Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಡಾಲಿ ಧನಂಜಯ್​ ಅಭಿಮಾನಿಗಳಿಂದ ಬೇಸರ, ವಿವಾದ ಸೃಷ್ಟಿಸಿದ ರಿಷಭ್​ ಶೆಟ್ಟಿ ಹಾಡಿದ ‘ಬಡವ ರಾಸ್ಕಲ್​’ ಎಂಬ ಗೀತೆ

Radhakrishna Anegundi by Radhakrishna Anegundi
November 4, 2019
in ಮನೋರಂಜನೆ
Share on FacebookShare on TwitterWhatsAppTelegram

ಬಡವ ರಾಸ್ಕಲ್​ ಎಂದು ಹಾಡಿದ ರಿಷಭ್​ ಶೆಟ್ಟಿ, ಅಸಮಾಧಾನ ಹೊರಹಾಕಿದ ಡಾಲಿ ಅಭಿಮಾನಿಗಳು, ಧನಂಜಯ್​ ಸ್ಪಷ್ಟನೆ

ಸಿನಿಮಾದಲ್ಲಿ ಬಳಕೆಯಾಗುವ ಹೆಸರು, ಸಂಭಾಷಣೆಗಳು ಚಲನಚಿತ್ರಗಳ ಶೀರ್ಷಿಕೆಗಳಾಗುವುದು ಇತ್ತೀಚಿಗೆ ವಾಡಿಕೆಯಾಗಿಬಿಟ್ಟದೆ. ಆದರೆ ಇಲ್ಲಿ ಸಿನಿಮಾದ ಶೀರ್ಷಿಕೆಯು ಹಾಡೊಂದರ ಸಾಲಾಗಿ ವಿವಾದಕ್ಕೆ ಕಾರಣವಾಗಿದೆ.

ನಟ ಡಾಲಿ ಧನಂಜಯ್​ ಅಭಿನಯದ ಬಡವ ರಾಸ್ಕಲ್​ ಎಂಬ ಸಿನಿಮಾ ಶೀರ್ಷಿಕೆಯ ಹೆಸರನ್ನು ಬಳಸಿಕೊಂಡ ಹಾಡೊಂದು ಈಗ ವೈರಲ್​ ಆಗಿದ್ದು ಸೋಮವಾರ, ನ.4 ರಂದು ಡಾಲಿ ಅಭಿಮಾನಿಗಳು ಇದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ನಟ, ನಿರ್ದೇಶಕ ರಿಷಭ್​ ಶೆಟ್ಟಿ ‘ಒಂಭತ್ತು ಸುಳ್ಳು ಕಥೆಗಳು’ ಎಂಬ ಚಿತ್ರದಲ್ಲಿ ‘ಏನೋ ಬಡವ ರಾಸ್ಕಲ್’ ಎಂದು ಹಾಡಿದ್ದಾರೆ. ಈ ಹಾಡನ್ನು ಕೇಳಿದ ಡಾಲಿ ಅಭಿಮಾನಿಗಳು ಡಾಲಿ ಸಿನಿಮಾದ ಗೀತೆ ಇರಬಹುದು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಇದು ಆ ಸಿನಿಮಾದ ಗೀತೆಯಲ್ಲ ಎಂದು ತಿಳಿದ ಕೂಡಲೆ ಗೀತೆಯನ್ನು ರಚಿಸಿದವರ ಮೇಲೆ ಮತ್ತು ಹಾಡು ಹಾಡಿರುವ ರಿಷಭ್​ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ​

ಕಳೆದ ನ.1 ರಂದು ರಿಷಭ್​ ಹಾಡಿರುವ ರಾಸ್ಕಲ್​ ಗೀತೆಯನ್ನು ಯೂಟ್ಯೂಬ್​ ನಲ್ಲಿ ಬಿಡುಗಡೆ ಮಾಡಲಾಯಿತು. ಈ ಕುರಿತ ಲೇಖನವೂ ಪ್ರಕಟವಾಯಿತು

ಇದನ್ನು ಕಂಡ ಧನಂಜಯ್​ ಹಾಡಿನ ಬಗ್ಗೆ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

“ನಮ್ಮ ಚಿತ್ರಕ್ಕೂ ರಿಷಭ್​ ಅದ್ಭುತವಾಗಿ ಹಾಡಿರುವ ಈ ಹಾಡಿಗೂ ಯಾವುದೇ ಸಂಬಂಧವಿಲ್ಲ. ಯಾವ ಸಿನಿಮಾ ಗೀತೆ ಎಂಬುದು ನನಗೆ ಗೊತ್ತಿಲ್ಲ. ಆ ಚಿತ್ರತಂಡಕ್ಕೆ ಶುಭವಾಗಲಿ, ನಮ್ಮ ಚಿತ್ರವನ್ನು ಪ್ರಮೋಟ್​ ಮಾಡಿದ್ದಕ್ಕೆ ಧನ್ಯವಾದಗಳು”, ಎಂದು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ನಂತರದಲ್ಲಿ ಡಾಲಿ ಅಭಿಮಾನಿಗಳು ಗೀತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಯಾವ ಪದದ ಮೇಲೂ ಯಾರಿಗೂ ಹಕ್ಕಿಲ್ಲ. ಯಾರು ಯಾವ ಪದವನ್ನಾದರೂ ಬಳಸಬಹುದು. ಆದರೆ ಎಲ್ಲದಕ್ಕೂ ವೃತ್ತಿ ಧರ್ಮ ಎಂಬುದು ಇದೆ. ಡಾಲಿಯ ಬ.ರಾಸ್ಕಲ್​ ಸಿನಿಮಾ ಬರುತ್ತಿದೆ ಎಂದು ತಿಳಿದ ನಂತರವೂ ಆ ಸಿನಿಮಾ ಶೀರ್ಷಿಕೆಯ ಪದವನ್ನಿಟ್ಟುಕೊಂಡು ಹಾಡು ಮಾಡಿರುವುದು ಸರಿಯಲ್ಲ. ಕನ್ನಡ ಗೊತ್ತಿಲ್ಲದವರಿಗೆ ಈ ಹಾಡನ್ನು ಮಾಡಿದ್ದಾರೆ. ಆದರೆ ಕನ್ನಡ ಗೊತ್ತಿಲ್ಲದವರಿಗೆ ಈ ಹಾಡು ಹೇಗೆ ಅರ್ಥವಾಗುತ್ತದೆ”, ಎಂದು ಮುರುಳಿ ಎಂಬುವವರು ಕಿಡಿಕಾರಿದ್ದಾರೆ.

ಒಂದು ಕಡೆ ಗೀತೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ರಿಷಭ್​ ಅವರು ಧನಂಜಯ್​ ಅವರ ಟ್ವೀಟ್​ ನ್ನು ರೀಟ್ವೀಟ್​ ಮಾಡಿ ಧನ್ಯವಾದ ತಿಳಿಸಿದ್ದಾರೆ.

“ಧನ್ಯವಾದಗಳು ಗೆಳೆಯ, ತಮ್ಮ ಅಭಿನಯದ ಬ.ರಾಸ್ಕಲ್ ಚಿತ್ರಕ್ಕೆ ಶುಭವಾಗಲಿ”, ಎಂದು ಹೇಳಿದ್ದಾರೆ.
ಒಂಭತ್ತು ಸುಳ್ಳು ಕಥೆಗಳು ಚಿತ್ರದ ಗೀತೆ ಈ ಮಟ್ಟಿಗೆ ವಿವಾದಕ್ಕೆ ಕಾರಣವಾಗಿದೆ. ರಿಷಭ್​ ಶೆಟ್ಟಿ ಡಾಲಿ ಚಿತ್ರಕ್ಕೂ ಶುಭ ಕೋರುವ ಮೂಲಕ ವಿವಾದಕ್ಕೆ ಅಂತ್ಯ ಹಾಡಿದ್ದಾರೆ.

ನಟ ಡಾಲಿ ಧನಂಜಯ್​ ಮುಖ್ಯ ಭೂಮಿಕೆಯಲ್ಲಿರುವ ಬಡವ ರಾಸ್ಕಲ್​ ಚಿತ್ರವು ಒಂದು ಮನರಂಜನಾತ್ಮಕ ಚಿತ್ರವಾಗಿದ್ದು ಶಂಕರ್​ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಧನಂಜಯ್​ ನಾಯಕನ ಜೊತೆಗೆ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗುಜ್ಜಾಲ್​ ಪುರುಷೋತ್ತಮ್​ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ಧನಂಜಯ್​, ಅಮೃತಾ ಅಯ್ಯಂಗಾರ್​ ಮುಖ್ಯಭೂಮಿಕೆಯಲ್ಲಿದ್ದಾರೆ.

ShareTweetSendShare

Discussion about this post

Related News

Kantara Box Office 300 crore Kantara Box Office 300 crore

Kantara Box Office 300 crore : 30 ದಿನದಲ್ಲಿ 300 ಕೋಟಿ : ದಾಖಲೆ ಮೇಲೆ ದಾಖಲೆ ಬರೆದ ಕಾಂತಾರ

dhruva-sarja-and-prerana-expecting-their-first-child

Dhruva sarjaa : ಗುಡ್ ನ್ಯೂಸ್ ಕೊಟ್ಟ ಧ್ರುವ ಪ್ರೇರಣಾ ದಂಪತಿ

Ardhangi : ಅಮೃತ ವರ್ಷಿಣಿಯ ಅಮೃತಾಳಿಗೆ ಅರ್ಧಾಂಗಿಯಲ್ಲಿ ಸಿಕ್ತು ಛಾನ್ಸ್

jothe jotheyali ಆರ್ಯವರ್ಧನ್ ಪಾತ್ರಕ್ಕೆ ಸಿ ಟಿ ರವಿ ಆಯ್ಕೆ

Dhamaka : ಧಮಾಕ ಟ್ರೇಲರ್ ರಿಲೀಸ್…ಇದು ಕಾಮಿಡಿ ಜೋಡಿಯ ನಗುವಿನ ಟಾನಿಕ್

Kendasampige : ಧಾರಾವಾಹಿ ಲೋಕದಲ್ಲಿ ದಾಖಲೆ ಬರೆಯಲಿದೆ ಕೆಂಡಸಂಪಿಗೆ

Bigg Boss OTT : ಮೂಡ್ ಬಂದಿಲ್ಲ ಅಂದ್ರೆ 3 ದಿನವಾದ್ರೂ ಮಾಡಲ್ಲ : ಸುದೀಪ್ ಮುಂದೆ ಸೋನು ರಹಸ್ಯ ಬಯಲು

bigg boss roopesh shetty : ಅವಳು ಬೀಳ್ತಾ ಇಲ್ಲ ಇವನು ಬಿಡ್ತಾ ಇಲ್ಲ : ರೂಪೇಶ್ love with ಸಾನ್ಯಾ

kiran yogeshwar  : ಬಿಗ್ ಬಾಸ್ ಮನೆಯಿಂದ ಹೊರ ಬಂದ ಕಿರಣ್ ಯೋಗೇಶ್ವರ್

Bigg Boss OTT : ವಾಶ್ ರೂಮ್ ನಲ್ಲಿ ಜಿರಳೆ : ಸಾನ್ಯಾ ಸಹಾಯಕ್ಕೆ ರೂಪೇಶ್

Latest News

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

Pen drive Arrest bengaluru-woman-loses-pen-drive-with-private-photos-blackmailer-demands

Pen drive Arrest : ರಸ್ತೆಯಲ್ಲಿ ಬಿದ್ದಿದ್ದ ಪೆನ್ ಡ್ರೈವ್ ಹೆಕ್ಕಿ ಕಾಸು ಸಂಪಾದಿಸಲು ಹೋದವನ ಬಂಧನ

tirumala

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್