ಹಾಸನ : ಕ್ಲಾಸ್ ಮೇಟ್ ಗಳಿಂದ ಅವಮಾನನಾಯಿತು ಎಂದು ನೊಂದು ಕೊಂಡ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ.
ಮೃತಪಟ್ಟವನನ್ನು ಹಾಸನ ತಾಲೂಕಿನ ಹರುವನಹಳ್ಳಿ ಗ್ರಾಮದ ಹರ್ಷಿತ್ ಗೌಡ ಎಂದು ಗುರುತಿಸಲಾಗಿದೆ.
ಹಾಸನದ ಕೆಂಚಮಾರನಹಳ್ಳಿಯ ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತದ್ದ ಹರ್ಷಿತ್ ಗೌಡ, ಒಂದು ವರ್ಷದ ಹಿಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದ. ಇದೇ ಕಾರಣಕ್ಕಾಗಿ ಸ್ನೇಹಿತರು ಹರ್ಷಿತ್ ನನ್ನು ರೇಗಿಸುತ್ತಿದ್ದರು.
ಸ್ನೇಹಿತರ ತೊಂದರೆಯಿಂದ ಮನನೊಂದ ಹರ್ಷಿತ್ ಗೆಳೆಯರೊಂದಿಗೆ ಕಿತ್ತಾಟ ನಡೆಸಿದ್ದ. ಜೊತೆಗೆ ಈ ಘಟನೆಯಿಂದ ಮನನೊಂದಿದ್ದ ಹರ್ಷಿತ್ ಶಾಲೆ ತೊರೆದು ಮನೆಯಲ್ಲೇ ಇದ್ದ.
ಸೋಮವಾರ ದನ ಮೇಯಿಸಲು ಹೋದ ಹರ್ಷಿತ್ ಜಮೀನಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಬಂಧ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೊಂದು ಅತ್ಯಂತ ಸೂಕ್ಷ್ಮ ಘಟನೆಯಾಗಿದ್ದು, ಪೋಷಕರು ಮತ್ತು ಶಾಲಾ ಶಿಕ್ಷಕರು ಎಚ್ಚೆತ್ತುಕೊಳ್ಳಬೇಕಾಗಿತ್ತು. ಒಂದು ವೇಳೆ ಪರಿಸ್ಥಿತಿಯ ಗಂಭೀರತೆಯನ್ನು ಇವರು ಅರಿತುಕೊಂಡಿದ್ರೆ ಈ ದುರ್ಘಟನೆ ನಡೆಯುತ್ತಿರಲಿಲ್ಲ.
Discussion about this post