ಒಂದೆಡೆ #MeToo ಅಭಿಯಾನ ಮತ್ತೊಂದು ಕಡೆ ಶಬರಿಮಲೆಗೆ ಮಹಿಳೆಯ ಪ್ರವೇಶ ವಿವಾದ. ಈ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾಡಿದ ಟ್ವೀಟ್ ಸಾವಿರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಮಹಿಳೆಯ ಮೇಲೆ ಕಿರುಕುಳ, ದೌರ್ಜನ್ಯ ನಡೆಯುತ್ತಿರುವ ಇಂತಹ ಸಮಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ಟ್ವೀಟ್ ಮಾಡಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಶುಭಕೋರಿರುವ ವಿಜಯಲಕ್ಷ್ಮಿ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
”ಪ್ರತಿಯೊಬ್ಬ ಮಹಿಳೆಯೊಳಗೆ ‘ದುರ್ಗ’ ಇರ್ತಾಳೆ. ದೇಗುಲಕ್ಕೆ ಹೋಗಿ ದೇವಿಯ ಪೂಜಿಸುವ ಮೊದಲು ಮಹಿಳೆಯನ್ನ ಗೌರವಿಸುವುದನ್ನ ಕಲಿಯಿರಿ” ಎಂದು ಟ್ವೀಟ್ ಮಾಡಿದ್ದಾರೆ.
ಹಬ್ಬದ ಪ್ರಯುಕ್ತ ಶುಭಕೋರಿದ್ದರೂ, ಸದ್ಯದ ಬೆಳವಣಿಗಳಿಗೆ ಸೂಕ್ತವಾಗಿದೆ ಎನ್ನುವುದು ನೆಟ್ಟಿಗರ ಅಭಿಪ್ರಾಯ. ಇನ್ನು ದರ್ಶನ್ ಪತ್ನಿಯ ಈ ಟ್ವೀಟ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ನಿಜ ಎನ್ನುತ್ತಿದ್ದಾರೆ.
There is a ‘Durga ‘ in every woman.
Learn to respect her, before worshiping goddess in a temple.#HappyNavratri— VijayalakshmiDarshan (@vijayaananth2) October 16, 2018
Discussion about this post