ಆರುವ ಮುನ್ನ ದೀಪ ಸಿಕ್ಕಾಪಟ್ಟೆ ಉರಿಯುತ್ತದೆಯಂತೆ. ಪರಿಸ್ಥಿತಿ ನೋಡಿದರೆ ಬಿಜೆಪಿ ಸಂಸದರಿಗೆ ಇದು ಕೊನೆಯ ಅವಕಾಶ ಅನ್ನುವಂತಿದೆ. ಮೋದಿಯ ಹೆಸರಿನಲ್ಲಿ ಗೆದ್ದ ಮಂದಿ ಗೆಲುವು ತಮ್ಮದೇ ಸಾಧನೆ ಅನ್ನುವಂತೆ ಹೇಳುತ್ತಿದ್ದಾರೆ.
ಮೋದಿ ಹೆಸರು ಮತ್ತು ಚಕ್ರವರ್ತಿ ಸೂಲಿಬೆಲೆ ಬಾಷಣದ ಕಾರಣದಿಂದ ಗೆದ್ದವರು ಇದೀಗ ಚಕ್ರರ್ತಿ ಸೂಲಿಬೆಲೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇಷ್ಟು ದಿನಗಳ ಕಾಲ ಸೂಲಿಬೆಲೆ ಬಿಜೆಪಿ ಸಂಸದರ ವಿರುದ್ಧ ದನಿ ಎತ್ತಿರಲಿಲ್ಲ. ಈಗ ಕೆಲಸ ಮಾಡಿಲ್ಲ ಅನ್ನುವ ಕಾರಣಕ್ಕೆ ಸೂಲಿಬೆಲೆ ಸತ್ಯ ಹೇಳಲಾರಂಭಿಸಿದ್ದಾರೆ. ಅದನ್ನು ಅರಗಿಸಿಕೊಳ್ಳುವ ಶಕ್ತಿ ಇಲ್ಲದ ಬಿಜೆಪಿ ಸಂಸದರು ತಮ್ಮ ಅಸಲಿ ಮುಖವನ್ನು ತೋರಿಸಲಾರಂಬಿಸಿದ್ದಾರೆ.
ನಿನ್ನೆಯಷ್ಟೇ ಸೂಲಿಬೆಲೆ ವಿರುದ್ಧ ಮಾತನಾಡಿದ್ದ ಸದಾನಂದಗೌಡ ದೇಶ ದ್ರೋಹಿ, ಅನ್ನುವ ಪಟ್ಟಿ ಕಟ್ಟಿದ್ದರು. ಅಷ್ಟು ಮಾತ್ರವಲ್ಲದೆ ಟ್ವೀಟರ್ ನಲ್ಲಿ ಸೂಲಿಬೆಲೆಗೆ ಬ್ಲಾಕ್ ಭಾಗ್ಯ ಕರುಣಿಸಿದ್ದರು.
ಇದೀಗ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಸರದಿ. ಮೈಸೂರಿನಲ್ಲಿ ಮಾತನಾಡಿರುವ ಪ್ರತಾಪ್ ಸಿಂಹ ಮೋದಿ ವಿರುದ್ಧ ಮಾತನಾಡುತ್ತಿರುವವರ ಭಾಷಣಕ್ಕೆ ಮೋದಿಯೇ ಬಂಡವಾಳ ಅವರಿಗೆ ಮೋದಿಯೇ ಐಡೆಂಟಿಟಿ. ಮೋದಿ ಹೆಸರು ಹೇಳದಿದ್ದರೆ ಅವರ ಭಾಷಣ ಕೇಳಲು ಯಾರು ಬರುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಅವರು ಭಾಷಣ ಪ್ರಾರಂಭಿಸುವ ಮುನ್ನ ಮೋದಿಯವರ ಆತ್ಮ ಕಥೆ ಬರೆದಿದ್ದೆ. ಅವರಿಂದ ನಾನು ಮೋದಿ ಪ್ರೇಮ ಕಲಿಯಬೇಕಾಗಿಲ್ಲ. ನಾನಾಗಲಿ ಕೆಲ ಸಂಸದರು ಮೋದಿಯವರಿಂದಲೇ ಗೆದ್ದಿರಬಹುದು. ಆದರೆ ರಮೇಶ ಜಿಗಗಿಣಗಿ, ನಳಿನ್ ಕುಮಾರ್ ಕಟೀಲ್, ಸದಾನಂದ ಗೌಡ ಮೋದಿಯವರು ರಾಷ್ಟ್ರ ರಾಜಕಾರಣಕ್ಕೆ ಬರುವ ಮುನ್ನವೇ ಸಂಸದರಾಗಿದ್ದರು ಅನ್ನುವ ಮೂಲಕ ಇವರ ಗೆಲುವಿಗೆ ಮೋದಿಯೇ ಕೊಡುಗೆ ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ನ್ಯಾಯ ಮಾರ್ಗದಲ್ಲಿ ಮೋದಿಯನ್ನು ಪ್ರಶ್ನಿಸಿದರೆ ಬಿಜೆಪಿ ಸಂಸದರಿಗೆ ಎಲ್ಲೆಲ್ಲಿ ಉರಿಯುತ್ತದೆಯೋ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಮೋದಿಯವರನ್ನು ಬಾಯಿಗೆ ಬಂದ ಹಾಗೇ ಜಾಡಿಸುತ್ತಿದ್ದ ವೇಳೆ ಇವರಿಗೆ ಉರಿದಿರಲಿಲ್ಲ ಅನ್ನುವುದು ದುರಂತ.
Discussion about this post