ಮಂಗಳೂರು : ಚಿನ್ನದ ಉಂಗುರ ಖರೀದಿಸುವ ನೆಪದಲ್ಲಿ ದ್ಯುವೆಲ್ಲರಿ ಶಾಪ್ ಗೆ ಬಂದು, ಬೆರಳಿಗೆ ಉಂಗುರ ಹಾಕಿ ಓಡಿ ಹೋದ ಕಳ್ಳನನ್ನು ಜ್ಯುವೆಲ್ಲರಿ ಮಾಲೀಕರೇ ಹಿಡಿದ ಘಟನೆ ಮಂಗಳೂರಿನ ರಥ ಬೀದಿಯಲ್ಲಿ ನಡೆದಿದೆ.
ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ರಥ ಬೀದಿಯಲ್ಲಿರುವ ಅರುಣ್ ಜ್ಯುವೆಲ್ಲರಿ ಶಾಪ್ ಗೆ ಆಭರಣ ಖರೀದಿಸುವ ನೆಪದಲ್ಲಿ ಬಂದ ಗ್ರಾಹಕ ವಿವಿಧ ಉಂಗುರಗಳನ್ನು ಪರಿಶೀಲಿಸಿದ್ದಾನೆ.
ಕೈಗೆ ತೂಕದ ಉಂಗುರ ಬರುತ್ತಲೇ, ಬೆರಳಿಗೆ ತೊಟ್ಟು ಓಡಿ ಹೋಗಿದ್ದಾನೆ.
ತಕ್ಷಣ ಎಚ್ಚೆತ್ತುಕೊಂಡ ಮಾಲೀಕರು, ಆಭರಣ ಅಂಗಡಿಯನ್ನು ಮರೆತು ಕಳ್ಳನ ಬೆನ್ನು ಬಿದ್ದಿದ್ದಾರೆ.
ಈ ವೇಳೆ ಅಂಗಡಿ ಮಾಲೀಕರ ಅರುಣ್ ಶೇಠ್ ಓಡುವುದನ್ನು ಕಂಡವರು, ಕಳ್ಳನ ಬೆನ್ನು ಹತ್ತಿ ಹಿಡಿದಿದ್ದಾರೆ.
ಇದೀಗ ಎಲ್ಲಾ ಸಾರ್ವಜನಿಕರ ಸೇವೆಯ ಬಳಿಕ ಪೊಲೀಸರಿಗೆ ಒಪ್ಪಿಸಲಾಗಿದೆ.
Discussion about this post