ಬಿಜೆಪಿ ಸಭೆಯಲ್ಲಿ ಯಡಿಯೂರಪ್ಪ ಆಡಿದ ಮಾತುಗಳು ಇದೀಗ ವೈರಲ್ ಆಗಿದೆ. ಇದು ಬಿಜೆಪಿ ನಾಯಕರ ಉನ್ನತ ಮಟ್ಟದ ಸಭೆಯಲ್ಲಿ ರೆಕಾರ್ಡ್ ಆಗಿರುವ ಆಡಿಯೋ. ಹೀಗಾಗಿ ಇದನ್ನು ಬಿಜೆಪಿ ನಾಯಕರೇ ರೆಕಾರ್ಡ್ ಮಾಡಿರಬಹುದು ಅನ್ನುವುದರಲ್ಲಿ ಸಂಶಯವಿಲ್ಲ.
ಈ ನಡುವೆ ಆಡಿಯೋ ರಂಪಾಟ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಈ ಆಡಿಯೋವನ್ನು ನಳಿನ್ ಕುಮಾರ್ ಕಟೀಲ್ ಮಾಡ್ಸಿರಬೇಕು, ಇಲ್ಲಾ ಲಕ್ಷ್ಮಣ ಸವದಿ ಮಾಡ್ಸಿರಬೇಕು, ಇಲ್ಲಾ ಬೊಮ್ಮಾಯಿ ಮಗ ಮಾಡ್ಸಿರಬೇಕು ಎಂದಿದ್ದಾರೆ.
ಬೆಳಗಾವಿಯ ಸಾಂಬ್ರಾ ಏರ್ಪೋರ್ಟ್ನಲ್ಲಿ ಮಾತನಾಡಿದ ಸಿದ್ದರಾಮಯ್ಯ ಈ ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ರಾಜಕೀಯ ಹೇಳಿಕೆ ಎಂದು ಸುಮ್ಮನಾಗುವ ಹಾಗಿಲ್ಲ. ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಬೇಕು.
Discussion about this post