ಮುಂಬೈ : ಕಾಂಗ್ರೆಸ್ ತಾಳಕ್ಕೆ ಕುಣಿಯುತ್ತಿದ್ದ ಶಿವಸೇನೆ ಮತ್ತೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಚಿಂತಿಸಿತ್ತು.
ಈ ಸಂಬಂಧ ಸೂಚನೆಯೊಂದನ್ನು ಕೊಟ್ಟಿದ್ದ ವಿಧಾನಸಭೆ ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಲೆ, ಮತ ಪತ್ರ ಬಳಸಿ ಚುನಾವಣೆ ನಡೆಸುವ ಕುರಿತು ಪರಿಶೀಲನೆ ನಡೆಸಿ ಕರಡು ರೂಪಿಸುವಂತೆ ಸೂಚಿಸಿದ್ದರು.
ಯಾವಾಗ ಈ ಬಗ್ಗೆ ವ್ಯಾಪಕ ಟೀಕೆ ಕೇಳಿ ಬಂತೋ, ಸ್ಪಷ್ಟನೆ ಕೊಟ್ಟಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಇವಿಎಂ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ರಾಜ್ಯ ಸರ್ಕಾರ ಮತಯಂತ್ರ ಚುನಾವಣೆಯನ್ನು ಬಯಸಿಲ್ಲ ಅಂದಿದ್ದಾರೆ.
ಪಟೋಲೆ ಆದೇಶ ಕುರಿತಂತೆ ಮಾತನಾಡಿರುವ ಅವರು ಸರ್ಕಾರ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆಯನ್ನು ಬಯಸೋದಿಲ್ಲ ಅಂದಿದ್ದಾರೆ.
ಈ ನಡುವೆ ಮತ್ತೊಂದು ಹೇಳಿಕೆ ಕೊಟ್ಟಿರುವ ಪಟೋಲೆ ಮತದಾರರಿಗೆ ಎರಡೂ ಅವಕಾಶಗಳಿರಬೇಕು.ಇವಿಎಂ ಹಾಗೂ ಬ್ಯಾಲೆಟ್ ಪೇಪರ್ ಗಳ ಪೈಕಿ ಆಯ್ಕೆ ಮಾಡುವ ಅಧಿಕಾರ ಮತದಾರರಿಗೆ ಇರಬೇಕು ಎಂದು ಹೇಳಿದ್ದಾರೆ.
Discussion about this post