ನವದೆಹಲಿ : ಕೊರೋನಾ ಸಂಕಷ್ಟ ಕಾಲದಲ್ಲಿ ಕಾಂಗ್ರೆಸ್ ಸರ್ಕಾರದೊಂದಿಗೆ ಕೈ ಜೋಡಿಸಬೇಕಾಗಿತ್ತು. ಹೋಗ್ಲಿ ರಾಜಕೀಯವಾಗಿ ನಷ್ಟವಾಗುತ್ತದೆ ಅನ್ನುವುದಾಗಿದ್ರೆ, ಕೊರೋನಾ ಲಸಿಕೆ ವಿತರಣೆ ವಿಚಾರದಲ್ಲಾದರೂ ರಾಜಕೀಯವನ್ನು ಸೈಡಿಗಿಡಬೇಕಾಗಿತ್ತು. ಆದರೆ ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆಗಳನ್ನು ದೇಶ ಕ್ಷಮಿಸಲು ಸಾಧ್ಯವಿಲ್ಲ. ಲಸಿಕೆ ಕುರಿತಂತೆ ನಡೆದ ಅಪಪ್ರಚಾರವನ್ನು ಮೊನ್ನೆ ಮೊನ್ನೆ ಕುಮಾರಸ್ವಾಮಿಯವರೇ ಬಹಿರಂಗಪಡಿಸಿದ್ದಾರೆ.
ಈ ನಡುವೆ ಕಾಂಗ್ರೆಸ್ ಅಧಿಕಾರವಿರುವ ರಾಜ್ಯಗಳಲ್ಲಿ ಲಸಿಕೆ ಹೇಗೆ ವ್ಯರ್ಥವಾಗುತ್ತಿದೆ ಅನ್ನುವುದನ್ನು ದೇಶ ನೋಡಿದೆ. ಅಲ್ಲಿಗೆ ಅದರ ಉದ್ದೇಶವೇನು ಅನ್ನುವುದು ಕೂಡಾ ಸ್ಪಷ್ಟವಾಗಿದೆ. ಮೋದಿಯ ಕಟ್ಟರ್ ವಿರೋಧಿ ಪಿಣರಾಯಿ ವಿಜಯನ್ ಅವರೇ ಮುಂದೆ ನಿಂತು ಕೇರಳದಲ್ಲಿ ಲಸಿಕೆ ವ್ಯರ್ಥವಾಗದಂತೆ ನೋಡಿಕೊಂಡಿದ್ದಾರೆ. ಕೊಟ್ಟ ಗುರಿಗಿಂತಲೂ ಹೆಚ್ಚು ಮಂದಿಗೆ ಲಸಿಕೆ ಕೊಟ್ಟ ಹಿರಿಮೆ ಕೇರಳದ್ದು. ಆದರೆ ಕಾಂಗ್ರೆಸ್ ಕೇರಳವನ್ನು ನೋಡಿ ಕಲಿಯೋದು ಸಾಕಷ್ಟಿದೆ.
ಆಗಿದ್ದು ಆಗೋಯ್ತು, ಇನ್ನು ಮುಂದಾದರೂ ಲಸಿಕೆ ರಾಜಕೀಯ ಸೈಡಿಗಿಡೋಣ ಅಂದ್ರೆ ಅದಕ್ಕೂ ಕಾಂಗ್ರೆಸ್ ಸಿದ್ದವಿಲ್ಲ.ಇದೀಗ ಉಚಿತ ಲಸಿಕೆ ವಿಚಾರದಲ್ಲಿ ಹೊಸ ರಾಗಾ ಶುರುವಿಟ್ಟುಕೊಂಡಿದೆ. ಪ್ರಧಾನಿ ಮೋದಿಯವರು ಉಚಿತ ಲಸಿಕೆ ಎಂದು ಘೋಷಿಸಿದ್ದಾರೆ. ಹಾಗಿದ್ದ ಮೇಲೆ ಖಾಸಗಿ ಆಸ್ಪತ್ರೆಗಳು ಲಸಿಕೆ ಹಣ ಪಡೆಯೋದ್ಯಾಕೆ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.
ಉಚಿತ ಲಸಿಕೆ ಘೋಷಣೆಯ ಕ್ರೆಡಿಟ್ ಸುಪ್ರೀಂ ಕೋರ್ಟ್ ಗೆ ಸಲ್ಲಬೇಕು, ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡ ಕಾರಣದಿಂದಲೇ ಉಚಿತ ಲಸಿಕೆ ಘೋಷಣೆಯಾಗಿದೆ ಅಂದಿರುವ ರಾಹುಲ್, ಲಸಿಕೆ ಉಚಿತವಾಗಿದ್ದರೆ ಖಾಸಗಿ ಆಸ್ಪತ್ರೆಗಳು ಲಸಿಕೆಗೆ ಶುಲ್ಕ ವಿಧಿಸೋದ್ಯಾಕೆ ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಪ್ರಶ್ನೆ ಅತೀ ಬುದ್ದಿವಂತಿಕೆಯಿಂದ ಕೂಡಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.
Discussion about this post