ಅನರ್ಹರಿಗೆ ಟಿಕೆಟ್ ಕೊಡಬಾರದು ಎಂದು ಲಾಬಿ ನಡೆಸುವ ಒಂದು ತಂಡ ಬಿಜೆಪಿಯಲ್ಲಿದೆ. ಯಡಿಯೂರಪ್ಪ ವಿರುದ್ದ ಒಂದು ದೊಡ್ಡ ಲಾಬಿ ಕೆಲಸ ಮಾಡುತ್ತಿದೆ. ಬಿಜೆಪಿ ರಾಜ್ಯಾಕ್ಷರೇ ಹಾಗೂ ಕೆಲವರು ಈ ಟೇಪ್ ಲೀಕ್ ಮಾಡಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಯಡಿಯೂರಪ್ಪ ಆಡಿಯೋ ಸೋರಿಕೆ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು ಇದು ನಡೆದದ್ದು ಬಿಜೆಪಿಯ ಉನ್ನತ ಮಟ್ಟದ ಕೋರ್ ಕಮಿಟಿ ಸಭೆಯಲ್ಲಿ
ಈ ಸಭೆಯ ಆಡಿಯೋ ಲೀಕ್ ಆಗುತ್ತೆ ಅಂದ್ರೆ ಏನರ್ಥ? ಯಡಿಯೂರಪ್ಪ ಮುಗಿಸಲು ಬಿಜೆಪಿಯವರೇ ಪ್ರಯತ್ನ ಮಾಡುತ್ತಿದ್ದಾರೆ ಇದರ ಮುಂದುವರಿದ ಭಾಗವಾಗಿ ಈ ಆಡಿಯೋ ಲೀಕ್ ನಡೆದಿದೆ ಎಂದು ದಿನೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಕ್ಷ್ಮಣ ಸವದಿಗೆ ಟಿಕೆಟ್ ಕೊಡಲ್ಲ ಎಂದು ಯಡಿಯೂರಪ್ಪ ಹೇಳಿದ್ದರು. ಹೀಗಾಗಿ ಅವರ ಬೆಂಬಲಿಗರೇ ಈ ವಿಡಿಯೋ ಲೀಕ್ ಮಾಡಿಸಿರಬಹುದು. ರಾಜ್ಯಾಧ್ಯಕ್ಷರು ಹಾಗೂ ಯಡಿಯೂರಪ್ಪನವರಿಗೂ ಆಗುತ್ತಿಲ್ಲ. ಅವರೇ ಟೇಪ್ ಮಾಡಿರಬಹುದು,” ಎಂಬುದಾಗಿ ಕೆಪಿಸಿಸಿ ಅಧ್ಯಕ್ಷರು ಅಭಿಪ್ರಾಯಪಟ್ಟರು.
Discussion about this post