ಬೆಂಗಳೂರು : ಕೊರೋನಾ ಸೋಂಕು ಬಂದ ಬಳಿಕ ಖಾಸಗಿ ಆಸ್ಪತ್ರೆಗಳು ಆಡಿದ ಆಟ, ಮಾಡಿದ ಕಾಸಿಗೆ ಲೆಕ್ಕವಿಲ್ಲ. ಸಮಾಜ ಸೇವೆಯ ಪೋಸ್ ಕೊಟ್ಟ ಖಾಸಗಿ ಆಸ್ಪತ್ರೆ ಮಂದಿ ಬಡ ರೋಗಿಗಳ ರಕ್ತ ಹೀರಿದ್ದಾರೆ. ಕೊರೋನಾ ಸೋಂಕಿತರು ಖಾಸಗಿ ಆಸ್ಪತ್ರೆಗೆ ಆಡ್ಮಿಟ್ ಆದ್ರೂ ಅಂದ್ರೆ ಅವರಿಗೆ ಮಾರಿ ಹಬ್ಬ. ಇನ್ನು ಬಿಬಿಎಂಪಿಯಿಂದ ರೆಫರ್ ಆದ ಸೋಂಕಿತರು ಬಂದ್ರೆ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳು ಕೂಡಾ ಭಾಗಿಯಾಗಿದ್ದಾರೆ
ಇದೀಗ ಕೊರೋನಾ ಸೋಂಕಿನ ಎರಡನೆ ಅಲೆ ಶುರುವಾಗುತ್ತಿದ್ದಂತೆ ಮತ್ತೆ ಖಾಸಗಿ ಆಸ್ಪತ್ರೆಗಳ ಕಳ್ಳಾಟ ಪ್ರಾರಂಭವಾಗಿದೆ. ಹೀಗಾಗಿ ಸಿಕ್ಕಾಪಟ್ಟೆ ದೂರುಗಳು ಬಂದ ಹಿನ್ನಲೆಯಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ಮಧ್ಯರಾತ್ರಿ ಕಾರ್ಯಾಚರಣೆಗೆ ಇಳಿದಿದ್ದಾರೆ.
ಇಲಾಖೆಯ ಅಧಿಕಾರಿಗಳ ಜೊತೆಗೆ ಕೊಲಂಬಿಯಾ ಆಸ್ಪತ್ರೆಗೆ ದಾಳಿ ನಡೆಸಿದ ಸಚಿವರು ಆಸ್ಪತ್ರೆಗೆ ದಾಖಲಾಗಿರುವ ಕೊರೋನಾ ಸೋಂಕಿತರ ವಿವರಗಳನ್ನು ಕೊಡುವಂತೆ ಸೂಚಿಸಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಈ ವಿವರಗಳನ್ನು ಕೊಡಲು ಪರದಾಡಿದ್ದಾರೆ. ಹೋಗ್ಲಿ ಗುಣಮುಖರಾಗಿ ಮನೆಗೆ ಹೋಗಿರುವವರ ವಿವರ ಕೊಡಿ, ಅವರಿಗೆಷ್ಟು ಬಿಲ್ ಮಾಡಿದ್ದೀರಿ ಅಂದ್ರೆ ಅದಕ್ಕೂ ಸಿಬ್ಬಂದಿ ಬಳಿ ಉತ್ತರವಿರಲಿಲ್ಲ. ಒಟ್ಟಾಕೆ ಆಸ್ಪತ್ರೆಯ ಸಿಬ್ಬಂದಿಯ ನಡವಳಿಕೆ ನೋಡಿದ್ರೆ ಕೊರೋನಾ ಹೆಸರಿನಲ್ಲಿ ಕೊಲಂಬಿಯಾ ಎಷ್ಯಾ ಕೋಟಿ ಕೋಟಿ ಬಾಚುತ್ತಿದೆ ಅನ್ನುವುದು ಸ್ಪಷ್ಟವಾಗಿತ್ತು.
ಇನ್ನು ಕೊರೋನಾ ಸೋಂಕಿತರಿಗೆ ಎಷ್ಟು ಬೆಡ್ ಮೀಸಲಿಟ್ಟಿದ್ದೀರಿ ಅಂದ್ರೆ ಅದಕ್ಕೂ ಆಸ್ಪತ್ರೆ ಸಿಬ್ಬಂದಿ ಬಳಿ ಉತ್ತರವಿರಲಿಲ್ಲ. ಪಾಪ ಆರೋಗ್ಯ ಸಚಿವರ ಈ ವಿವರಗಳಿಗಾಗಿ ಒಂದು ಗಂಟೆಗೂ ಹೆಚ್ಚು ಕಾಲ ಕಾದಿದ್ದಾರೆ. ಆದರೆ ಕೊಲಂಬಿಯಾ ಆಸ್ಪತ್ರೆ ಸಿಬ್ಬಂದಿ ಸಚಿವರಿಗೆ ನೀಟಾಗಿ ಚಳ್ಳೆ ಹಣ್ಣು ತಿನ್ನಿಸುವಲ್ಲಿ ಯಶಸ್ವಿಯಾಗಿದ್ದಾರೆ.
Discussion about this post