ರಮೇಶ್ ಜಾರಕಿಹೊಳಿ ಮಂತ್ರಿಸ್ಥಾನಕ್ಕೆ ನೀರು ತಂದಿಟ್ಟ ಮಂಚದಾಟದ ಸಿಡಿ ಪ್ರಕರಣದ ತನಿಖೆ ಚುರುಕುಗೊಂಡಿದೆ. ಕೋರ್ಟ್ ನಿಂದ ಜಾಮೀನು ಪಡೆದ ಬೆನ್ನಲ್ಲೇ ಶನಿವಾರ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಿರುವ ಪ್ರಮಖ ಆರೋಪಿಗಳು ಎನ್ನಲಾದ ಪತ್ರಕರ್ತ ನರೇಶ್ ಗೌಡ ಹಾಗೂ ಹ್ಯಾಕರ್ ಶ್ರವಣ್ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.
ಎಸಿಪಿ ಧರ್ಮೇಂದ್ರ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ 5 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಜೊತೆಗೆ ಇಬ್ಬರ ಮೊಬೈಲ್ ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಪರಿಶೀಲಿಸಿ ವಾಪಾಸ್ ಕೊಟ್ಟಿದ್ದಾರೆ. ಶನಿವಾರ ಸಂಜೆ 5 ಗಂಟೆಗೆ ವಿಚಾರಣೆ ಮುಗಿಸಿರುವ ಅವರು ಮತ್ತೆ ಹೇಳಿ ಕಳುಹಿಸುತ್ತೇವೆ ಬನ್ನಿ ಅಂದಿದ್ದಾರೆ.
ಈ ನಡುವೆ ಆರೋಪಿಗಳು ಉತ್ತರ ಭಾರತದ ಕಡೆ ತಲೆಮರೆಸಿಕೊಂಡಿದ್ದರು ಎನ್ನಲಾಗಿದ್ದು ಜಾಮೀನು ಸಿಕ್ಕ ಬೆನ್ನಲ್ಲೇ ಬೆಂಗಳೂರಿಗೆ ಆಗಮಿಸಿದ್ದಾರೆ. ಆದರೆ ಟ್ರಾವೆಲ್ ಹಿಸ್ಟರಿ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದ ಅವರು ಶನಿವಾರ ಬೆಳಗ್ಗೆ ಇಬ್ಬರೂ ಆರೋಪಿಗಳು ಮೆಜೆಸ್ಟಿಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ ಇಬ್ಬರೂ ಟ್ಯಾಕ್ಸಿ ವಿಚಾರಿಸಿ ಆಡುಗೋಡಿಗೆ ಬಿಡಲು ಹೇಳಿದ್ದಾರೆ. ಆದರೆ ಅದಕ್ಕೆ ಒಪ್ಪದ ಡ್ರೈವರ್ ಟ್ಯಾಕ್ಸಿ ಬುಕ್ ಮಾಡಿದ್ರೆ ಮಾತ್ರ ಬರ್ತಿವಿ ಸರ್, ಇಲ್ಲಾ ಅಂದ್ರೆ ಪೊಲೀಸರು ಹಿಡಿಯುತ್ತಾರೆ ಅಂದಾಗ, ನಾವು ಹೇಳಿಕೊಳ್ಳುತ್ತೇವೆ ನಡಿ ಅಂದಿದ್ದಾರೆ.
ಆಡುಗೋಡಿ ಟೆಕ್ನಿಕಲ್ ಸೆಲ್ ತಲುಪಿದ ಬಳಿಕ ಸಾವಿರ ರೂಪಾಯಿಯನ್ನು ಟ್ಯಾಕ್ಸಿ ಬಾಡಿಗೆ ಎಂದು ಸಂದಾಯ ಮಾಡಿದ್ದಾರೆ.
ಒಂದು ವೇಳೆ ಕ್ಯಾಬ್ ಬುಕ್ ಮಾಡಿದ್ರೆ ಪೊಲೀಸರಿಗೆ ಮೊಬೈಲ್ ನಂಬರ್ ಗೊತ್ತಾಗುತ್ತದೆ. ಬಳಿಕ ಟವರ್ ಲೊಕೇಶನ್ ಮೂಲಕ ಜನ್ಮ ಜಾಲಾಡುತ್ತಾರೆ. ಜೊತೆಗೆ ತಾವು ಟ್ರೈನ್ ನಲ್ಲಿ ಬಂದೆವೋ, ವಿಮಾನದಲ್ಲಿ ಬಂದೆವೋ ಅನ್ನುವುದನ್ನು ಪತ್ತೆ ಹಚ್ಚುತ್ತಾರೆ. ಹೀಗಾಗಿ ಸಿಕ್ಕಾಪಟ್ಟೆ ಮುನ್ನೆಚ್ಚರಿಕೆ ವಹಿಸಿಕೊಂಡೇ ಆರೋಪಿಗಳು ವಿಚಾರಣೆ ಎದುರಿಸಿದ್ದಾರೆ.
ಇನ್ನು ತನಿಖೆ ಮುಗಿದ ಬಳಿಕ ವಕೀಲರ ಆಡಿ ಕಾರಿನಲ್ಲಿ ಹಿಂತಿರುಗಿದ್ದಾರೆ.
Discussion about this post