ಬೆಂಗಳೂರು : ಕೋರಮಂಗಲ ಆಡಿ ಕಾರು ಅಪಘಾತದಲ್ಲಿ 7 ಜನ ಮೃತಪಟ್ಟಿದ್ದಾರೆ. ಮಕ್ಕಳನ್ನು ಕಳೆದುಕೊಂಡು ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಸೋಮವಾರ ರಾತ್ರಿ ನಮ್ಮ ಜೊತೆ ಮಾತನಾಡಿದ ಮಕ್ಕಳು ಮಂಗಳವಾರ ಬೆಳಕು ಹರಿಯುವ ಮುನ್ನವೇ ಇಲ್ಲ ಅಂದ್ರೆ ಅವರು ನಂಬುವುದಾದರೂ ಹೇಗೆ. ಮಕ್ಕಳು ನಮ್ಮ ಅಂತ್ಯ ಸಂಸ್ಕಾರ ನೆರವೇರಿಸಬೇಕು ಎಂದು ಪೋಷಕರು ಬಯಸುತ್ತಾರೆ.ಅಂತಹುದರಲ್ಲಿ ಮಕ್ಕಳ ಅಂತ್ಯಸಂಸ್ಕಾರವನ್ನು ಪೋಷಕರು ನಡೆಸುವ ಪರಿಸ್ಥಿತಿ ಬರುತ್ತದೆ ಅಂದ್ರೆ ಅದು ವಿಧಿಯಾಟವಲ್ಲವೇ.
ಈ ನಡುವೆ ಕಾರು ಅಪಘಾತಕ್ಕೆ ಬಲಿಯಾಗಿರುವ ಬಿಂದು ತಂದೆಯದ್ದು ಕರಳು ಕಿತ್ತು ಬರೋ ನೋವಿನ ಕಥೆ. ಸೋಮವಾರ ರಾತ್ರಿ ತಂದೆಯೊಂದಿಗೆ ಖುಷಿ ಖುಷಿಯಾಗಿಯೇ ಮಾತನಾಡಿದ್ದಳು. ಕೆಲಸ,ಕಚೇರಿ, ಊಟ ಹೀಗೆ ಎಲ್ಲಾ ವಿಚಾರಗಳ ಕುರಿತಂತೆ ತಂದೆ ಜೊತೆ ಚರ್ಚಿಸಿದ್ಲು. ಆದರೆ ಬೆಳಗ್ಗೆ ಎದ್ದ ಚಂದ್ರಶೇಖರ್ ಟಿವಿ ಆನ್ ಮಾಡಿದ್ರೆ ಮಗಳು ಸತ್ತ ಸುದ್ದಿ ಪ್ರಸಾರವಾಗುತ್ತಿತ್ತು. ಒಂದು ಕ್ಷಣ ವಿಷಯ ನಂಬದ ಚಂದ್ರಶೇಖರ್ ಬೆಂಗಳೂರಿಗೆ ದೌಡಾಯಿಸಿದ್ದಾರೆ. ಟಿವಿಯಲ್ಲಿ ಬರುತ್ತಿರೋ ಸುದ್ದಿ ಸುಳ್ಳಾಗಲಿ ಎಂದು ಬಯಸಿದ್ರೋ, ಅದು ಸತ್ಯವಾಗಿತ್ತು.
ಇನ್ನು ಬಿಂದು ಹಾಗೂ ಶಾಸಕರ ಪುತ್ರ ಕರುಣಾಸಾಗರ್ ಸಂಬಂಧ ಕುರಿತಂತೆ ಮಾತನಾಡಿರುವ ಚಂದ್ರಶೇಖರ್, ಎರಡೂ ಕುಟುಂಬಗಳು ಪರಸ್ಪರ ಸಂಬಂಧಿಕರೇ ಆಗಿದ್ದು,ಅವರಿಬ್ಬರು ಗೆಳೆಯರಾಗಿದ್ದರು. ಮದುವೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದರು. ಆದರೆ ನಿಶ್ಚಿತಾರ್ಥವಾಗಿರಲಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
Bengaluru Police — investigating the horrific Audi Q3 car crash that killed seven people, including a DMK MLA’s son — said none of the victims were wearing seat belts as a result of which the safety airbags didn’t open.
Discussion about this post