ಬೆಂಗಳೂರು : ಸುವರ್ಣ ವಾಹಿನಿಯ ಸಂಪಾದಕ ಅಜಿತ್ ಹನುಮಕ್ಕನವರ್ ( Ajit hanamakkanavar ) ದೇಶದ ಪರವಾಗಿ ದನಿ ಎತ್ತಿದ್ದು ಇದೀಗ ತಪ್ಪಾಗಿದೆ. ಇತ್ತೀಚೆಗೆ ತಾಲಿಬಾನ್ ಕುರಿತಂತೆ ಸುದೀರ್ಘ ನಡೆಸುತ್ತಿರುವ ಅವರು ದೇಶ ದ್ರೋಹಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಅವರು ಇದೀಗ ಜೀನ ಬೆದರಿಕೆಯನ್ನು ಎದುರಿಸುವಂತಾಗಿದೆ.
ಈ ಬಗ್ಗೆ ಅಜಿತ್ ಅವರೇ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದು, ಬೆದರಿಕೆ ಬಂದ ಸ್ಕ್ರೀನ್ ಶಾಟ್ ಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಬದುಕವ ಆಸೆ ಇಲ್ವ, ಮೇಲೆ ಹೋಗಲು ಆಸೆಯೇ, ನೀನು ಇರೋದು ಬೆಂಗಳೂರಿನಲ್ಲಿ ತಾನೇ, ಕೇರ್ ಫುಲ್ ಆಗಿರು, ಹೆಂಡತಿ ಮಕ್ಕಳು ಬೀದಿಯಲ್ಲಿರುತ್ತಾರೆ, ಬೀದಿ ಹೆಣ ಆಗ್ತೀಯಾ ನೀನು ಎಂದು ಬೆದರಿಸಲಾಗಿದೆ.
ಇನ್ನು ಈ ಬಗ್ಗೆ ಕೂಲ್ ಆಗಿ ಪ್ರತಿಕ್ರಿಯೆ ನೀಡಿರುವ ಅಜಿತ್, This is how my typical professional day ends. Nothing new – nothing special. ನಿನ್ನೆ ಫೋನ್ ಮಾಡಿದ್ದವನೊಬ್ಬ “ಸಾಯ್ತಿಯ ಕಣೋ ನೀನು” ಅಂದ. “ನೀನು ಸಾಯೋದೇ ಇಲ್ವಾ..?” ಅಂತ ಕೇಳಿದೆ. ಗಲಿಬಿಲಿ ಆಯ್ತು ಅವನಿಗೆ. ಯಾರದೋ ಸ್ವರ್ಗದ ಆಸೆಗೆ ಈ ಭೂಮಿ ನರಕ ಆಗಬಾರದು.
ತಮ್ಮ ಕಾಲ – ತಮ್ಮ ದೇಶದ ಅವಶ್ಯಕತೆಗಳಿಗೆ ತಕ್ಕನಾಗಿ ರೂಪಿತಗೊಳ್ಳಬೇಕಾದದ್ದು – ಬದಲಾಗಬಹುದಾದದ್ದು ಮಾತ್ರ ಕಾನೂನು. ಅದು ಮಾತ್ರ ಸಂವಿಧಾನ. ಯಾವುದೋ ಕಾಲದಲ್ಲಿ ಯಾವುದೋ ಪ್ರದೇಶಕ್ಕೆ ಯಾರೋ ಬರೆದಿಟ್ಟ ಕಾಯಿದೆ ಜಗತ್ತನ್ನು ನಡೆಸಕೂಡದು. ಅದು ಯಾವ ಧರ್ಮದ್ದೇ ಆಗಿರಲಿ – ಯಾವ ಸಿದ್ಧಾಂತದ್ದೇ ಆಗಿರಲಿ.ಈ ಧ್ಯೇಯ ಈಡೇರಿಕೆಯಲ್ಲಿ ಹೋಗಬಹುದಾದದ್ದು ಪ್ರಾಣ ತಾನೇ. ಎಷ್ಟೋ ಹೋಗಿವೆ ಅಂದಿದ್ದಾರೆ.
ಈ ನಡುವೆ ಈ ಬೆದರಿಕೆ ಕರೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ದೇಶ ದ್ರೋಹಿಯ ಬಂಧನಕ್ಕೆ ಕ್ರಮ ವಹಿಸಿದ್ದಾರೆ.
Discussion about this post