ರಮ್ಯ ಕೈ ಕೊಟ್ಟು ಹೋದ ‘ನೀರ್ ದೋಸೆ’ ಚಿತ್ರವನ್ನು ಕೈ ಹಿಡಿದದ್ದು ಹರಿಪ್ರಿಯಾ. ಅವತ್ತು ಹರಿಪ್ರಿಯಾ ನಟನೆ ಕಂಡವರು ಅಚ್ಚರಿಗೊಂಡಿದ್ದರು. ಇಷ್ಟು ಚೆನ್ನಾಗಿ ಬೋಲ್ಡ್ ಆಗಿ ಈಕೆ ನಟಿಸಬಲ್ಲ ನಟಿ ಅನ್ನುವುದೇ ಗೊತ್ತಾಗಿತ್ತು ಅವತ್ತು.
ಆದರೆ ಚಿತ್ರ ಹಿಟ್ ಆದರೂ ಹರಿಪ್ರಿಯಾ ವೃತ್ತಿ ಬದುಕಿಗೆ ಆ ಹಿಟ್ ಅನುಕೂಲಕ್ಕಿಂತ ಅನಾನುಕೂಲ ಮಾಡಿಕೊಟ್ಟಿತು.
ಅವಕಾಶ ಹುಡುಕಿಕೊಂಡು ಬಂತು. ಆದರೆ ಎಲ್ಲವೂ ‘ನೀರ್ ದೋಸೆ’ ಛಾಯೆಯ ಪಾತ್ರಗಳು. ಹೀಗಾಗಿ ಅವರು ಆಫರ್ ಗಳನ್ನು ಒಪ್ಪಿಕೊಳ್ಳಲಿಲ್ಲ. ಇದರಿಂದ ಕೈಯಲ್ಲಿ ಅವಕಾಶವಿಲ್ಲದಂತೆ ಕೂರುವ ಹಾಗಾಯ್ತು. ನಡುವೆ ಬಂದ ‘ಅಂಜನಿಪುತ್ರ’ ಮತ್ತು ‘ಭರ್ಜರಿ’ಯಲ್ಲಿ ಆಕೆ ಮುಖ್ಯ ಭೂಮಿಕೆಯಲ್ಲಿ ಇರಲಿಲ್ಲ.
ಈ ಕಾರಣದಿಂದ ಹರಿಪ್ರಿಯಾ ಚಂದನವನಕ್ಕೆ ದೂರದ ಮಾತು ಅನ್ನುವಂತಾಯ್ತು. ಮಾಧ್ಯಮಗಳು ಕೂಡಾ ಹರಿಪ್ರಿಯಾ ಚಿತ್ರರಂಗದಿಂದ ದೂರ, ಅವಕಾಶವೇ ಇಲ್ಲ ಅನ್ನುವಂತೆ ಬಿಂಬಿಸಿತು. ಹಾಗಾಗಿಯೇ ಅವತ್ತು ಆಕೆ ಅನುಭವಿಸಿದ ಹಿಂಸೆಗಳು ಒಂದಲ್ಲ, ಎರಡಲ್ಲ. ಶ್ರೀಮುರಳಿ ಜೊತೆ ನಟಿಸಿದ ‘ಉಗ್ರಂ’ ಚಿತ್ರ ದೊಡ್ಡ ಮಟ್ಟಿಗೆ ಬ್ರೇಕ್ ಕೊಟ್ಟಿತು. ಆದರೆ ‘ನೀರ್ ದೋಸೆ’ ಮನೆಯಲ್ಲೇ ಕೂರವಂತೆ ಮಾಡಿತು.
ಸದಾ ಬ್ಯುಸಿಯಾಗಿರುತ್ತಿದ್ದ ಹರಿಪ್ರಿಯಾ ಮೂರು ತಿಂಗಳು ಕೆಲಸವಿಲ್ಲದೆ ಕೂತಾಗ ಸಾಕಷ್ಟು ಹಿಂಸೆ ಅನುಭವಿಸಿದರು. ಅವಮಾನ ಎದುರಿಸಿದರು. ಆ ದಿನಗಳಿಂದ ಹೊರ ಬರಲು ಆಕೆ ಪಟ್ಟ ಪಾಡು ಅಷ್ಟಿಷ್ಟಲ್ಲ.
ನಿಧಿ ಸುಬ್ಬಯ್ಯ ತೆಗೆಸಿಕೊಂಡ ಒಂದೇ ಒಂದು ಫೋಟೋ ರಾಡಿ ಎಬ್ಬಿಸಲಿದೆ
ಅದೇ ಸಂದರ್ಭಕ್ಕೆ ಕೈ ಹಿಡಿದದ್ದು ‘ಕನಕ’. ಅಲ್ಲಿ ಸಿಕ್ಕ ವಿಧವೆ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಬಳಿಕ ಹಿಂತಿರುಗಿ ನೋಡಲಿಲ್ಲ. ಸೂಜಿದಾರ, ಸಂಹಾರ ಚಿತ್ರದಲ್ಲಿ ಅವಕಾಶ ಸಿಕ್ತು. ಇದೀಗ ಹರಿಪ್ರಿಯಾ ನಟನೆ ಆರು ಚಿತ್ರಗಳು ಬಿಡುಗಡೆಗೆ ಕಾದಿದೆ.
ಲೈಫ್ ಜೊತೆಗೊಂದು ಸೆಲ್ಫಿ,ಸೂಜಿದಾರ, ಡಾಟರ್ ಆಫ್ ಪಾರ್ವತಮ್ಮ, ಕಥಾ ಸಂಗಮ, ಬೆಲ್ ಬಾಟಮ್, ಹಾಗೂ ಕುರುಕ್ಷೇತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಹರಿಪ್ರಿಯಾ ಇಟ್ಟುಕೊಂಡಿದ್ದಾರೆ.
ಹಾಗಂತ ಹರಿಪ್ರಿಯಾ ಚಿತ್ರರಂಗಕ್ಕೆ ಕಾಲಿಟ್ಟ ವೇಳೆ ಸುಲಭವಿರಲಿಲ್ಲ. ಪರಭಾಷಾ ನಟಿಯರು ಕನ್ನಡ ಚಿತ್ರರಂಗದಲ್ಲಿ ಮೆರೆಯುತ್ತಿದ್ದರು. ಇದರ ಬಿಸಿ ಹರಿಪ್ರಿಯಾಗೂ ತಟ್ಟಿತ್ತು.16ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಬಂದವರು ಧೃತಿಗೆಡಲಿಲ್ಲ. ಮುಂದೊಂದು ದಿನ ಒಳ್ಳೆಯ ದಿನ ಬರುತ್ತದೆ ಎಂದು ಕಾದರು. ಆ ದಿನಗಳು ಇದೀಗ ಬಂದಿದೆ.
ಮುರಿದು ಬಿತ್ತಾ ರಶ್ಮಿಕಾ – ರಕ್ಷಿತ್ ಶೆಟ್ಟಿ ಎಂಗೇಜ್ಮೆಂಟ್…..
ಗಾಢ್ ಫಾದರ್ ಇಲ್ಲದೆ ಬಂದ ಹರಿಪ್ರಿಯಾ ಅವರಿಗೆ ಅಮ್ಮನೇ ಗಾಢ್ ಫಾದರ್. ಹೀಗಾಗಿ ಎರಡು ಮೂರು ಸಿನಿಮಾ ಮಾಡಿದಾಗ ನಿರ್ಗಮಿಸುವ ಕಾಲ ಬರುತ್ತದೆ ಅಂದುಕೊಂಡಿದ್ದರು. ಆದರೆ ಅದೃಷ್ಟ ಕೈ ಬಿಡಲಿಲ್ಲ. ಹಾರ್ಡ್ ವರ್ಕ್ ಅವರ ಕೈ ಹಿಡಿಯಿತು.
ಇನ್ನೊಂದಿಷ್ಟು ವರ್ಷದ ಮಟ್ಟಿಗೆ ಹರಿಪ್ರಿಯಾ ಬೇಡಿಕೆಯ ನಟಿಯಾಗಿರುತ್ತಾರೆ. ಕೈಯಲ್ಲಿರುವ ಚಿತ್ರಗಳು ಬಿಡುಗಡೆಯ ನಂತರ ಮತ್ತಷ್ಟು ಅವಕಾಶ ಅವರನ್ನು ಹುಡುಕಿಕೊಂಡು ಬರುವುದು ಗ್ಯಾರಂಟಿ.
Discussion about this post