ ದೇಶದ ಭದ್ರತೆಗೆ ಬೆದರಿಕೆಗಳನ್ನು ಒಡ್ಡುತ್ತಿದೆ. ಈ ಬೆದರಿಕೆಗಳನ್ನು ಮೆಟ್ಟಿ ನಿಲ್ಲಲ್ಲು ಸಾಕಷ್ಟು ಸಿದ್ದತೆಗಳು ಅಗತ್ಯವಿದೆ. ದೇಶ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದು ಈ ಸುದೀರ್ಘ ಅವಧಿಯಲ್ಲಿ ಎದುರಾದ ಸವಾಲುಗಳನ್ನು ನಮ್ಮ ಭದ್ರತಾ ಪಡೆಗಳು ಮೆಟ್ಟಿ ನಿಂತಿವೆ ಅಂದರು.
ಸ್ವಾತಂತ್ರ್ಯ ಪಡೆದ ದಿನದಿಂದ ಶತ್ರು ರಾಷ್ಟ್ರಗಳು ಪರಿಸ್ಥಿತಿಯ ಲಾಭ ಪಡೆದು ಭಾರತದಲ್ಲಿ ಅಸ್ಥಿರತೆ ಉಂಟು ಮಾಡಲು ಹವಣಿಸುತ್ತಿವೆ. ಆದೆ ನಮ್ಮ ರಕ್ಷಣಾ ಪಡೆಗಳು ಈ ಕುತಂತ್ರಗಳಿಗೆ ದಿಟ್ಟ ಉತ್ತರ ನೀಡಿವೆ ಅಂದರು. ಇದೇ ವೇಳೆ ಪಾಕಿಸ್ತಾನ ವಿರುದ್ಧ ಗುಡುಗಿದ ರಾಜ್ ನಾಥ್ ಸಿಂಗ್, ಭಾರತದ ವಿರುದ್ಧ ಎರಡು ಯುದ್ದಗಳಲ್ಲಿ ಸೋಲು ಅನುಭವಿಸಿರುವ ಪಾಕಿಸ್ತಾನ ಈಗ ಛಾಯಾ ಸಮರ ( proxy war ) ಪ್ರಾರಂಭಿಸಿದೆ.
ಭಯೋತ್ಪಾದನೆ ಆ ರಾಷ್ಟ್ರದ ನೀತಿಯಾಗಿದ್ದು, ಆ ರಾಷ್ಟ್ರ ಉಗ್ರರಿಗೆ ಹಣ, ಶಸ್ತ್ರಾಸ್ತ್ರ, ತರಬೇತಿ ಒದಗಿಸಿ ಭಾರತದ ವಿರುದ್ಧ ಯುದ್ದ ಮಾಡಿಸುತ್ತಿದೆ ಎಂದು ದೂರಿದ ಆರೋಪಿಸಿದ ರಾಜ್ ನಾಥ್ ಸಿಂಗ್, ಭಯೋತ್ಪಾದನೆಯನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಭಾರತ ತನ್ನ ನೆಲದಲ್ಲಿ ಮಾತ್ರವಲ್ಲದೆ ಅವರದ್ದೇ ನೆಲದಲ್ಲೂ ಕಾರ್ಯಾಚರಣೆ ನಡೆಸಲು ಹಿಂಜರಿಯುವುದಿಲ್ಲ ಎಂದು ನೇರವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
Discussion about this post