ಮಂಗಳೂರು : ಕೆಲವೊಂದು ವೇಳೆ ರಾಜಕೀಯ ಪಕ್ಷಗಳನ್ನು ಸಂಕಷ್ಟಕ್ಕೆ ಸಿಲುಕಿಸಲು ಪ್ರತಿಪಕ್ಷಗಳ ಅಗತ್ಯವಿರೋದಿಲ್ಲ. ಅವರ ಪಕ್ಷದ ನಾಯಕರೇ ಸಾಕು ಪಕ್ಷಕ್ಕೆ ಹಳ್ಳ ತೋಡುತ್ತಾರೆ.
ಮಂಗಳೂರಿನಲ್ಲೂ ಹೀಗೆ ಆಗಿದೆ. ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಮಾಡಿದ ಯಡವಟ್ಟಿನಿಂದ ಬಿಜೆಪಿ ಭದ್ರಕೋಟೆಯಲ್ಲಿ ಕಮಲ ಪಕ್ಷ ತಲೆ ತಗ್ಗಿಸಿ ನಿಂತಿದೆ.
ಅದರಲ್ಲೂ ಬಿಜೆಪಿಗೆ ಬಲ ತುಂಬುವ ಬಿಲ್ಲವರ ವಿರುದ್ಧವೇ ಜಗದೀಶ್ ಅಧಿಕಾರಿ ನಾಲಗೆ ಹರಿಬಿಟ್ಟಿದ್ದು ಮಾತ್ರವಲ್ಲದೆ, ತುಳುನಾಡಿನ ಕಾರಣಿಕರ ಪುರುಷರಾದ ಕೋಟಿ ಚೆನ್ನಯರ ಬಗ್ಗೆಯೂ ಆಡಬಾರದ ಮಾತುಗಳನ್ನಾಡಿದ್ದಾರೆ.
ಜಗದೀಶ್ ಅಧಿಕಾರಿ ವಿರುದ್ಧ ಯಾವಾಗ ಬಿಲ್ಲವ ಸಮುದಾಯ ಎದ್ದು ನಿಂತಿತೋ, ಇದೀಗ ಜಗದೀಶ್ ಅಧಿಕಾರಿ ಕ್ಷಮೆಯಾಚಿಸಿದ್ದಾರೆ.
ನನ್ನ ಮಾತಿನಿಂದ ಬಿಲ್ಲವ ಸಮುದಾಯಕ್ಕೆ ನೋವಾಗಿದ್ದರೆ ಅವರಲ್ಲಿ ಕ್ಷಮೆ ಯಾಚಿಸುತ್ತೇನೆ ಅಂದಿದ್ದಾರೆ.
ಜೊತೆಗೆ ಕರಾವಳಿಯ ಅವಳಿ ವೀರಪುರುಷರಾದ ಕೋಟಿ ಚೆನ್ನಯ್ಯ ಅವರ ಮೂಲ ಕ್ಷೇತ್ರಕ್ಕೆ ಹೋಗಿ ತಪ್ಪು ಕಾಣಿಕೆ ಸಲ್ಲಿಸಿ ಕ್ಷಮೆಯಾಚಿಸುವುದಾಗಿ ಘೋಷಿಸಿದ್ದಾರೆ.
ತಪ್ಪಾಯ್ತು ಅಂದ ತಕ್ಷಣ ಕ್ಷಮಿಸುವ ದೊಡ್ಡ ಗುಣ ಕರಾವಳಿ ಮಂದಿಗಿದೆ. ಹಾಗಂತ ಜಗದೀಶ್ ಅಧಿಕಾರಿಯವರ ಬಚ್ಚಲು ಬಾಯಿಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಬಿಜೆಪಿ ನಾಯಕರು ಮಾಡಬೇಕು ತಾನೇ.
Discussion about this post