ಚಂದನವನದ ಕ್ರೇಜಿ ಸ್ಟಾರ್ ಜ್ಯೋತಿಷ್ಯ, ಭವಿಷ್ಯದಿಂದ ಸಿಕ್ಕಾಪಟ್ಟೆ ದೂರ. ತಮ್ಮ ಕೆಲಸವನ್ನು ನಂಬುವ ಅವರು ಜಾತಕ, ಭವಿಷ್ಯಗಳನ್ನು ನಂಬುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ರವಿಚಂದ್ರನ್ ಈ ಬಗ್ಗೆಯೂ ಒಲವು ತೋರಲಾರಂಭಿಸಿದ್ದಾರೆ. ಈವರೆದೆ ವಿ.ರವಿಚಂದ್ರನ್ ಆಗಿದ್ದ ಕ್ರೇಜಿ ಸ್ಟಾರ್ ಇನ್ಮುಂದೆ ರವಿಚಂದ್ರ ವಿ ಆಗಲಿದ್ದಾರೆ.ಈ ಮೂಲಕ ಚಿತ್ರರಂಗಕ್ಕೆ ಹೊಸದಾಗಿ ಬರುವವರಂತೆ ಹೆಸರು ಬದಲಾವಣೆ ಮಾಡಿಕೊಳ್ಳಲು ಸಿಪಾಯಿ ಮುಂದಾಗಿದ್ದಾರೆ.
ಈ ಬಗ್ಗೆ ಟಿವಿ9 ವಾಹಿನಿಯೊಂದಿಗೆ ಮಾತನಾಡಿರುವ ಅವರು ಜ್ಯೋತಿಷಿಯೊಬ್ಬರು ಕೊಟ್ಟ ಸಲಹೆಯಂತೆ ಹೆಸರು ಬದಲಾಯಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಒಂದೇ ಒಂದು ಅಕ್ಷರವನ್ನು ಹಿಂದೆ-ಮುಂದೆ ಮಾಡಿಕೊಳ್ಳುತ್ತೀರಾ ಎಂದು ಅವರು ಮನವಿ ಮಾಡಿದರು. ನಾನೇ ಇದರಿಂದ ಏನು ಲಾಭ ಅಂತಾ ಪ್ರಶ್ನಿಸಿದೆ. ಜೀವನದಲ್ಲಿ ಬದಲಾವಣೆ ಆಗುತ್ತದೆ ಅಂದಿದ್ದಾರೆ.
50 ವರ್ಷಗಳಿಂದ ಎಲ್ಲರೂ ನನ್ನ ರವಿಚಂದ್ರನ್ ಅಂತಾ ಕರೆಯುತ್ತಾರೆ. ಹೀಗಿರುವಾಗ ರವಿಚಂದ್ರ ವಿ. ಅಂತ ಯಾರು ಕರೆಯುತ್ತಾರೆ. ಆದರೆ ಹೆಸರು ಬದಲಾವಣೆಗೆ ಸೂಚಿಸಿರುವ ಜ್ಯೋತಿಷಿ ನನ್ನಿಂದ ಹಣ ನಿರೀಕ್ಷಿಸಿಲ್ಲ. ಪ್ರೀತಿಯಿಂದ ಬಂದು ಹೇಳಿದ್ದಾರೆ ಹೆಸರು ಬದಲಾಯಿಸಿದ್ದೇನೆ ಅಂದಿದ್ದಾರೆ.
Discussion about this post