ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕಮಲವರಳಿಸಲು ಸಿದ್ದತೆ ನಡೆಸಿಕೊಂಡಿರುವ ಬಿಜೆಪಿ ಅದಕ್ಕಾದಿ ಎಐಎಡಿಎಂಕೆಯ ದೋಣೆಯಲ್ಲಿ ಸಾಗಲು ಸಿದ್ದತೆ ಮಾಡಿಕೊಂಡಿದೆ.
ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೆ ಒಂದಿಷ್ಟು ಸ್ಥಾನಗಳನ್ನು ಗಳಿಸೋದು ಬಿಜೆಪಿಯ ಉದ್ದೇಶ.
ಈ ಮೂಲಕ ಮುಂದಿನ ವರ್ಷಗಳಲ್ಲಿ ಇಡೀ ತಮಿಳುನಾಡಿನಲ್ಲಿ ಕಮಲವರಳಬೇಕು ಎಂದು ಯೋಜಿಸಲಾಗಿದೆ.
ಈ ಮೂಲಕ ಸುದೀರ್ಘ ವರ್ಷಗಳಿಂದ ಪ್ರಾದೇಶಿಕ ಪಕ್ಷದ ಕೈಯಲ್ಲಿದ್ದ ಅಧಿಕಾರವನ್ನು ಕಸಿದುಕೊಳ್ಳಲು ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ.
ಇದರ ಮುಂದುವರಿದ ಊಗವಾಗಿ ಬಿಜೆಪಿಯೊಂದಿಗೆ ಸೀಟು ಹಂಚಿಕೆಯನ್ನು ಅಂತಿಮಗೊಳಿಸಲು ಮುಖ್ಯಮಂತ್ರಿ ಎಡಪಾಡ್ಡಿ ಕೆ.ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.
ಮಾತುಕತೆ ಸಂದರ್ಭದಲ್ಲಿ 60 ಸೀಟುಗಳನ್ನು ಬಿಟ್ಟುಕೊಡುವಂತೆ ಅಮಿತ್ ಶಾ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಆದರೆ ಇದಕ್ಕೆ ಸಮ್ಮತಿಸದ ಎಐಎಡಿಎಂಕೆ ನಾಯಕರು ಪಿಎಂಕೆ ಅತ್ಯಂತ ಹಿರಿಯ ಪಾಲುದಾರ ಪಕ್ಷವಾಗಿರುವ ಕಾರಣ ಬಿಜೆಪಿಗೆ ಕೇವಲ 21 ಸೀಟು ಕೊಡಬಹುದು ಅಂದಿದ್ದಾರೆ.
ಈಗಿನ ಮಾತುಕತೆಗಳ ಪ್ರಕಾರ ಎಐಎಡಿಎಂಕೆ ಪಿಎಂಕೆಗೆ 23 ಸೀಟುಗಳ ಆಫರ್ ನೀಡಿದ್ದು. ಎಐಎಡಿಎಂಕೆ 170ರಿಂದ 180 ಸೀಟುಗಳಲ್ಲಿ ಸ್ಪರ್ಧಿಸುವ ಸಾಧ್ಯತೆಗಳಿದೆ.
ಜಯಲಲಿತಾ, ಕರುಣಾನಿಧಿ ಇದ್ದಷ್ಟು ದಿನ ತಮಿಳುನಾಡಿನಲ್ಲಿ ಬಿಜೆಪಿಗೆ ಬಲವಿರಲಿಲ್ಲ. ಆದರೆ ಕಳೆದ ಕೆಲ ವರ್ಷಗಳಿಂದ ಬಿಜೆಪಿ ಶಕ್ತಿ ಪಡೆದುಕೊಂಡಿದೆ.
ಅಣ್ಣಾಮಲೈ ಸೇರಿದಂತೆ ಅನೇಕ ನಾಯಕರು ಪಕ್ಷಕ್ಕೆ ಬಂದಿರುವ ಕಾರಣ ಈ ಬಾರಿ ಸರ್ಕಾರ ರಚನೆ ಪ್ರಮುಖ ಪಾತ್ರ ವಹಿಸುವ ವಿಶ್ವಾಸ ಬಿಜೆಪಿಯದ್ದು.
ಆದರೂ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಈಗ್ಲೂ ಬೂತ್ ಮಟ್ಟದ ಕಾರ್ಯಕರ್ತರಿಲ್ಲ ಅನ್ನುವುದನ್ನು ಮರೆಯುವಂತಿಲ್ಲ.
Discussion about this post