ಬೆಂಗಳೂರು : ನಟಿ ಶರ್ಮಿಳಾ ಮಾಂಡ್ರೆ ಕಾರು ಶನಿವಾರ ಬೆಳಗಿನ ಜಾನ ಅಪಘಾತಕ್ಕೀಡಾಗಿದೆ.
ಲಾಕ್ ಡೌನ್ ನಿಯಮ ಮುರಿದು ತನ್ನ ಗೆಳೆಯರ ಜೊತೆ ರಸ್ತೆಗಿಳಿದಿದ್ದ ಆಕೆ ವಸಂತನಗರ ಸಮೀಪದ ಅಂಡರ್ ಪಾಸ್ ಪಿಲ್ಲರ್ ಒಂದಕ್ಕೆ ತಮ್ಮ ಗಳೆಯರನ ಜಾಗ್ವಾರ್ ಕಾರನ್ನು ಡಿಕ್ಕಿ ಹೊಡೆದಿದ್ದಾರೆ.
ಇದರಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮಾಂಡ್ರೆ ಸೇರಿ ಅವರ ಗೆಳೆಯರಿಗೆ ಗಾಯವಾಗಿದೆ.
ಘಟನೆ ಬಳಿಕ ಆಸ್ಪತ್ರೆ ಸೇರಿದ್ದ ಆಕೆ, ಜಯನಗರದಲ್ಲಿ ಕಾರು ಅಪಘಾತವಾಯ್ತು ಎಂದು ಕಥೆ ಕಟ್ಟಿದ್ದರು. ಆದರೆ ಅಷ್ಟು ಹೊತ್ತಿಗೆ ಫೀಲ್ಡಿಗೆ ಇಳಿದಿದ್ದ ಪೊಲೀಸರು ಶರ್ಮಿಳಾ ಮಾಂಡ್ರೆಯ ಮಹಾನಾಟಕವನ್ನು ಬಯಲು ಮಾಡಿದ್ದರು.
ಲಾಕ್ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದ್ದರೂ ಜನರು ಮಾತು ಕೇಳುತ್ತಿಲ್ಲ. ಜನಸಾಮಾನ್ಯರು ಮಾತ್ರವಲ್ಲದೆ ಸೆಲೆಬ್ರಿಟಿಗಳಿಂದಲೂ ನಿಯಮ ಉಲ್ಲಂಘನೆ ಆಗುತ್ತಿದೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣ.
ಇದೇ ಶರ್ಮಿಳಾ ಕೆಲ ದಿನಗಳ ಹಿಂದೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ Stay home ಎಂದು ಬರೆದುಕೊಂಡಿದ್ದರು. ಆದರೆ ಹೇಳಿದ್ದು ಒಂದು ಮಾಡಿದ್ದು ಒಂದು ಈ ನಟಿ ಮಣಿ.
ಇವರಿಗೆ ಬುದ್ದಿ ಬರಬೇಕಾದರೆ ದೇಶ ಸಂಕಷ್ಟದಲ್ಲಿರುವ ಸಮಯದಲ್ಲಿ ಹುಚ್ಚಾಟವಾಡಿದ ಕಾರಣಕ್ಕೆ ಚಿತ್ರರಂಗದಿಂದ ಒಂದಿಷ್ಟು ವರ್ಷ ಬಹಿಷ್ಕಾರ ಹಾಕಬೇಕು. ಆಗ ಅನ್ನದ ಬೆಲೆ ಗೊತ್ತಾಗುತ್ತದೆ.
‘ಸೋಶಿಯಲ್ ಡಿಸ್ಟೆನ್ಸಿಂಗ್ ಮತ್ತು ಐಸೋಲೇಷನ್ ನಮ್ಮ ಆಯ್ಕೆ ಅಲ್ಲ. ಅದು ಈ ಹೊತ್ತಿನ ಅಗತ್ಯ. ಉತ್ತಮ ಭವಿಷ್ಯಕ್ಕಾಗಿ ನಾವು ಮಾಡುತ್ತಿರುವ ಸಣ್ಣ ತ್ಯಾಗ ಅಷ್ಟೇ. ಹಗಲಿರುಳು ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಪಾಸಿಟಿವ್ ವೈಬ್ಸ್ ಕಳಿಸೋಣ. ಎಲ್ಲರೂ ಮನೆಯಲ್ಲೇ ಇರಿ, ಆರೋಗ್ಯವಾಗಿರಿ’ ಎಂದು ಭಾಷಣ ಮಾಡಿದ ಅವರು ಸ್ವತಃ ಮಧ್ಯರಾತ್ರಿಯಲ್ಲಿ ಹೊರಬಂದು ಐಷಾರಾಮಿ ಕಾರಿಯಲ್ಲಿ ಯಾಕೆ ಸುತ್ತಾಟ ನಡೆಸಿದರು ಎಂಬುದಕ್ಕೆ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.
Discussion about this post