ನಟಿ ಅನಿತಾ ಭಟ್ ಕೊರೋನಾ ಆತಂಕ ಕರಗುತ್ತಿದ್ದಂತೆ ಹೊಸ ಪ್ರಾಜೆಕ್ಟ್ ಗಳನ್ನು ಒಪ್ಕಿಕೊಳ್ಳಲಾರಂಭಿಸಿದ್ದಾರೆ.
ಇದೀಗ ತೆಲುಗಿನ ಚಿತ್ರವೊಂದಕ್ಕೆ ಸಹಿ ಮಾಡಿರುವ ಅವರು ಈಗಾಗಲೇ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ.
ಅನಿತಾ ಭಟ್ ಅವರಿಗೆ ತೆಲುಗಿನ ಮೊದಲ ಪ್ರಾಜೆಕ್ಟ್ ಇದಾಗಿದ್ದು, ಕೃಷ್ಣ ಲಂಕ ಟೈಟಲ್ ನ ಚಿತ್ರವನ್ನು ಕಾರ್ತಿಕೇಯ ನಿರ್ದೇಶಿಸುತ್ತಿದ್ದಾರೆ.
ಕನ್ನಡದಲ್ಲಿ ಅನಿತಾ ನಟಿಸಿದ ಸಿನಿಮಾಗಳನ್ನು ನೋಡಿದ ಕೃಷ್ಣ ಲಂಕ ಚಿತ್ರದ ನಿರ್ದೇಶಕರು ಅನಿತಾ ಅವರಿಗೆ ಈ ಆಫರ್ ಕೊಟ್ಟಿದ್ದಾರಂತೆ.
ತೆಲುಗಿನ ಕಥೆಗಾರ ಮತ್ತು ಸಂಭಾಷಣೆಗಾರರಾದ ಪರಚೂರು ಗೋಪಾಲಕೃಷ್ಣ ಅವರ ಪುತ್ರ ಪರಚೂರು ರವಿ ಈ ಚಿತ್ರದ ನಾಯಕರಾಗಿದ್ದಾರೆ.
Discussion about this post