ಮೇಷ
ಮಕ್ಕಳೊಂದಿಗೆ ಹೆಚ್ಚು ಕಾಲ ಕಳೆಯಿರಿ ಅದು ನಿಮಗೆ ಅದ್ಭುತ ಚಿಕಿತ್ಸೆಯ ಅನುಭವ ನೀಡುತ್ತದೆ. ಇಂದು ನಿಮಗೆ ಆದಾಯದ ಮೂಲ ಗೋಚರಿಸುವ ಸಾಧ್ಯತೆ ಇದೆ. ಹಣ ಬಂತು ಬಂತು ಅಂತಾ ಸಂಭ್ರಮಿಸಬೇಡಿ, ದಾನಕ್ಕಾಗಿ ಸ್ವಲ್ಪ ಮೀಸಲಿಡಿ, ಇದರಿಂದ ನಿಮಗೆ ಒಳಿತಾಗಲಿದೆ. ಜೊತೆಗೆ ಇದರಿಂದ ನಿಮಗೆ ಮಾನಸಿಕ ಶಾಂತಿ ಸಿಗುತ್ತದೆ. ಕೆಲವರ ಬದುಕಿನಲ್ಲಿ ಬರುವ ಹೊಸ ಪ್ರಣಯ ಪ್ರಸ್ತಾರ ನಿಮ್ಮ ಜೀವನವನ್ನು ಅರಳಿಸುತ್ತದೆ. ನಿಮ್ಮ ಮನೆಯಲ್ಲಿ ಚದುರಿದ ವಸ್ತುಗಳಿದ್ದರೆ ಅದನ್ನು ಸರಿಯಾಗಿ ಜೋಡಿಸಲು ಇಂದು ಒಳ್ಳೆಯ ದಿನ.
ಹಳದಿ ನಿಮಗೆ ಇಂದಿನ ಬಣ್ಣವಾಗಿದ್ದು ಹಳದಿ ಬೇಳೆಯನ್ನು ಹೆಚ್ಚು ಸೇವಿಸುವುದರಿಂದ ಆರೋಗ್ಯವು ಉತ್ತಮವಾಗುತ್ತದೆ. ಜೊತೆಗೆ ಅರಶಿನ, ಶ್ರೀಗಂಧವನ್ನು ಕೂಡಾ ಮಿತವಾಗಿ ಸೇವಿಸಬಹುದು.
ವೃಷಭ
ನಿಮ್ಮನ್ನು ಪ್ರೇರೇಪಿಸುವ ನಿಮ್ಮ ಭಾವನೆಗಳನ್ನು ಗುರುತಿಸಿ. ನಿಮ್ಮಲ್ಲಿರುವ ಭಯ, ಅನುಮಾನ, ಕೋಪ, ದುರಾಸೆಯ ಆಲೋಚನೆಗಳನ್ನು ಬಿಡಿ. ಉತ್ತಮ ಆದಾಯದ ಭರವಸೆ ನಿಮ್ಮ ರಾಶಿಯಲ್ಲಿದ್ದು ಪ್ರಯತ್ನಿಸಿದರೆ ಆಪ್ತರೊಬ್ಬರ ಸಹಾಯ ದೊರಕಲಿದೆ. ಈ ಮೂಲಕ ನಿಮ್ಮ ವ್ಯಾಪಾರದವನ್ನು ಅಭಿವೃದ್ಧಿಗೊಳಿಸಬಹುದು. ನಂಬಿಕೆಯಿಡಬಹುದಾದ ಜನರೊಂದಿಗೆ ಮಾತ್ರ ವ್ಯವಹರಿಸಿ. ಕಾಣಿಸುತ್ತದೆ.
ಬೆಳ್ಳಿಯ ಚಮಚ ಅಥವಾ ಬೆಳ್ಳಿ ತಟ್ಟೆಯಲ್ಲಿ ಆಹಾರ ಸೇವಿಸುವುದು ಆರೋಗ್ಯಕ್ಕೆ ಉತ್ತಮ
ಮಿಥುನ
ಯೋಗ ಮತ್ತು ಧ್ಯಾನದಿಂದ ಒಳ್ಳೆಯ ದೇಹರಚನೆ ಕಾಯ್ದುಕೊಳ್ಳಲು ಸಾಧ್ಯವಿದೆ. ಇದು ನಿಮ್ಮನ್ನು ಮಾನಸಿಕವಾಗಿ ಸಧೃಢವಾಗಿರಿಸುತ್ತದೆ. ಇಂದು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆ ಇದೆ. ಸಮಾಜದಲ್ಲಿ ಪ್ರಭಾವಿ ಮತ್ತು ಪ್ರಮುಖ ಜನರೊಡನೆ ನಿಮ್ಮ ಬಾಂಧವ್ಯ ವೃದ್ಧಿಸಲಿದೆ. ಪ್ರೀತಿ ಪಾತ್ರರಿಗೆ ಒಂದಿಷ್ಟು ಸಮಯ ಮೀಸಲಿರಿಸಿ.
ವೃತ್ತಿ ಪ್ರಗತಿಗಾಗಿ, ಕೇತುವಿನ ಹನ್ನೆರಡು ಹೆಸರುಗಳನ್ನು ಜಪಿಸಿ
ಕಟಕ
ಕುಡಿಯುವ ಹಾಗೂ ತಿನ್ನುವಾಗ ಎಚ್ಚರದಿಂದಿರಿ. ಅಸಡ್ಡೆ ನಿಮಗೆ ಅನಾರೋಗ್ಯ ತರಬಹುದು. ಸಂಶಯಾಸ್ಪದ ಹಣಕಾಸು ವ್ಯವಹಾರಗಳಲ್ಲಿ ಸಿಲುಕಿಕೊಳ್ಳದಂತೆ ಎಚ್ಚರಿಕೆ ವಹಿಸಿ. ಏಕಪಕ್ಷೀಯ ನಿರ್ಧಾರ ನಿಮಗೆ ಹಾನಿ ತರಲಿದೆ. ಸೃಜನಶೀಲ ಕ್ಷೇತ್ರಗಳಲ್ಲಿರುವವರು ಬಹಳ ದಿನಗಳಿಂದ ಕಾಯುತ್ತಿದ್ದ ಅವಕಾಶ ಇಂದು ಸಿಗಲಿದೆ. ನಿಮ್ಮ ಸಂಗಾತಿ ನಿಮಗೆ ಕೆಟ್ಟ ಸುದ್ದಿಯೊಂದನ್ನು ಹೇಳುವ ಸಾಧ್ಯತೆಗಳಿದೆ,
ಮಕ್ಕಳಿಗೆ ಹಾಲು ಮತ್ತು ಅಕ್ಕಿಯಿಂದ ತಯಾರಿಸಿದ ಖೀರನ್ನು ವಿತರಿಸುವವರಿಂದ ಆರ್ಥಿಕ ಪ್ರಗತಿಯನ್ನು ಕಾಣಬಹುದು
ಸಿಂಹ
ಸ್ವಲ್ಪ ವ್ಯಾಯಾಮದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ನಿಮ್ಮ ಬಗ್ಗೆ ನೀವೇ ಒಳ್ಳೆಯ ಅಭಿಪ್ರಾಯ ಇಟ್ಟುಕೊಳ್ಳುವುದು ಮುಖ್ಯ. ಇವತ್ತು ಮಾತ್ರವಲ್ಲ ದಿನವೂ ಇದನ್ನೂ ರೂಢಿಸಿಕೊಳ್ಳಿ. ತಂದೆಯಿಂದ ಬಂದ ಸಲಹೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ.ನಿಮ್ಮ ಕೆಲಸದ ಪರಿಸರ ಇಂದು ನಿಮ್ಮಲ್ಲಿ ಪಾಸಿಟಿವ್ ಎನರ್ಜಿ ಚುಂಬಲಿದೆ.
ಕಾಗೆಗಳಿಗೆ ತಿನಿಸುವುದರಿಂದ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.
ಕನ್ಯಾ
ಇತ್ತೀಚೆಗೆ ನೀವು ಬಹಳಷ್ಟು ಮಾನಸಿಕ ಒತ್ತಡ ಎದುರಿಸುತ್ತಿದ್ದೀರಿ. ಇದರಿಂದ ಮುಕ್ತಿ ಪಡೆಯಲು ಇಂದು ವಿಶ್ರಾಂತಿ ತೆಗೆದುಕೊಳ್ಳಿ. ಮನೋರಂಜನೆ ನಿಮಗೆ ಮನೋಲ್ಲಾಸ ಮತ್ತು ಹಾಗೂ ವಿಶ್ರಾಂತಿ ನೀಡಲಿದೆ. ಹಿರಿಯರ ಆಶೀರ್ವಾದವನ್ನು ಇಂದು ತೆಗೆದುಕೊಳ್ಳಿ. ಪೋಷಕರಿಗೆ ಹೇಳಬೇಕಾಗಿರು ವಿಷಯಗಳನ್ನು ತಿಳಿಸಿ. ಅವರ ಬೆಂಬಲ ಇಂದು ನಿಮಗೆ ಸಂಪೂರ್ಣ ಇರಲಿದೆ. ಸಹೋದ್ಯೋಗಿಗಳು ಹಾಗೂ ಬಾಸ್ ಕಡೆಯಿಂದ ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಉದ್ಯಮಿಗಳಿಗೂ ಇಂದು ವ್ಯಾಪಾರದಲ್ಲಿ ಲಾಭ ಸಿಗಲಿದೆ.
ಸೂರ್ಯೋದಯದ ಸಮಯದಲ್ಲಿ ಪ್ರಾಣಾಯಾಮವನ್ನು ಮಾಡುವುದರಿಂದ ಅರೋಗ್ಯ ಉತ್ತಮವಾಗಿರುತ್ತದೆ
ತುಲಾ
ದೇಹದ ಯಾವುದಾದರೂ ಭಾಗಕ್ಕೆ ಗಾಯಗಳಾಗುವ ಸಾಧ್ಯತೆಗಳಿದೆ. ಸಾಧ್ಯವಾದಷ್ಟು ಎಚ್ಚರವಾಗಿರಿ. ನಿಮ್ಮ ಒಳ್ಳೆಯ ನಿಲುವು ಕೇವಲ ನಿಮ್ಮ ವ್ಯಕ್ತಿತ್ವವನ್ನು ವೃದ್ಧಿಸುವುದು ಮಾತ್ರವಲ್ಲದೆ ವಿಶ್ವಾಸಾರ್ಹತೆಯನ್ನು ಹೆಚ್ಚು ಮಾಡಲಿದೆ. ಜಂಟಿ ಯೋಜನೆಗಳು ಮತ್ತು ಸಂಶಯಾಸ್ಪದ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡಬೇಡಿ. ನಿಮ್ಮ ಪೋಷಕರ ಆರೋಗ್ಯ ಚಿಂತೆ ನಿಮಗೆ ಕಾಡಲಿದೆ. ನಿಮ್ಮ ಕತ್ತಲೆಯ ಜೀವನ ನಿಮ್ಮ ಸಂಗಾತಿಗೆ ಒತ್ತಡ ತರಬಹುದು. ನೀವು ನಿಮ್ಮ ಸಂಗಾತಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಇದೆ. ನೀವು ದಿನವಿಡೀ ಅಸಮಾಧಾನದಿಂದ ಇರುತ್ತೀರಿ.
ರಾಮ್ಚರಿತಮಾನಸದ ಸುಂದರಕಾಂಡವನ್ನು ನಿಯಮಿತವಾಗಿ ಪಠಿಸುವುದನ್ನು ರೂಢಿಸುವುದರಿಂದ ಕುಟುಂಬ ಜೀವನ ಸುಖಮಯವಾಗಿರುತ್ತದೆ.
ವೃಶ್ಚಿಕ
ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಮದ್ಯಪಾನದ ಅಭ್ಯಾಸವಿದ್ದರೆ ಇಂದು ಅದನ್ನು ತ್ಯಜಿಸಿ. ಸ್ನೇಹಿತರ ಸಹಾಯದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರೀತಿಯಲ್ಲಿ ನಿರಾಶೆ ಕಾದಿದೆ. ನಿಮ್ಮ ಕೆಲಸದಲ್ಲಿನ ತಪ್ಪನ್ನು ಒಪ್ಪಿಕೊಳ್ಳುವುದು ನಿಮ್ಮ ಪರವಾಗಿ ಕೆಲಸ ಮಾಡುತ್ತದೆ. ಆದರೆ ನೀವು ಅದನ್ನು ಹೇಗೆ ಸುಧಾರಿಸಬಹುದೆಂದು ವಿಶ್ಲೇಷಿಸಬೇಕು. ನೀವು ಹಾನಿಯುಂಟುಮಾಡಿದವರಲ್ಲಿ ಕ್ಷಮೆಯಾಚಿಸಬೇಕು. ಎಲ್ಲರೂ ನಿಮ್ಮ ನೆರೆಹೊರೆಯವರು ನಿಮ್ಮ ವೈವಾಹಿಕ ಜೀವನಕ್ಕೆ ತೊಂದರೆ ಕೊಡಲು ಪ್ರಯತ್ನಿಸಬಹುದು
ಬಿಳಿ ಹೂವು ಮತ್ತು ನಾಣ್ಯವನ್ನು ಹರಿವ ನೀರಿನಲ್ಲಿ ಬಿಡುವುದರಿಂದ ಅರೋಗ್ಯ ಉತ್ತಮವಾಗಿರುತ್ತದೆ.
ಧನು
ನಿಮ್ಮ ಬಾಲ್ಯದ ನೆನಪುಗಳು ನಿಮ್ಮನ್ನು ಆವರಿಸಿಕೊಳ್ಳುತ್ತವೆ. ಇದರಿಂದ ಮಾನಸಿಕ ಒತ್ತಡ ಗ್ಯಾರಂಟಿ. ನಿಮ್ಮಲ್ಲಿರುವ ಸಾಮರ್ಥ್ಯವನ್ನು ನೀವು ಕಳೆದುಕೊಂಡಿದ್ದೀರಿ ಅನ್ನುವುದು ನಿಮ್ಮ ಭಾವನೆ. ಮತ್ತೆ ಸಾಮರ್ಥ್ಯ ವೃದ್ಧಿಗೆ ಪ್ರಯತ್ನಿಸಿ ಗೆಲವು ನಿಮಗೆ ಸಿಗಲಿದೆ. ಆಸಕ್ತಿದಾಯಕ ಅನ್ನಿಸುವ ವ್ಯಕ್ತಿಯನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗೆ ಹೋಗುತ್ತಿರುವವರು ಶಾಂತವಾಗಿರಬೇಕು. ಪರೀಕ್ಷೆಯ ಭಯಕ್ಕೆ ಒಳಗಾಗಬೇಡಿ.
ಕೆಂಪು ಬಣ್ಣದ ಬಾಟಲಿಯಲ್ಲಿ ನೀರು ತುಂಬಿಸಿ ಬಿಸಿಲಿನಲ್ಲಿ ಇಡಿ ಮತ್ತು ನಂತರ ಆ ನೀರನ್ನು ಸೇವಿಸುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ.
ಮಕರ
ನಿಮ್ಮ ಇತರರನ್ನು ಶ್ಲಾಘಿಸುವ ಮೂಲಕ ಅವರ ಯಶಸ್ಸನ್ನು ಆನಂದಿಸುವ ಸಾಧ್ಯತೆಗಳಿವೆ. ನೀವು ವಿವಾಹಿತರಾಗಿದ್ದರೆ ನಿಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಏಕೆಂದರೆ ನೀವು ಅದನ್ನು ಮಾಡದಿದ್ದರೆ ಅವರ ಆರೋಗ್ಯವು ಹದಗೆಡಬಹುದು ಹಾಗೂ ಅವರ ಆರೋಗ್ಯದ ಮೇಲೆ ಬಹಳಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ.ಇಂದು ನೀವು ಯಾವುದೊ ಹೊಸ ಪುಸ್ತಕವನ್ನು ಖರೀದಿಸಿ,
ಆರ್ಥಿಕ ಪರಿಸ್ಥಿತಿ ವೃದ್ಧಿಗಾಗಿ ಕೇಸರಿ ತಿಲಕವನ್ನು ಹಣೆ ಮತ್ತು ಹೊಕ್ಕುಳದ ಮೇಲೆ ಹಚ್ಚಿ
ಕುಂಭ
ಜಂಟಿ ಯೋಜನೆಗಳು ಮತ್ತು ಸಂಶಯಾಸ್ಪದ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡಬೇಡಿ. ನೆರೆಮನೆಯವರ ಜೊತಗಿನ ಜಗಳ ನಿಮ್ಮ ಮನಸ್ಸು ಕೆಡಿಸುತ್ತದೆ, ನೀವು ಸಹನೆ ಕಳೆದುಕೊಳ್ಳಬೇಡಿ, ಏಕೆಂದರೆ ಇದು ಬೆಂಕಿಗೆ ತುಪ್ಪ ಸುರಿಯುತ್ತದೆ. ನೀವು ಸಹಕರಿಸದಿದ್ದಲ್ಲಿ ಯಾರೂ ನಿಮ್ಮ ಜೊತ ಜಗಳವಾಡಲು ಸಾಧ್ಯವಿಲ್ಲ. ನೀವು ದೀರ್ಘಕಾಲದ ಪ್ರಯೋಜನಗಳನ್ನು ಹೊಂದಿರುವ ಯೋಜನೆಗಳ ಮೇಲೆ ಕೆಲಸ ಮಾಡಬೇಕು. ನೀವು ಸ್ನೇಹಿತರೊಬ್ಬನೊಂದಿಗೆ ಇಂದು ಸಮಯವನ್ನು ಕಳೆಯಬಹುದು ಆದರೆ ಈ ಸಮಯದಲ್ಲಿ ನೀವು ಮದ್ಯಪಾನ ಸೇವಿಸುವುದನ್ನು ತಪ್ಪಿಸಬೇಕು.
ಯುವತಿಯರು ಮತ್ತು ಉದಾತ್ತ ಮಹಿಳೆಯರನ್ನು ಗೌರವಿಸುವುದರಿಂದ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ.
ಮೀನ
ಆರೋಗ್ಯದ ಆರೈಕೆ ಮಾಡಿಕೊಳ್ಳಿ ಮತ್ತು ಎಲ್ಲವನ್ನೂ ಹೊಂದಿಸಿ. ದಿನದ ಆರಂಭದಲ್ಲಿ ಇಂದು ನೀವು ಯಾವುದೇ ಆರ್ಥಿಕ ನಷ್ಟವನ್ನು ಹೊಂದಿರಬಹುದು.ಇದರಿಂದ ನಿಮ್ಮ ಪೂರ್ತಿ ದಿನ ಹದಗೆಡಬಹುದು. ಮಕ್ಕಳು ಹೆಚ್ಚು ಗಮನ ಬಯಸಿದರೂ ಬೆಂಬಲ ಮತ್ತು ಕಾಳಜಿಯಿಂದ ವರ್ತಿಸುತ್ತಾರೆ. ನಿಮ್ಮ ಸಂಪೂರ್ಣ ಹಾಗೂ ಪ್ರಶ್ನಾತೀತ ಪ್ರೀತಿ ಒಂದು ಜಾದುವಿನಂಥ ಸೃಜನಶೀಲ ಶಕ್ತಿಯನ್ನು ಹೊಂದಿದೆ. ವೃತ್ತಿಯಲ್ಲಿನ ನಿಮ್ಮ ಕೌಶಲ್ಯದ ಪರೀಕ್ಷೆ ನಡೆಯಲಿದೆ. ನೀವು ಬಯಸಿದ ಫಲಿತಾಂಶ ನೀಡಲು ನಿಮ್ಮ ಪ್ರಯತ್ನಗಳ ಮೇಲೆ ಗಮನ ಹರಿಸಬೇಕು.
ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಿ.
Discussion about this post