ಮಹಾಮನೆಯನ್ನು ಸೇರಿಕೊಂಡಿರುವ ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ ತಮ್ಮ ವ್ಯಕ್ತಿತ್ವವನ್ನೇ ಮರೆತಿದ್ದಾರೆ. ಮಹಾಮನೆಯಲ್ಲಿ ಶಕುನಿ ಆಟವನ್ನು ಶುರುವಿಟ್ಟುಕೊಂಡಿರುವ ಅವರಿಬ್ಬರು, ಪರಸ್ಪರ ಯಾವಾಗ ಕಿತ್ತಾಟ ಶುರುವಿಟ್ಟುಕೊಳ್ಳುತ್ತಾರೆ ಅನ್ನುವುದೇ ಗೊತ್ತಿಲ್ಲ.
ಇಷ್ಟು ದಿನಗಳ ಕಾಲ ದಿವ್ಯಾ ಉರುಡುಗ, ದಿವ್ಯಾ ಸುರೇಶ್ ಬಗ್ಗೆ ಮಾತನಾಡುತ್ತಿದ್ದವರು ಪ್ರಿಯಾಂಕ ಬಗ್ಗೆ ನಾಲಗೆ ಹರಿಬಿಡಲಾರಂಭಿಸಿದ್ದಾರೆ. ಪ್ರಿಯಾಂಕ ಕುರಿತಂತೆ ಮಾತು ಪ್ರಾರಂಭಿಸಿದ ಸಂಬರಗಿ, ಪ್ರಿಯಾಂಕ ಚಾರ್ಮಿಂಗ್ ಗರ್ಲ್, ಆಕೆಗೆ ಹೇಗೆ ಆಡಬೇಕು ಅನ್ನುವುದು ಗೊತ್ತಿದೆ ಅಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಚಂದ್ರಚೂಡ, ಮಂಜುಗೆ ಬಿಳಿ ಕೂದಲು ತೆಗೆಯುವುದೇನು, ಶವಂತ್ ಲಪ್ ಪ್ರಪೋಸ್ ಏನು, ರಘು ತಲೆಗೆ ಎಣ್ಣೆಯೇನು, ಇದನ್ನು ನೋಡಿದರೆ ಆಕೆ ಆರ್ಟಿಫಿಶಿಯಲ್ ಎಂದು ಗೊತ್ತಾಗುತ್ತದೆ ಅಂದಿದ್ದಾರೆ.
ಚಂದ್ರಚೂ ಇಷ್ಟು ಹೇಳಿದ್ದೆ ಸಾಕು ಅನ್ನುವಂತೆ ಕಾಯುತ್ತಿದ್ದ ಸಂಬರಗಿ, ಮೊದಲ ದಿನ ಆಕೆ ಬಂದು ಕೈ ನೋಯುತ್ತಿದೆ ಮಸಾಜ್ ಮಾಡಿ ಅಂದಾಗ ಶಾಕ್ ಆದೆ ಅಂದಿದ್ದಾರೆ. ಇದೇ ವೇಳೆ ಪ್ರಿಯಾಂಕಗೆ ಯಾರನ್ನ ಹೇಗೆ ಸೆಟ್ ಮಾಡಬೇಕು ಅನ್ನುವುದು ಗೊತ್ತಿದೆ ಎಂದು ಹೇಳಿದ್ದಾರೆ.
ಇವರಿಬ್ಬರ ಚರ್ಚೆಗಳನ್ನು ಗಮನಿಸುತ್ತಿದ್ರೆ ತಾವು ಮನೆಯೊಳಗಡೆ ಬಂದಿದ್ಯಾಕೆ ಅನ್ನುವುದನ್ನು ಮರೆತಿದ್ದಾರೆ ಅನ್ನುವುದು ಸ್ಪಷ್ಟ. ತಾವು ಬಂದಿರುವ ಉದ್ದೇಶ ಗೊತ್ತಿರುತ್ತಿದ್ರೆ ಇವರು ಹೀಗಾಡುತ್ತಿರಲಿಲ್ಲ.
Discussion about this post