ರಾಗಿಣಿ, ಸಂಜನಾ ಸೇರಿ ಅನೇಕ ಸೆಲೆಬ್ರೆಟಿಗಳು ಡ್ರಗ್ಸ್ ದಂಧೆಯಲ್ಲಿ ಸಿಲುಕಿದ್ದರು ಅನ್ನುವ ಆರೋಪ ಈಗಾಗಲೇ ಕೇಳಿ ಬಂದಿದೆ. ಆ ಪ್ರಕರಣದ ತನಿಖೆ ಮುಕ್ತಾಯಗೊಂಡ ರೀತಿ ನೋಡಿದರೆ ಕರ್ನಾಟಕ ಡ್ರಗ್ಸ್ ಮುಕ್ತವಾಯ್ತು ಅನ್ನುವಂತಿತ್ತು. ಆದರೆ ಪ್ರಶಾಂತ್ ಸಂಬರಗಿ, ಇಂದ್ರಜಿತ್ ಹೇಳಿದಂತೆ ಬೆಂಗಳೂರಿನಲ್ಲಿ ಮತ್ತಷ್ಟು ಡ್ರಗ್ಸ್ ದಂಧೆಕೋರರಿದ್ದು, ಅವರ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ವಿಫಲರಾಗಿದ್ದರು. ಒಂದು ವೇಳೆ ಪೊಲೀಸರು ಡ್ರಗ್ಸ್ ದಂಧೆ ವಿರುದ್ಧ ಸರಿಯಾದ ಸಮರ ಸಾರಿರುತ್ತಿದ್ರೆ ಮತ್ತೊಂದು ಪರಪ್ಪನ ಆಗ್ರಹಾರ ಕಟ್ಟಬೇಕಾಗಿತ್ತು.
ಈ ನಡುವೆ ಗೋವಿಂದಪುರ ಡ್ರಗ್ಸ್ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದ್ದು. ಡ್ರಗ್ ಪೆಡ್ಲರ್ ಥಾಮಸ್ ಕುಲು ಜೊತೆ ಸಂಪರ್ಕದಲ್ಲಿದ್ದ ಸೆಲೆಬ್ರೆಟಿ, ಉದ್ಯಮಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂಬಂಧ ಈಗಾಗಲೇ ರಾಜಾಜಿನಗರ, ಪದ್ಮನಾಭನಗರ ಮತ್ತು ಬೆನ್ಸನ್ ಟೌನ್ನಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಡಿಜೆ ವಚನ್ ಚಿನ್ನಪ್ಪ, ಉದ್ಯಮಿ ಭರತ್, ಸೆಲಬ್ರಿಟಿ ಸೋನಿಯಾ ಅಗರವಾಲ್ ರನ್ನು ಬಂಧಿಸಿದ್ದಾರೆ.
ಭರತ್ ಬನಶಂಕರಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಸೋನಿಯಾ ಅಗರವಾಲ್ ಹೆಸರಿಗೆ ಆರ್ಗ್ಯಾನಿಕ್ ಉತ್ಪನ್ನಗಳ ಉದ್ಯಮ ಹಾಗೂ ಕಾಸ್ಮೆಟಿಕ್ ವಸ್ತುಗಳ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾಳೆ. ವಚನ್ ಚಿನ್ನಪ್ಪ ಹೆಸರೇ ಸೂಚಿಸುವಂತೆ ಡಿಜೆ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೀಗ ಮೂವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲು ಮುಂದಾಗಿರುವ ಪೊಲೀಸರು, ಸೋನಿಯಾ ಅಗರ್ ವಾಲ್ ಳನ್ನು ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಕೂರಿಸಿ ವಿಚಾರಣೆ ನಡೆಸಲಾಗುತ್ತಿದೆ. ವಚನ ಚನ್ನಪ್ಪನನ್ನು ಕೆಜೆ ಹಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ. ಭರತ್ ನನ್ನು ಗೋವಿಂದಪುರ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
Karnataka Police have arrested three persons, including a female celebrity in connection with a drug peddling case in Bengaluru after conducting simultaneous raids on their residences on Monday.
Discussion about this post