ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶ್ರೀರಾಮನಿದ್ದಂತೆ.ಅನಿತಾ ಕುಮಾರಸ್ವಾಮಿ ಸೀತಾ ಮಾತೆ,ಇನ್ನು ಲೋಕೋಪಯೋಗಿ ಸಚಿವ ರೇವಣ್ಣ ಆಂಜನೇಯನಿದ್ದಂತೆ.
ಇದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ವ್ಯಾಖ್ಯಾನ. ರಾಮನಗರದಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕು ಸ್ಥಾಪನೆಗೂ ಮುನ್ನ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಜಿಟಿಡಿ ಕುಮಾರಸ್ವಾಮಿಯವರನ್ನು ರಾಮನಿಗೆ ಹೋಲಿಸಿದರು. ಬಳಿಕ ರೇವಣ್ಣ ಅವರನ್ನು ಹನುಮಂತನಿಗೆ ಹೋಲಿಸಿ, ಅಂದು ರಾಮಾಯಣದಲ್ಲಿ ಹನುಮಂತ ಸಂಜೀವಿನಿ ಪರ್ವತ ಹೊತ್ತು. ಈಗ ರೇವಣ್ಣ ಹಲವು ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೊಗಳಿದರು.
ಕುಮಾರಸ್ವಾಮಿ ಅವರಿಗೆ ಮತ್ತಷ್ಟು ಬಲ ಬರಲು ಸೀತಾ ದೇವಿಯನ್ನು ಕರೆ ತರಬೇಕಾಗಿದೆ ಅನ್ನುವ ಮೂಲಕ ಮುಂಬರುವ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಕುಮಾರಸ್ವಾಮಿ ಹೊಗಳಿಕೆಗೆ ಅರ್ಹರಾದ ವ್ಯಕ್ತಿ ಅನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಂತ ಮರ್ಯಾದ ಪುರುಷೋತ್ತಮ ಎಂದು ಕರೆಸಿಕೊಂಡ ಶ್ರೀರಾಮನಿಗೆ ಹೋಲಿಕೆ ಮಾಡುವ ಉನ್ನತ ಶಿಕ್ಷಣ ಸಚಿವರಿಗೆ ಏನು ಹೇಳೋಣ. ಅದೇ 8ನೇ ತರಗತಿ ಕಲಿತವರು ಉನ್ನತ ಶಿಕ್ಷಣ ಸಚಿವರಾದರೆ ಹೀಗಾಗುತ್ತದೆ.
[youtube https://www.youtube.com/watch?v=YWrg0tAw4uE&w=640&h=480]
Discussion about this post