ಬೆಂಗಳೂರು : ಕೊರೋನಾ ಸೋಂಕಿನ ಎರಡನೆ ಅಲೆಯ ಭಯ ಪ್ರಾರಂಭವಾಗಿದೆ. ಇನ್ನೊಂದೆರೆಡು ವಾರಗಳಲ್ಲಿ ಕರ್ನಾಟಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಮೇಲುಗೈ ಸಾಧಿಸದಿದ್ರೆ ಸಂಕಷ್ಟ ಗ್ಯಾರಂಟಿ.
ಒಂದು ಕಡೆ ಸಂಜೀವಿನಿಯಂತಿರುವ ಕೊರೋನಾ ಲಸಿಕೆ ಪಡೆಯಲು ಜನರ ಉದಾಸೀನ ಮತ್ತೊಂದು ಕಡೆ ಕೊರೋನಾ ತಡೆ ಸಲುವಾಗಿ ವಿಧಿಸಿರುವ ನಿಯಮಗಳನ್ನು ಪಾಲಿಸಲೂ ಜನ ಸಿದ್ದರಿಲ್ಲ. ಅಂದ ಮೇಲೆ ಕೊರೋನಾ ನಿಯಂತ್ರಣಕ್ಕೆ ಬರುವುದಾದರೂ ಹೇಗೆ.
ಮತ್ತೊಂದು ಕಡೆ ಕೊರೋನಾ ನಿಯಂತ್ರಣ ಸಲುವಾಗಿ ರಾಜ್ಯ ಸರ್ಕಾರ ಹಲವು ನಿಯಮಗಳನ್ನು ಜಾರಿಗೆ ತಂದಿದೆ.
ಮದುವೆ ಸಮಾರಂಭಗಳಲ್ಲಿ ಇಷ್ಟೆ ಜನ ಇರಬೇಕು, ಓಪನ್ ಜಾಗವಾದ್ರೆ ಇಷ್ಟು ಜನ ಇರಬಹುದು ಎಂದು ಹೇಳಲಾಗಿದೆ.
ಅಂತ್ಯಕ್ರಿಯೆ, ಉತ್ತರಕ್ರಿಯೆ ಕಾರ್ಯಕ್ರಮಗಳಿಗೆ ಇಷ್ಟೇ ಜನ ಇರಬೇಕು ಎಂದು ಆದೇಶ ಹೊರಡಿಸಲಾಗಿದೆ.
ಆದರೆ ಕೊರೋನಾ ಸೋಂಕು ಹರಡಬಹುದಾದ ಚಿತ್ರಮಂದಿರಗಳ ಬಗ್ಗೆ ರಾಜ್ಯ ಸರ್ಕಾರ ತಲೆಯನ್ನೇ ಕೆಡಿಸಿಕೊಂಡಿಲ್ಲ.
ಸಾಲು ಸಾಲು ಚಿತ್ರಗಳು ಬಿಡುಗಡೆಯಾದ ಕಾರಣದಿಂದ ಕೊರೋನಾ ಸೋಂಕಿತರು ಹೆಚ್ಚಿರಬಹುದೇ ಅನ್ನುವ ಬಗ್ಗೆ ಸರ್ಕಾರ ಅಧ್ಯಯನವನ್ನೇ ಮಾಡಿಲ್ಲ.
ಸಂಕಷ್ಟ ಕಾಲದಲ್ಲಿ ಎಲ್ಲರೂ ಬದುಕುಬೇಕು, ಹೀಗಾಗಿ ಶೇ50ರಷ್ಟು ಚಿತ್ರಮಂದಿರಗಳನ್ನು ಭರ್ತಿ ಮಾಡೋದು ಸೂಕ್ತ. ಆದರೆ ಶೇ 100ರಷ್ಟು ಭರ್ತಿ ಮಾಡೋದರಿಂದ ಆಗಬಹುದಾದ ಅನಾಹುತಗಳ ಬಗ್ಗೆ ರಾಜ್ಯ ಸರ್ಕಾರ ತಲೆಯನ್ನೇ ಕೆಡಿಸಿಕೊಂಡಿಲ್ಲ.
ಮದುವೆ, ಮುಂಜಿ, ಜಾತ್ರೆ, ಅಂತ್ಯ ಸಂಸ್ಕಾರಕ್ಕೆ ಜನ ಇಂತಿಷ್ಟೇ ಸೇರಬೇಕು ಎಂದು ಹೇಳಿರುವ ಸರ್ಕಾರ ಚಿತ್ರಮಂದಿರಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಎಲ್ಲವನ್ನೂ ಮರೆತು ಬಿಟ್ಟಿದೆ.
ಈ ನಡುವೆ ಕೊರೋನಾ ನಿಯಂತ್ರಣ ಸಲುವಾಗಿ ಚಿತ್ರಮಂದಿರಗಳಲ್ಲಿ ಶೇ 50ರಷ್ಟು ಟಿಕೆಟ್ ಮಾರಾಟಕ್ಕೆ ಅನುಮತಿ ಕೊಡಿ ಎಂದು ಬಿಬಿಎಂಪಿ ಮಾಡಿದ್ದ ಶಿಫಾರಸನ್ನು ಸಿಎಂ ಯಡಿಯೂರಪ್ಪ ತಿರಸ್ಕರಿಸಿದ್ದಾರೆ.
ಹೀಗಾಗಿ ಈ ಹಿಂದಿನಂತೆ ಚಿತ್ರಮಂದಿರಗಳು ಶೇ100ರಷ್ಟು ಭರ್ತಿಯಾಗಲಿದೆ. ಅಲ್ಲಿಗೆ ನಾಡಿಗೊಂದು ಕಾನೂನು ಚಿತ್ರಮಂದಿರಕ್ಕೊಂದು ಕಾನೂನು ಅಂದಾಯ್ತು.
ಚಿತ್ರರಂಗದ ನಾಯಕರ ಒತ್ತಡಕ್ಕೆ ಮಣಿದು. ಹೈ ಬಜೆಟ್ ಸಿನಿಮಾಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ ಅನ್ನುವ ಒಂದೇ ಒಂದು ಕಾರಣಕ್ಕೆ ಶೇ 100ರಷ್ಟು ಚಿತ್ರಮಂದಿರ ತುಂಬಲು ಅನುಮತಿ ಕೊಟ್ರೆ ನಾಳೆ ಕೊರೋನಾ ಸೋಂಕು ಹರಡಲಾರಂಭಿಸಿದ್ರೆ ಯಾರು ಹೊಣೆ.
Discussion about this post