ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿಯಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲ ಕಚ್ಚಿತ್ತು. ಆಡಳಿತ ವಿರೋಧಿ ಅಲೆಗಿಂತಲೂ, ಕಾಂಗ್ರೆಸ್ ಗೆ ಮುಳುವಾಗಿದ್ದು, ನಾಯಕರ ಒಣ ಪ್ರತಿಷ್ಟೆ.
ಯುಟಿ ಖಾದರ್ ಒಬ್ಬರೇ ಕಾಂಗ್ರೆಸ್ ನ ಮರ್ಯಾದೆಯನ್ನು ಸ್ವಲ್ಪ ಮಟ್ಟಿಗೆ ಉಳಿಸಿಕೊಟ್ಟಿದ್ದರು.ಆದರೆ ಕಾಂಗ್ರೆಸ್ ಗೆ ಸೋಲಿನ ಕಾರಣವನ್ನು ಅರಿಯುವಲ್ಲಿ ವಿಫಲರಾಗಿದ್ದಾರೆ. ಒಂದು ವೇಳೆ ಸೋಲಿಗೆ ಕಾರಣ ಗೊತ್ತಿದ್ದರೆ ರಮಾನಾಥ ರೈ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಸುವ ನಿರ್ಧಾರಕ್ಕೆ ಬರುತ್ತಿರಲಿಲ್ಲ.
ಆದರೆ ಕಾಂಗ್ರೆಸ್ ಸೋಲಿಗೆ ಕಾರಣವನ್ನು ಅರಿಯುವ ಪ್ರಯತ್ನಕ್ಕೆ ಜೆಡಿಎಸ್ ಕೈ ಹಾಕಿದೆ. ಮಂಗಳೂರಿನಲ್ಲಿ ಮಾತನಾಡಿರುವ ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯ ಎಲ್ ಭೋಜೇಗೌಡ , ಕಳೆದ ವಿಧಾನಸಭೆ ಚುನಾವಣೆ ವೇಳೆ ಕರಾವಳಿಯಲ್ಲಿ ಹಿಂದೂಗಳನ್ನು ಕಡೆಗಣಿಸಿದ್ದೇ ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣವಾಯ್ತು ಎಂದಿದ್ದಾರೆ.
ಭೋಜೇಗೌಡರ ಹೇಳಿಕೆಯನ್ನು ಸುಮ್ಮನೆ ತೇಲಿ ಬಿಡುವ ಹಾಗಿಲ್ಲ. ಕಾಂಗ್ರೆಸ್ ನ ವೈಫಲ್ಯವನ್ನು ಕಂಡುಕೊಂಡಿರುವ ಜೆಡಿಎಸ್ ಹಿಂದುತ್ವ ಟ್ರಂಪ್ ಕಾರ್ಡ್ ಅನ್ನು ತೇಲಿ ಬಿಡಲಿದೆಯೇ ಅನ್ನುವ ಅನುಮಾನ ಹುಟ್ಟುವಂತೆ ಮಾಡಿದೆ. ಕರಾವಳಿಯಲ್ಲಿ ನೆಲೆ ಕಳೆದುಕೊಂಡಿರುವ ಜೆಡಿಎಸ್ ಈ ಮೂಲಕ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದೆಯೇ ಅನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.
ಪ್ರತ್ಯೇಕ ರಾಜ್ಯದ ಬೇಡಿಕೆಗೆ ಅಪ್ಪಾಜಿ ಕ್ಯಾಂಟೀನ್ ನಲ್ಲಿ ಮುಲಾಮು?
ಈಗಾಗಲೇ ಕುಮಾರಸ್ವಾಮಿ ನಮ್ಮ ಮುಖ್ಯಮಂತ್ರಿಯಲ್ಲ ಅನ್ನುವ ಆಂದೋಲನ ಕರಾವಳಿಯಲ್ಲಿ ಸದ್ದು ಮಾಡಿದೆ. ಹೀಗಿರುವಾಗ ಕರಾವಳಿಗರ ಮನ ಗೆಲ್ಲುವ ಪ್ರಯತ್ನಕ್ಕೆ ಜೆಡಿಎಸ್ ಕೈ ಹಾಕಿದೆಯೇ..?
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಭೋಜೇಗೌಡರು, 2013ರ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿ ಭಾಗದಲ್ಲಿ ಹೆಚ್ಚು ಸ್ಥಾನ ಗಳಿಸಿತ್ತು. ಆದರೆ ಈಗ ಹೀನಾಯವಾಗಿ ಸೋತಿದೆ,ಈ ಚುನಾವಣೆಯಲ್ಲಿ ಹಿಂದೂಗಳ ಮತಗಳು ಎಲ್ಲಿ ಹೋದವು ಎಂಬುದನ್ನು ಪಕ್ಷ ತಿಳಿಯಬೇಕು ಎಂದು ಹೇಳಿದ್ದಾರೆ.
ಮೂರೇ ಮೂರು ಪ್ರಶ್ನೆಗೆ ಉತ್ತರಿಸಿ ದೇವೇಗೌಡರೇ…
ಐದು ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ನಡೆದ ಬೆಳವಣಿಗಗಳು ಹಿಂದೂಗಳ ಮತ ಧ್ರುವೀಕರಣಕ್ಕೆ ಕಾರಣವಾಯ್ತು,ಹೀಗಾಗಿ ಕಾಂಗ್ರೆಸ್ ಸೋಲ ಬೇಕಾಯ್ತು ಎಂದಿದ್ದಾರೆ.
Discussion about this post