ಬೆಂಗಳೂರು : ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಒಂದೇ ಕುಟುಂಬದ ಐವರ ಸಾವಿನ ಪ್ರಕರಣ ಕುರಿತಂತೆ ಪೊಲೀಸರು ಒಂದು ಹಂತದ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ. ಈ ಪೈಕಿ ಮಗುವನ್ನು ಸಾಯಿಸಲಾಗಿದ್ದು, ಉಳಿದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಈ ನಡುವೆ ಪತ್ರಕರ್ತ ಹಲ್ಲೆಗೆರೆ ಶಂಕರ್ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದು, ಈ ಬಗ್ಗೆ ಪೊಲೀಸರು ಸಾಕ್ಷಿ ಸಂಗ್ರಹಿಸಿದ್ದಾರೆ. ಈ ನಡುವೆ ಪಂಚನಾಮೆ ಸಂದರ್ಭದಲ್ಲಿ ಮನೆಯಿಂದ ವಶಪಡಿಸಿಕೊಳ್ಳಲಾದ ಲ್ಯಾಪ್ ಟಾಪ್, ಮೊಬೈಲ್, ಡೆತ್ ನೋಟ್ ಗಳಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಬಗ್ಗೆ ಸಾಕ್ಷಿ ಸಿಕ್ಕಿದ್ದು, ಹೀಗಾಗಿ ಹಲ್ಲೆಗೆರೆ ಶಂಕರ್ ಮತ್ತು ಅಳಿಯಂದಿರಾದ ಸಿಂಚನಾರ ಪತಿ ಪ್ರವೀಣ್ ಹಾಗೂ ಸಿಂಧು ರಾಣಿ ಪತಿ ಶ್ರೀಕಾಂತ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಮೂರು ಲ್ಯಾಪ್ಟ್ಯಾಪ್, ನಾಲ್ಕು ಮೊಬೈಲ್ ಫೋನ್ ಹಾಗೂ 3 ಡೆತ್ನೋಟ್ ಪೊಲೀಸರು ವಶಪಡಿಸಿಕೊಂಡಿದ್ದರು.
ಲ್ಯಾಪ್ಟ್ಯಾಪ್ನಲ್ಲಿ ತಂದೆ ಶಂಕರ್ ಬಗ್ಗೆ ಪುತ್ರ ಸಿಕ್ಕಾಪಟ್ಟೆ ಆರೋಪಗಳನ್ನು ಮಾಡಿದ್ದಾನೆ ಅನ್ನಲಾಗಿದೆ. ಶಂಕರ್ ಅವರಿಗಿದ್ದ ಅಕ್ರಮ ಸಂಬಂಧ, ಅವರ ವ್ಯವಹಾರ ಲೋಕಗಳನ್ನು ವಿವರಿಸಲಾಗಿದೆ. ಈ ನಡುವೆ ಶಂಕರ್ ನಡೆಸುತ್ತಿದ್ದ ಅಬಕಾರಿ ಆಧೀಕ್ಷಕ ಹಾಗೂ ಶಾಸಕರ ಪತ್ರಿಕೆಯಿಂದ ಬರುವ ಆದಾಯದ ಬಗ್ಗೆ ಅನುಮಾನಗಳು ಎದ್ದಿದೆ.
Discussion about this post