ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಮಾಂಗಲ್ಯಂ ತಂತು ನಾನೇನ’ ಧಾರಾವಾಹಿಯಲ್ಲಿ ಶ್ರಾವಣಿ ಆಗಿ ನಟಿಸಿ ಧಾರಾವಾಹಿ ಲೋಕದಲ್ಲಿ ಮನೆ ಮಾತಾದ ದಿವ್ಯಾ ವಾಗುಕರ್ ಧಾರವಾಹಿ ನಿಂತ ಬೆನ್ನಲ್ಲೇ ಬ್ರೇಕ್ ತೆಗೆದುಕೊಂಡಿದ್ದರು. ಅದ್ಯಾಕೋ ಬಂದ ಆಫರ್ ಗಳನ್ನು ಅವರು ಒಪ್ಪಿಕೊಳ್ಳಲಿಲ್ಲ. ಇದಾದ ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಗೀತಾ’ ಧಾರಾವಾಹಿಯಲ್ಲಿ ದಿವ್ಯಾ ವಾಗುಕರ್ ಬಣ್ಣ ಹಚ್ಚಿದ್ದರು.
ದಾಸವಾಳ ಪಾತ್ರದಲ್ಲಿ ಕಾಣಿಸಿಕೊಂಡ ಅವರು ಗೀತಾ ಕತೆಗೆ ಹೊಸ ಟ್ವಿಸ್ಟ್ ಕೊಟ್ಟಿದ್ದರು. ಕಾಡು ಮನುಷ್ಯರ ನಾಯಕಿ ದಾಸವಾಳಗೆ ವಿಜಯ್ ಮೇಲೆ ಪ್ರೀತಿಯಾಗುತ್ತದೆ. ವಿಜಯನನ್ನು ಮದುವೆಯಾಗಬೇಕು ಎಂದು ಬಯಸುತ್ತಾಳೆ ಹೀಗೆ ಆ ಬಳಿಕ ಆ ಕಥೆ ಎಲ್ಲಿಗೋ ಹೋಯ್ತು ಅದು ಬೇರೆ ಕಥೆ.
Discussion about this post