ಬೆಂಗಳೂರು : ಬಿಜೆಪಿ ಶಾಸಕರ ಆರೋಪಕ್ಕೂ ಸಿಎಂ ಯಡಿಯೂರಪ್ಪ ಆಡುವುದಕ್ಕೂ ಸರಿ ಇದೆ.
ಮೊನ್ನೆ ಮೊನ್ನೆ ಬಿಜೆಪಿಯ ಪಕ್ಕಾ ಎದುರಾಳಿ ಜಮೀರ್ ಕ್ಷೇತ್ರಕ್ಕೆ ಕೇಳಿದಷ್ಚು ಅನುದಾನ ಕೊಟ್ಟಿದ್ದ ಯಡಿಯೂರಪ್ಪ ಕೊನೆಯ ಕ್ಷಣದಲ್ಲಿ ಅದನ್ನು ರದ್ದುಗೊಳಿಸಿದ್ದರು.
ಅವತ್ತು ಬಿಜೆಪಿ ಶಾಸಕರು ದನಿ ಎತ್ತದೇ ಹೋಗಿರುತ್ತಿದ್ರೆ ಜಮೀರ್ ದೊಡ್ಡ ಮೊತ್ತದ ಅನುದಾನ ಪಡೆದಿರುತ್ತಿದ್ದರು.
ಬಿಜೆಪಿ ಶಾಸಕರು ಅನುದಾನ ಕೊಡಿ ಎಂದು ಯಡಿಯೂರಪ್ಪ ಬಳಿಗೆ ಹೋದ್ರೆ ಬಿಡಿಕಾಸು ಸಿಗೋದಿಲ್ಲ.
ಅದೇ ಕಾಂಗ್ರೆಸ್ ಜೆಡಿಎಸ್ ನಾಯಕರಿಗಾದ್ರೆ ಕೇಳಿದಷ್ಟು ಅನುದಾನ ಸಿಗುತ್ತದೆ ಅನ್ನುವುದು ಬಿಜೆಪಿ ಶಾಸಕರ ಆರೋಪ.
ಇದು ಹೌದು, ಕೊರೋನಾ ಸಂಕಷ್ಟ ಕಾಲದಲ್ಲೂ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಕ್ಷೇತ್ರಕ್ಕೆ ಯಡಿಯೂರಪ್ಪ ಬಂಪರ್ ಅನುದಾನ ಕೊಟ್ಟಿದ್ದಾರೆ.
ಬಿಜೆಪಿ ಶಾಸಕರು ಅದೇನು ಪಾಪ ಮಾಡಿದ್ದಾರೋ ಗೊತ್ತಿಲ್ಲ. ಯಡಿಯೂರಪ್ಪ ಅವರ ವರ್ತನೆಯಿಂದ ಬಿಜೆಪಿ ಶಾಸಕರನ್ನು ಗೆಲ್ಲಿಸಿದ ಮಂದಿ ಪರಿತಪಿಸುವಂತಾಗಿದೆ.
ಹಾಗೇ ಯಡಿಯೂರಪ್ಪ ವರ್ತನೆ ನಿಜಕ್ಕೂ ಸರಿ ಇಲ್ಲ. ರಾಜ್ಯದ ಎಲ್ಲಾ ಕ್ಷೇತ್ರಗಳು ಅಭಿವೃದ್ಧಿಯಾಗಲೇಬೇಕು. ಹೀಗಾಗಿ ಅನುದಾನ ಅನ್ನುವುದು ಸಮಾನವಾಗಿ ಹಂಚಿಕೆಯಾಗಬೇಕು.
ಅದನ್ನು ಬಿಟ್ಟು ಓಲೈಕೆ ರಾಜಕಾರಣವನ್ನು ಯಡಿಯೂರಪ್ಪ ಅನುಸರಿಸುತ್ತಿದ್ದಾರೆ ಅಂದ್ರೆ ಅದು ಬಿಜೆಪಿಯ ದುರಂತ.
Discussion about this post