ಮಹಾಮನೆಯ ವಾತಾವರಣವೇ ಇದೀಗ ಬದಲಾಗಿದೆ. ಅದರಲ್ಲೂ ಇಷ್ಟು ಸೀಸನ್ ಗಳ ಪೈಕಿ ಈ ಸೀಸನ್ ನ ಎರಡನೇ ಇನ್ನಿಂಗ್ಸ್ ತುಂಬಾ ಕೆಟ್ಟ ಮನಸ್ಥಿತಿಯವರಿಂದ ಕೂಡಿದೆ ಅನ್ನುವುದು ಸ್ಪಷ್ಟ. ಅದರಲ್ಲೂ ಚಂದ್ರಚೂಡ್ ಮನೆಯ ಶಕುನಿ ಅಂದ್ರೆ ಕಡಿಮೆಯಾದೀತು. ಇಡೀ ಮನೆಯ ವಾತಾವರಣ ಕೆಡಿಸುವಲ್ಲಿ, ಸ್ಪರ್ಧಿಗಳ ನಡುವೆ ತಂದಿಡುವಲ್ಲಿ ಚಂದ್ರಚೂಡ್ ಅವರದ್ದು ಎತ್ತಿದ್ದ ಕೈ. ಅಚ್ಚರಿ ಅಂದ್ರೆ ನಾನು ಪತ್ರಕರ್ತ, ನಾನು ಬರಹಗಾರ, ನಾನು ಸಿನಿಮಾ ನಿರ್ದೇಶಕ, ಹೀಗೆ 11-12 ವಿದ್ಯೆಗಳನ್ನು ಬಲ್ಲವ ಎಂದು ಹೇಳುತ್ತಿದ್ದ ಚಂದ್ರಚೂಡ್ ಇವರೇನಾ ಅನ್ನುವಂತಿದೆ ಇವರ ವರ್ತನೆ.
ಸೂಕ್ಷ್ಮ ಸಂವೇದನೆಯ ಬರಹಗಾರನ ಮನಸ್ಥಿತಿ ಇವರದ್ದಾಗಿರುತ್ತಿದ್ರೆ ಸಂಬರಗಿಯಂತಹ ಜೀವದ ಗೆಳೆಯನ ವಿರುದ್ಧ ತಿರುಗಿ ಬೀಳುವ ಪ್ರಮೇಯ ಬರುತ್ತಿರಲಿಲ್ಲ. ಮಗಳೇ ಎಂದು ಕರೆದ ದಿವ್ಯಾ ಸುರೇಶ್ ಬಗ್ಗೆ ಬೇಲಿ ಬದಿಯ….ಕಥೆ ಕಟ್ಟುತ್ತಿರಲಿಲ್ಲ. ಒಟ್ಟಿನಲ್ಲಿ ಚಂದ್ರಚೂಡ್ ಅವರ ಅಸಲಿ ಮುಖವನ್ನು ಬಿಗ್ ಬಾಸ್ ಅನಾವರಣ ಮಾಡಿದೆ ಅನ್ನುವುದು ಸ್ಪಷ್ಟ.
ಈ ನಡುವೆ ಶನಿವಾರದ ಸಂಚಿಕೆಯಲ್ಲಿ ಸುದೀಪ್ ಚಂದ್ರಚೂಡ್ ಅವರನ್ನು ಸಿಕ್ಕಾಪಟ್ಟೆ ತೊಳೆದಿದ್ದಾರೆ. ಈ ಬಗ್ಗೆ ಪ್ರೋಮೋ ಬಿಡುಗಡೆಯಾಗಿದ್ದು, ಚಂದ್ರಚೂಡ್ ಹೇಳಿರುವ ಸುಳ್ಳಿನ ಕಂತೆಯನ್ನು ಕಿಚ್ಚ ಬಿಚ್ಚಿದ್ದಾರೆ. ವೈಷ್ಣವಿ ಹಾಗೂ ಸಂಬರಗಿ ನಡುವೆ ತಂದಿಡಲು ಚಂದ್ರಚೂಡ್ ನಡೆಸಿದ ಪ್ರಯತ್ನ ವಿಫಲವಾದ ಬೆನ್ನಲ್ಲೇ ನಡೆದ ಎಲ್ಲಾ ಡ್ರಾಮಾ ಬಗ್ಗೆ ಸುದೀಪ್ ಮಾತನಾಡಿದ್ದು, ಮಹಾಮನೆಯಲ್ಲಿ ಚಂದ್ರಚೂಡ್ ಮತ್ತೊಮ್ಮೆ ತಲೆ ತಗ್ಗಿಸಿದ್ದಾರೆ.
ಈ ಹಿಂದೆ ಮಾವ ಹಾಗೂ ಮಾಮ ಅನ್ನುವ ಪದದ ವಿಚಾರದಲ್ಲಿ ತಪ್ಪು ಮಾಡಿದ್ದ ಚಂದ್ರಚೂಡ್, ತಮ್ಮ ಮದುವೆ ಡಿವೋರ್ಸ್ ವಿಚಾರದಲ್ಲಿ ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡಿದ್ದರು. ಇದೀಗ ಮಹಾ ಅವಮಾನಕ್ಕೆ ಗುರಿಯಾಗಿರುವ ಚಂದ್ರಚೂಡ್ ಬಿಗ್ ಬಾಸ್ ಮನೆ ತೊರೆಯುವ ನಿರ್ಧಾರ ಕೈಗೊಳ್ಳುತ್ತಾರೆ ಎಂದು ನಾವು ಅಂದುಕೊಂಡ್ರೆ ನಮ್ಮಷ್ಟು ದೊಡ್ಡ ಮೂರ್ಖರು ಮತ್ತೊಬ್ಬರಿಲ್ಲ.
Discussion about this post