ಶ್ರೀನಗರ : ಜಮ್ಮು-ಕಾಶ್ಮೀರದ ಸೊಪೋರ್ ನಲ್ಲಿ ಜೂನ್ 12 ರಂದು ಪೊಲೀಸ್ ಠಾಣೆ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. ಈ ಘಟನೆಯಲ್ಲಿ ಓರ್ವ ನಾಗರಿಕ ಮೃತಪಟ್ಟಿದ್ದು,ನಾಲ್ವರು ಪೊಲೀಸರು ಹಾಗೂ ಮೂವರು ನಾಗರಿಕರು ಗಾಯಗೊಂಡಿದ್ದರು.
ಇದಾದ ಬಳಿಕೆ ಉಗ್ರರ ರುಂಡ ಚೆಂಡಾಡಲು ಬೇಟೆಗೆ ಇಳಿದಿದ್ದ ಸೇನಾ ಪಡೆಗಳು ಇಂದು ಶ್ರೀನಗರದಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ. ಶ್ರೀನಗರದಲ್ಲಿ ಉಗ್ರರು ಅಡಗಿ ಕುಳಿತಿರುವ ಮಾಹಿತಿ ಸಿಕ್ಕ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿದ ಸೇನಾ ಪಡೆ ಈ ಕಾರ್ಯಾಚರಣೆ ನಡೆಸಿದೆ.
ಕಾರ್ಯಾಚರಣೆ ಸಂದರ್ಭದಲ್ಲಿ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ಮಾಡಿದ್ದು, ಪ್ರತಿಯಾಗಿ ಯೋಧರು ಗುಂಡಿನ ಮೂಲಕವೇ ಉತ್ತರ ಕೊಟ್ಟಿದಾರೆ. ಈ ವೇಳೆ ಓರ್ವ ಉಗ್ರನಿಗೆ ಯಮಪುರಿಯ ದಾರಿ ತೋರಿಸಲಾಗಿದೆ.
Discussion about this post