ಮಂಗಳೂರು : ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯರು ಹಾಗೂ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಗುಡುಗಿದ್ದಾರೆ.
ಅಧಿಕಾರಿ ಕೊಟ್ಟ ಮೂರ್ಖತನದ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಲು ಜಿಲ್ಲಾ ಕಾಂಗ್ರೆಸ್ ನಾಯಕರು ಮೀನಾ ಮೇಷ ಎಣಿಸುತ್ತಿದ್ದರು.
ಆದರೆ ಪ್ರತಿಭಾ ಕುಳಾಯಿ ಸಮಾಜಕ್ಕೆ ಆದ ಅವಮಾನದ ವಿರುದ್ಧ ದನಿ ಎತ್ತಲು ನಾಯಕರ ಅಪ್ಪಣೆಗೆ ಕಾಯಲಿಲ್ಲ. ನೇರವಾಗಿ ಅಧಿಕಾರಿಯ ಮೂರ್ಖತನದ ಹೇಳಿಕೆ ವಿರುದ್ಧ ಗುಡುಗಿದ್ದಾರೆ.
ಮಾತ್ರವಲ್ಲದೆ ಸುಮ್ನೆ ಬಾಯಿ ಮಾತಿಗೆ ತಪ್ಪಾಯ್ತು ಅಂದ್ರೆ ಸಾಲದು, ಕೋಟಿ ಚೆನ್ನಯರ ಪುಣ್ಯ ಕ್ಷೇತ್ರಕ್ಕೆ ಬಂದು ತಪ್ಪು ಕಾಣಿಕೆ ಹಾಕಬೇಕು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಅವಳಿ ವೀರ ಪುರುಷರು ಕೇವಲ ಬಿಲ್ಲವರಿಗೆ ಮಾತ್ರವಲ್ಲ ಇಡೀ ತುಳುನಾಡಿನ ಆರಾಧ್ಯ ದೈವವಾಗಿದ್ದಾರೆ. ಹೀಗಿರುವಾಗ ಜಗದೀಶ್ ಅಧಿಕಾರಿ ಅವಳಿ ವೀರಪುರುಷರ ಭಕ್ತರೆಲ್ಲರಿಗೂ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಒಂದು ವೇಳೆ ಅಧಿಕಾರಿ ಕ್ಷಮೆ ಕೇಳದಿದ್ರೆ ನಾವು ತಾಂಟಲು ಸಿದ್ಧರಿದ್ದೇವೆ. ಅವರು ಹೋದಲ್ಲಿ ಬಂದಲ್ಲಿ ನಾವು ತಾಂಟುತ್ತೇವೆ ಅಂದಿದ್ದಾರೆ ಪ್ರತಿಭಾ.
Discussion about this post