ರಾಜಕೀಯ ನಾಯಕರಿಗೆ ಭವಿಷ್ಯ ಹೇಳುವ ಸ್ವ ಘೋಷಿತ ಅವಧೂತ ವಿನಯ್ ಗುರೂಜಿ ಇದೀಗ ಡಿಕೆ ಶಿವಕುಮಾರ್ ಅವರಿಗೆ ಭವಿಷ್ಯ ನುಡಿದಿದ್ದಾರೆ.
ಶುಕ್ರವಾರ ಉತ್ತರಹಳ್ಳಿ ಸಮೀಪ ಇರುವ ಅಶ್ರಮದಲ್ಲಿ ತಮ್ಮನ್ನು ಭೇಟಿಯಾದ ಡಿಕೆಶಿಯವರನ್ನು ಉದ್ದೇಶಿಸಿ ಮತ್ತೆ ಸಂಕಷ್ಟಗಳು ಬರಲಿವೆ, ಹಾಗೆಯೇ ಎರಡು ಹುದ್ದೆಗಳು ನಿಮಗೆ ಸಿಗಲಿವೆ ಎಂದು ಭವಿಷ್ಯ ನುಡಿದಿದ್ದಾರಂತೆ.
45 ನಿಮಿಷಗಳ ಕಾಲ ಇಬ್ಬರ ನಡುವೆ ಮಾತುಕತೆ ನಡೆದಿದ್ದು, ರಾಜಕೀಯ ಭವಿಷ್ಯ, ಕಾನೂನು ಬೆಳವಣಿಗೆ ಕುರಿತಂತೆ ಚರ್ಚೆ ನಡೆದಿರುವ ಸಾಧ್ಯತೆಗಳಿದೆ.
ಈ ವೇಳೆ ಡಿಕೆ ಶಿವಕುಮಾರ್ ಅವರಿಗೆ ಭವಿಷ್ಯ ನುಡಿದ ವಿನಯ್ ಗುರೂಜಿ, ನಿಮಗೆ ಮತ್ತೆ ಸಂಕಷ್ಟಗಳು ಬರಲಿದೆ. ಹಾಗೇ ಎರಡೂ ಹುದ್ದೆಗಳು ನಿಮಗೆ ಸಿಗಲಿವೆ. ಆ ಕಷ್ಟಗಳ ನಡುವೆ ಒಂದು ಹುದ್ದೆ ನಿಮಗೆ ಸಿಕ್ಕರೂ ಸಿಗಬಹುದು. ಇನ್ನೊಂದು ದೊಡ್ಡ ಹುದ್ದೆ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾದ ನಂತರ ಸಿಗಲಿದೆ ಎಂದು ತಿಳಿಸಿದ್ದಾರೆ.
ಮತ್ತೆ ಎರಡು ಕಷ್ಟಗಳು ಬರಲಿದೆ ಅನ್ನುತ್ತಿದ್ದೀರಿ, ಆದರೆ ಕೆಲವರು ಎಲ್ಲಾ ಸಮಸ್ಯೆ ಮುಗಿಯಿತು ಅನ್ನುತ್ತಾರಲ್ಲ ಎಂದು ಡಿಕೆಶಿ ಹೇಳಿದ ಪ್ರಶ್ನೆಗೆ ಉತ್ತರಿಸಿದ ವಿನಯ್ ಗುರೂಜಿ, ಅವರು ನಿಮ್ಮನ್ನು ಮೆಚ್ಚಿಸಲು ಹಾಗೇ ಹೇಳಿರಬಹುದು. ನಾನು ನಿಮ್ಮಿಂದ ಯಾವ ನಿರೀಕ್ಷೆಯನ್ನೂ ಇಟ್ಟುಕೊಂಡವನಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಅಂದ ಹಾಗೇ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪೂರ್ಣ ಅವಧಿ ಪೂರೈಸಲಿದೆ ಎಂದು ವಿನಯ್ ಗುರೂಜಿ ಭವಿಷ್ಯ ನುಡಿದಿದ್ದರು.
Discussion about this post