Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಮಾನ್ಯ ಕೇಂದ್ರ ಸಚಿವರೇ ನೀವು ಕೊಟ್ಟ ಹೇಳಿಕೆಗೂ…ಸ್ಪಷ್ಟನೆಗೂ ಸಂಬಂಧವೇ ಇಲ್ವಲ್ಲ….!

Radhakrishna Anegundi by Radhakrishna Anegundi
June 24, 2019
in ದೇಶ
Share on FacebookShare on TwitterWhatsAppTelegram

ನನ್ನ ಹೆಸರಿನೊಂದಿಗೆ ಗೌಡ ಎಂದು ಸೇರಿಸಿಕೊಂಡಿದ್ದಕ್ಕೆ ನಾನು ರಾಜ್ಯದ ಮುಖ್ಯಮಂತ್ರಿಯಾಗಿ, ಈಗ ಕೇಂದ್ರ ಸಚಿವನಾಗಿದ್ದೇನೆ. ಅದನ್ನು ಹೇಳಲು ನನಗೆ ಹಿಂಜರಿಕೆ, ನಾಚಿಕೆ ಇಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದರು.

RBL Bank ನಿಂದ ಬೆಸ್ಟ್ ಆಫರ್ ನೊಂದಿಗೆ ಕಾರ್ಡ್ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ

ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್‌ ಹಾಗೂ ಕೃಷಿಕ ಸಾಹಿತ್ಯಪರಿಷತ್ತು ಬೆಂಗಳೂರಿನ ಕನ್ನಡ ಸಾಹಿತ್ಯಪರಿಷತ್ತಿನಲ್ಲಿ ಆಯೋಜಿಸಿದ್ದ ‘ನಾಡಪ್ರಭು ಕೆಂಪೇಗೌಡ ಜಯಂತಿ’ ಹಾಗೂ ‘ಕೆಂಪೇಗೌಡರ ಯಲಹಂಕ ಸಂಸ್ಥಾನದ ಇತಿಹಾಸ ಮತ್ತು ಐತಿಹ್ಯದ ಬಗ್ಗೆ ವಿಚಾರ ಸಂಕಿರಣ’ ಸಮಾರಂಭ ಉದ್ಘಾಟಿಸಿ ಮಾತನಾಡಿದ್ದ ಅವರು ‘ಗೌಡ’ಎಂಬ ಹೆಸರು ಇದ್ದಿದ್ದಕ್ಕೆ ನನಗೆ ಮುಖ್ಯಮಂತ್ರಿ ಪದವಿ ಹಾಗೂ ಕೇಂದ್ರ ಮಂತ್ರಿ ಸ್ಥಾನ ಸಿಕ್ಕಿತ್ತು ಎಂದು ಹೇಳಿದ್ದರು.

dvs1

ನಾನೊಬ್ಬ ಗೌಡ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದಾಗ ಡಿ.ವಿ.ಸದಾನಂದ ಎಂದಿತ್ತು. ಆಗ ಸೋತಿದ್ದೆ. ಬಳಿಕ ಹೆಸರಿನ ಜತೆಗೆ ‘ಗೌಡ’ ಎಂದು ಸೇರಿಕೊಳ್ಳಲು ಕೆಲವರು ಸಲಹೆ ನೀಡಿದಾಗ ಡಿ.ವಿ.ಸದಾನಂದ ಗೌಡ ಎಂದು ಬದಲಾಯಿತು. ಆ ನಂತರದ ಚುನಾವಣೆಯಲ್ಲಿ ಗೆಲವು ಸಾಧಿಸಿದೆ. ರಾಜಕೀಯದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಸಮುದಾಯದ ಹೆಸರು ಕಾರಣವಾಗಿದೆ ಎಂದು ತಿಳಿಸಿದ್ದಾರೆ.

dvs2

ಒಂದು ನಿಟ್ಟಿನಲ್ಲಿ ಈ ಹೇಳಿಕೆ ನಿಜವಾಗಿರಬಹುದು. ಆದರೆ ಸದಾನಂದಗೌಡರು ಪ್ರತೀ ಸಲ ಗೆದ್ದದ್ದು ಬಿಜೆಪಿ ಅಲೆಯಲ್ಲಿ ಹೊರತು ಅವರ ಸಾಧನೆಗಳಿದ್ದ ಅಲ್ಲ ಅನ್ನುವುದು ಸ್ಪಷ್ಟ. ಹಾಗೇ ಅವರು ಗೆಲ್ಲಬಹುದಾಗಿದ್ದರೆ ಕರಾವಳಿಯನ್ನು ತೊರೆಯುವ ಅಗತ್ಯವೇ ಬರುತ್ತಿರಲಿಲ್ಲ.

ಹೀಗಾಗಿ ಸದಾನಂದಗೌಡರ ಹೇಳಿಕೆಗೆ ತೀವ್ರ ವಿರೋಧ ದಾಖಲಾಯ್ತು. ಈ ಬಾರಿಯಂತು ಸದಾನಂದಗೌಡರು ಬೆಂಗಳೂರು ಉತ್ತರದಲ್ಲಿ ಸೋಲುವುದು ಖಚಿತ ಎಂದಾಗಿತ್ತು. ಕಾಂಗ್ರೆಸ್ ನಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಕೃಷ್ಣ ಭೈರೇಗೌಡ ಗೆಲುವು ಗ್ಯಾರಂಟಿ ಎಂದಾಗಿತ್ತು. ಆದರೆ ಬೀಸಿದ ಮೋದಿ ಅಲೆಯಿಂದಾಗಿ ಸದಾನಂದಗೌಡರು ಗೆಲುವು ಖಂಡಿದ್ದರು.

https://clnk.in/iZo6

ಈ ನಡುವೆ ಸದಾನಂದಗೌಡರು ಕೊಟ್ಟ ಜಾತಿ ಹೇಳಿಕೆ ಬಿಜೆಪಿ ಕಾರ್ಯಕರ್ತರಲ್ಲೇ ತೀವ್ರ ಅಸಮಾಧಾನಕ್ಕೆ ಕಾರಣವಾಯ್ತು. ಕಮಲ ಪಾಳಯದೊಂದಿಗೆ ಗುರುತಿಸಿಕೊಂಡಿರುವ ಗೌಡ ಸಮುದಾಯದ ಕಾರ್ಯಕರ್ತರೇ ಸದಾನಂದಗೌಡರ ವಿರುದ್ಧ ತಿರುಗಿ ಬಿದ್ದರು.

https://clnk.in/iZpb

ಯಾವಾಗ ತಾನು ಕೊಟ್ಟ ಹೇಳಿಕೆ ಮೋದಿ, ಅಮಿತ್ ಶಾ ಕಿವಿಗೆ ತಲುಪುವುದು ಖಚಿತವಾಯ್ತೋ, ಕಳೆದ ಬಾರಿಯಂತೆ ಈ ಬಾರಿಯೂ ಸಿಕ್ಕ ಒಳ್ಳೆಯ ಖಾತೆಯೊಂದು ಕೈ ತಪ್ಪುವುದು ಖಚಿತ ಅನ್ನುವುದು ಗೊತ್ತಾಗುತ್ತಿದ್ದಂತೆ ಟ್ವೀಟ್ ಮಾಡಿ ತಾವು ಕೊಟ್ಟ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ನನ್ನ ಬಿಜೆಪಿ ಪಕ್ಷ , ನನ್ನ ಹೆತ್ತ ತಾಯಿ ಸಮಾನ.ಕುಗ್ರಾಮ ಮಂಡೆಕೋಲಿನಿಂದ ಬಂದ ಈ ಹುಡುಗನಿಗೆ ಪಕ್ಷ ಎಲ್ಲವನ್ನು ಕೊಟ್ಟಿದೆ .ನನ್ನ ಪಕ್ಷ ಒಕ್ಕಲಿಗ ಸಮಾಜಕ್ಕೆ ಉತ್ತಮ ಸ್ಥಾನಮಾನ ಪ್ರಾತಿನಿಧಿತ್ವ ವನ್ನು ನನ್ನ ಮೂಲಕ ಕೊಟ್ಟಿದೆ ಅನ್ನುವ ಮಾತನ್ನು ನಾನು ಹೆಮ್ಮೆಯಿಂದ ಕೇಳಿಕೊಂಡದ್ದನ್ನು ಬೇರೆ ರೀತಿ ಅರ್ಥೈಸಲಾಗಿದೆ. ನಾನಿಂದು ನಿರಂತರ 1/2

— Sadananda Gowda (@DVSadanandGowda) June 23, 2019

ಚುನಾವಣೆಗಳನ್ನು ಗೆಲ್ಲಲು ಜಾತ್ಯತೀತವಾಗಿ .ಪಕ್ಷಾತೀತವಾಗಿ ನನ್ನನ್ನು ಜನರು ಆಯ್ಕೆ ಮಾಡಲು ನನ್ನ ಪಕ್ಷ ಮತ್ತು ಮೋದಿಯವರ ನಾಯಕತ್ವವೇಕಾರಣ. ಮುಂದೆ ಜನ ನಮ್ಮನ್ನು ಗುರುತಿಸುವುದು .ಗೌರವಿಸುವುದು ಮೋದಿಯವರ ನೇತೃತ್ವದಲ್ಲಿ ನಾವು ಮಾಡುವ ಕೆಲಸದಿಂದ.2/2

— Sadananda Gowda (@DVSadanandGowda) June 23, 2019

ಆದರೆ ಅವರು ಕೊಟ್ಟಿರುವ ಸ್ಪಷ್ಟನೆಗೂ, ಈ ಹಿಂದೆ ಕೊಟ್ಟ ಜಾತಿ ಹೇಳಿಕೆಗೂ ಸಂಬಂಧವೇ ಇಲ್ಲ. ತಾವು ಕೊಟ್ಟ ಹೇಳಿಕೆಗೆ ಬದ್ಧರಾಗಿರಬೇಕಾಗಿದ್ದ ಸದಾನಂದಗೌಡರು ಕನಿಷ್ಟ ಪಕ್ಷ ವಿಷಾಧವನ್ನಾದರೂ ವ್ಯಕ್ತಪಡಿಸಬೇಕಿತ್ತು.

‘ಗೌಡ’ ಅನ್ನುವ ಪದದಿಂದ ಗೆಲುವು ಕಾಣಬೇಕಾದರೆ, ಅನೇಕ ಕಾಂಗ್ರೆಸ್ ನಾಯಕರು ಕೂಡಾ ಗೆಲ್ಲಬೇಕಿತ್ತು ತಾನೇ. ಹೋಗ್ಲಿ ಸದಾನಂದಗೌಡರ ಗೆಲುವಿಗೆ ಅದೊಂದು ಪದ ಕಾರಣವಾಗಿದ್ದರೆ ಸದಾನಂದಗೌಡರ ಪರವಾಗಿ ಬೇರೆ ಜಾತಿಯ ಕಾರ್ಯಕರ್ತರು ದುಡಿಯುವ ಅಗತ್ಯವಿಲ್ಲ ತಾನೇ.

PayTM Mall ಆಫರ್ ಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

ಹೀಗೆಲ್ಲಾ ಎಡವಟ್ಟು ಹೇಳಿಕೆ ಕೊಡುವ ಸದಾನಂದಗೌಡರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ ಪಕ್ಷ ಸಂಘಟನೆ ಕಾರ್ಯಕ್ಕೆ ಮೋದಿ ಹಾಗೂ ಅಮಿತ್ ಶಾ ಬಳಸಿಕೊಳ್ಳುವುದು ಒಳಿತು.

ಇಲ್ಲವಾದರೆ ಬೀಸುತ್ತಿರುವ ಮೋದಿ ಅಲೆಗೆ ಇವರೇ ತಡೆಗೋಡೆಯಾದರೆ ಅಚ್ಚರಿ ಇಲ್ಲ.

Tags: DVS
ShareTweetSendShare

Discussion about this post

Related News

Police station

Police station : ಪೊಲೀಸ್ ಠಾಣೆಯಲ್ಲಿ ವಿಡಿಯೋ ಚಿತ್ರೀಕರಣ ಅಪರಾಧವಲ್ಲ : ಬಾಂಬೆ ಹೈಕೋರ್ಟ್

karnataka election bjp secret team from delhi

Karnataka Election : ಕರ್ನಾಟಕಕ್ಕೆ ಬರುತ್ತಿದೆ ಬಿಜೆಪಿ ಸೀಕ್ರೆಟ್ ಟೀಮ್: ದೀಪಾವಳಿಗೆ ಸಿಗಲಿದ್ಯಾ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ

NDTV ಖರೀದಿಗಾಗಿ ಅದಾನಿ ಮಾಸ್ಟರ್ ಪ್ಲಾನ್ : ಮಾಧ್ಯಮ ಲೋಕದಲ್ಲಿ ಸಂಚಲನ ಮೂಡಿಸಿದ ನಡೆ

Youtube :ದೇಶ ವಿರೋಧಿ 8 ಯೂಟ್ಯೂಬ್ 1 ಫೇಸ್ ಬುಕ್ ಅಕೌಂಟ್ ಬಂದ್ : Ministry of I&Bಯಿಂದ ಆದೇಶ

Shrikant Tyagi : ಕಠಿಣ ಕ್ರಮ ಅಂದ್ರೆ ಇದಪ್ಪ : BJP ನಾಯಕನ ಮನೆಗೆ ಬುಲ್ಡೋಜರ್ ನುಗ್ಗಿಸಿದ ಯೋಗಿ

Agneepath naxal : ಅಗ್ನಿಪಥ ಹಿಂಸಾಚಾರದಲ್ಲಿ ನಕ್ಸಲ್ ಕೈವಾಡ

Amazon pressure cooker : ಕೆಟ್ಟು ಹೋದ ಕುಕ್ಕರ್ ಮಾರಿದ ಅಮೆಜಾನ್ 1 ಲಕ್ಷ ರೂಪಾಯಿ ದಂಡ

Karnataka BJP : ನಳಿನ್ ಕುಮಾರ್ ಕಟೀಲ್ ಗೆ ಕ್ಲಾಸ್ ತೆಗೆದುಕೊಂಡ ಅಮಿತ್ ಶಾ

Eliminate fastag & toll plaza : ಕೆಲ ವರ್ಷಗಳಲ್ಲಿ ಟೋಲ್ ಗೇಟ್ ಗಳೇ ಮಾಯ

Amit shah : ಶೋಭಾ ಕರಂದ್ಲಾಜೆ ಭೇಟಿ ಬೆನ್ನಲ್ಲೇ ಅಮಿತ್ ಶಾ ಕಚೇರಿಗೆ ದೌಡಾಯಿಸಿದ ನಳಿನ್ ಕುಮಾರ್

Latest News

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

Pen drive Arrest bengaluru-woman-loses-pen-drive-with-private-photos-blackmailer-demands

Pen drive Arrest : ರಸ್ತೆಯಲ್ಲಿ ಬಿದ್ದಿದ್ದ ಪೆನ್ ಡ್ರೈವ್ ಹೆಕ್ಕಿ ಕಾಸು ಸಂಪಾದಿಸಲು ಹೋದವನ ಬಂಧನ

tirumala

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್