ಬಿಗ್ ಬಾಸ್ ಖ್ಯಾತಿಯ ಸ್ಪರ್ಧಿ, ನಟ
ಭುವನ್ ಪೊನ್ನಣ್ಣ, ಪುಲ್ವಾಮಾ ಸ್ಫೋಟದಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಕುಟುಂಬಕ್ಕೆ
ನೆರವಿನ ಹಸ್ತ ಚಾಚಿದ್ದಾರೆ.
ಹುತಾತ್ಮ ಗುರು ಕುಟುಂಬ
ಸದಸ್ಯರನ್ನು ಭೇಟಿಯಾದ ಭುವನ್ ವೈಯಕ್ತಿಕವಾಗಿ 1 ಲಕ್ಷ ರೂ. ನೆರವು ನೀಡಿದ್ದಾರೆ. ಮದ್ದೂರಿನ ಗುರು ಅವರ ಸ್ವಗ್ರಾಮಕ್ಕೆ
ತೆರಳಿದ ಭುವನ್, ತಮ್ಮ ನೆರವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ
ಗುರು ಸಮಾಧಿ ಸ್ಥಳಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಭುವನ್ ‘ದೇಶಕ್ಕಾಗಿ ಮಡಿದ ಗುರು ಕುಟುಂಬಕ್ಕೆ ನಮ್ಮ ಕೈಲಾದ ಸಹಾಯ ಮಾಡೋದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ನಾನು ಗ್ರಾಮಕ್ಕೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿ ಬಂದಿದ್ದೇನೆ’ ಎಂದಿದ್ದಾರೆ
“ನಾವು ನಟರಾಗಿ ಅಥವಾ ಸಮಾಜದಲ್ಲಿ ಒಂದು ಹೆಸರು ಮಾಡಿದ ಮೇಲೆ ಇದು ನಮ್ಮ ಜವಾಬ್ದಾರಿ ಎಂದು ನನಗೆ ಅನಿಸುತ್ತೆ. ನಮ್ಮ ಕರ್ನಾಟಕದಲ್ಲಿ ಅಥವಾ ನಮ್ಮ ನಾಡಿನಲ್ಲಿ ಏನಾದರೂ ತೊಂದರೆ ಆದಾಗ ನಾವು ನಿಲ್ಲಬೇಕು. ನಾವು ಕೋಟಿಗಟ್ಟಲೆ ಸಂಭಾವನೆ ತೆಗೆದುಕೊಳ್ಳುತ್ತೇವೆ. ಆದರೆ ಏನಾದರೂ ತೊಂದರೆಯಾದಾಗ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ನೀಡಿ ಎಂದು ಹಾಕಿ ಬಿಡುತ್ತೇವೆ. ಯಾರೂ ಕೂಡ ಅಲ್ಲಿ ಹೋಗಿ ಅಲ್ಲಿನ ಪರಿಸ್ಥಿತಿ ಏನಿದೆ ಎಂದು ನೋಡಿ ಸಾಂತ್ವನ ಹೇಳುವುದು ಕಡಿಮೆ”
ನಾನು ಮೊನ್ನೆಯಿಂದ ನೋಡುತ್ತಿದೆ. ಎಲ್ಲರೂ ಕ್ಯಾಂಡಲ್ ಹಚ್ಚಿ ದೊಡ್ಡ ದೊಡ್ಡ ಮೆಸೇಜ್ ಹಾಕುತ್ತಿದ್ದಾರೆ. ಆದರೆ ಯಾರೂ ಕೂಡ ಇಲ್ಲಿ ಬಂದು ಭೇಟಿ ಮಾಡಿ ಸಾಂತ್ವನ ಹೇಳಿ ಅವರಿಗೆ ಕೈಯಲ್ಲಿ ಆದಷ್ಟು ಸಹಾಯವನ್ನು ಯಾರೂ ಮಾಡಿಲ್ಲ. ಅದು ನನಗೆ ಬೇಸರವಾಯಿತು. ಹಾಗಾಗಿ ನಾನು ಇಲ್ಲಿ ಬಂದೆ. ಇವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದೇನೆ ಎಂದರು
ಭುವನ್ ಕಾರ್ಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಭುವನ್ ಕೆಲಸವನ್ನು ನಿಜಕ್ಕೂ ಮೆಚ್ಚಲೇಬೇಕು. ಬೆಲ್ ಬಾಟಂ ಚಿತ್ರ ತಂಡ ಹೊರತುಪಡಿಸಿದರೆ, ಮತ್ಯಾವ ಚಂದನವನದ ಮಂದಿಯೂ ಗುರು ಕುಟುಂಬಕ್ಕೆ ಹೋಗಿ ಸಾಂತ್ವಾನ ಹೇಳುವ ಕೆಲಸವನ್ನೇ ಮಾಡಿಲ್ಲ. ಕೇವಲ ಸಾಮಾಜಿಕ ಜಾಲತಾಣಗಳಿಗೆ ಅವರ ಸಾಂತ್ವಾನ ಮೀಸಲಾಗಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ. ಒಂದ್ಸಲ ಹೋಗಿ ಬನ್ನಿ ದೇಶಕ್ಕಾಗಿ ಮಗನನ್ನೇ ದಾನ ಮಾಡಿದ ತಾಯಿಗೊಂದು ನಮಸ್ಕಾರ ಹೇಳಿ, ಭಾರತ ಮಾತೆಗಾಗಿ ಗಂಡನನ್ನೇ ತ್ಯಾಗ ಮಾಡಿ ಗುರು ಪತ್ನಿಗೊಂದು ಧೈರ್ಯದ ಮಾತು ಹೇಳಿ ಬನ್ನಿ.
ಹಾಗಾದರೆ ನೀವೇನೂ ಮಾಡಿದಿರಿ ಎಂದು ನೀವು ನಮ್ಮನ್ನು ಪ್ರಶ್ನಿಸಬಹುದು. ತಮ್ಮಿಂದಾದ ಕೆಲಸವನ್ನು ಜನ ಸಾಮಾನ್ಯರು ಮಾಡಿದ್ದಾರೆ. ನೀವೆಲ್ಲಾ ಸೆಲೆಬ್ರೆಟಿಗಳು, ನಿಮ್ಮ ಮಾತನ್ನು ನಿಮ್ಮ ಅಭಿಮಾನಿಗಳು ಫಾಲೋ ಮಾಡ್ತಾರೆ. ಹೀಗಾಗಿಯೇ ನೀವು ಸಮಾಜಕ್ಕೆ ಆದರ್ಶಪ್ರಾಯರಾಗಿರುವ ಮಂದಿ ಹೋಗಿ ಬನ್ನಿ ಅನ್ನೋದು.
Discussion about this post