ಅಭಿಷೇಕ್ ಅಂಬರೀಶ್.. ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನೇ ಹೋಲುವ ವ್ಯಕ್ತಿತ್ವ. ಅದು ದನಿಯಿಂದ ಹಿಡಿದು ನಡೆ ನುಡಿಯ ತನಕ.
ಇದೀಗ ತಾಯಿ ಸಂಸದೆಯಾಗಿರುವ ಸಂತೋಷದ ಜೊತೆಗೆ ಒತ್ತಡಕ್ಕೆ ಸಿಲುಕಿರುವ ಅಭಿ, ಮಂಡ್ಯ ಜನರ ಸಂಕಷ್ಟಕ್ಕೆ ತಾಯಿ ಅನುಪಸ್ಥಿತಿ ಸಂದರ್ಭದಲ್ಲಿ ಮಿಡಿಯುತ್ತಿದ್ದಾರೆ.
ನಿಮ್ಮ ಹಳೆಯ ಲ್ಯಾಪ್ ಟಾಪ್ ಗಳನ್ನು ಒಳ್ಳೆ ದರಕ್ಕೆ ಮಾರಬೇಕಾ..?
ದಳಪತಿಗಳ ಟೀಕೆಗೆ ಎಲ್ಲೂ ಸಿಕ್ಕಿ ಹಾಕಿಕೊಳ್ಳಬಾರದು ಅನ್ನುವ ಕಾರಣಕ್ಕೆ ತಾಯಿ ಸುಮಲತಾ ದೆಹಲಿ ಅಥವಾ ಇನ್ನಿತರ ಕಾರ್ಯಕ್ರಮಕ್ಕೆ ತೆರಳಿರುವ ಸಂದರ್ಭದಲ್ಲಿ ತಾವೇ ಮತದಾರರೊಂದಿಗೆ ಬೇರೆಯುತ್ತಾರೆ. ಹೀಗಾಗಿ ಅವರು ಸದಾ ಬ್ಯುಸಿ.
ಈ ಬ್ಯುಸಿಯ ನಡುವೆಯೂ ಅಭಿಷೇಕ್, ಒಳ್ಳೆ ಹುಡುಗ ಪ್ರಥಮ್ ಅಭಿನಯದ ನಟ ಭಯಕಂರ ಸೆಟ್ ಗೆ ಭೇಟಿ ಕೊಟ್ಟು ಹಾರೈಸಿ ಬಂದಿದ್ದಾರೆ.
ಮನೆ ಬಾಗಿಲಿಗೆ ಬಂದು ನಿಮ್ಮ ಮೊಬೈಲ್ ರಿಪೇರಿ ಮಾಡ್ತಾರೆ
ಇನ್ನು ಪ್ರಥಮ್ ಬಗ್ಗೆ ಹೇಳಬೇಕಾಗಿಲ್ಲ. ಬಿಗ್ ಬಾಸ್ ಮನೆಯಿಂದ ಬೆಳಕಿಗೆ ಬಂದ ಪ್ರತಿಭೆ ಕರ್ನಾಟಕವನ್ನು ಸೂಜಿಗಲ್ಲಿನಂತೆ ಎಳೆದ ಹುಡುಗ.
ತನ್ನ ಮಾತುಗಳನ್ನೇ ಬಂಡವಾಳ ಮಾಡಿಕೊಂಡಿರುವ ಪ್ರಥಮ್ ಪ್ರದಾನಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ ಜೊತೆಗೊಂದು ಸೆಲ್ಪಿ ತೆಗೆದುಕೊಳ್ಳುವುದು ಬಾಕಿ. ಅಷ್ಟರ ಮಟ್ಟಿಗೆ ಹಿರಿ ಕಿರಿಯರೆನ್ನದೆ ಬೆರೆಯುವ ಮನಸ್ಸು. ಹೀಗಾಗಿ ಚಂದನವನದ ಸ್ಟಾರ್ ಗಳು ಪ್ರಥಮ್ ಬೆನ್ನನ್ನು ಸದಾ ತಟ್ಟುತ್ತಿರುತ್ತಾರೆ.
ಪ್ರಥಮ್ ಶೂಟಿಂಗ್ ಮಂಡ್ಯಕ್ಕೆ ಹೋಗುವ ಹಾದಿಯಲ್ಲೇ ನಡೆಯುತ್ತಿದೆ ಅನ್ನುವುದನ್ನು ತಿಳಿದ ಅಭಿಷೇಕ್, ನಟ ಭಯಂಕರ ಶೂಟಿಂಗ್ ಸ್ಪಾಟಿಗೆ ಭೇಟಿ ನೀಡಿ ಕೊಟ್ಟು ಪ್ರಥಮ್ ಅವರಿಗೆ ಅಚ್ಚರಿ ಗಿಫ್ಟ್ ಕೊಟ್ಟಿದ್ದಾರೆ.
4 ಗಂಟೆಗೂ ಹೆಚ್ಚು ಕಾಲ ಪ್ರಥಮ್ ಅವರ ಜೊತೆಗೇ ಇದ್ದು ಬೆನ್ನು ತಟ್ಟಿ ಬಂದಿದ್ದಾರೆ. ಮಾತ್ರವಲ್ಲದೆ ಒಂದೆರೆಡು ದೃಶ್ಯಗಳಿಗೆ ನಿರ್ದೇಶನ ಕೂಡಾ ಮಾಡಿದ್ದಾರಂತೆ.
ಈ ಮೊಬೈಲ್ ಚಾರ್ಜರ್ ಕೇಬಲ್ ನಿಮ್ಮ ಮನ ಸೆಳೆಯೋದು ಗ್ಯಾರಂಟಿ
ಇನ್ನು ಅಭಿಷೇಕ್ ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಥಮ್ “ಅರ್ಥ ಮಾಡ್ಕೊಳಪ್ಪ ಪ್ರಥಮ್…! ಅಮ್ಮ ಡೆಲ್ಲಿಲಿ ಇದ್ದಾಗ,ನಾನ್ ಬೆಂಗಳೂರಲ್ಲಿ ಇರ್ಬೇಕು…ಅಮ್ಮ ಬೆಂಗಳೂರಲ್ಲಿ ಇದ್ದಾಗ ನಾನ್ ಮಂಡ್ಯದಲ್ಲಿ ಇರ್ಬೇಕು…! ನೀನ್ direction ಮಾಡ್ತಿದ್ಯಾ…ನೋಡೋಣ ಅಂತ ಬಂದೆ!ಮಂಡ್ಯದಲ್ಲಿ ತುಂಬಾ ಕೆಲಸ ಇದೆ…! ಬರ್ತಾ ಇದ್ದಂಗೆ ಹೀಗೆ ಹೇಳಿ,ಮಾತು ಶುರು ಮಾಡಿದ ಮರಿ ಮಂಡ್ಯದ ಗಂಡು!!! ನಮಗೆ ಅಭಿಷೇಕ್ ರನ್ನ ಕಳಿಸೋಕೆ ಇಷ್ಟ ಇಲ್ಲ…!ಆದ್ರೆ ಮಂಡ್ಯದಲ್ಲಿ ಒಪ್ಪಿಕೊಂಡಿರೋ ಕೆಲಸ ಬೇರೆ! ಏನ್ ಹೇಳೋದು ಈ ಪ್ರೀತಿಗೆ? 4 ಗಂಟೆಗೂ ಹೆಚ್ಚು ನನ್ನ ಜೊತೆ ಇದ್ದು @nata_bhayankara.team ಸಿನಿಮಾ ಬಗ್ಗೆ ಮಾತಾಡಿ ಕೆಲವು ದೃಶ್ಯಗಳಿಗೆ direction ಮಾಡಿ ಸಕ್ಕತ್ ಹರಟೆ ತರಲೆ ತಮಾಷೆ ಮಾಡಿ ಎಲ್ಲರೊಳಗೊಂದಾದ young rebel… ಅಲ್ಲ…ಹೆಂಗೆ ನೋಡಿದ್ರೂ ರೆಬೆಲ್…!ಖುಷಿ ಅಂದ್ರೆ junior rebel ನನಗೆ ಒಂದೆರಡು ದೃಶ್ಯಗಳು direction ಮಾಡಿದ್ದು!!!ಒಳ್ಳೇ ಮನುಷ್ಯ ಗುರು! ತಂದೆಗೆ ತಕ್ಕ ಮಗ ಅಂದ್ರೆ ಅದು ನಮ್ ಅಭಿಶೇಕ್ ಮಾತ್ರ…
Buy Outing Clothing For kids starting from Rs.255
ಅಪ್ಪ ಕೈಗೆ ಸಿಕ್ತಿರ್ಲಿಲ್ಲ…ಮಗ phone ಸಿಗೋದಿಲ್ಲ But ಪ್ರೀತಿ,ವಿಶ್ವಾಸದಲ್ಲಿ…ಅಪ್ಪನ್ನ ಮೀರುಸ್ತಾರೆ!!!ನನ್ನ shoot ಮುಗಿಸಿ ಮಂಡ್ಯದ ಜನಗಳನ್ನ ನೋಡೋಕೆ ಹೊರಟ್ರು ನಮ್ ಜೂನಿಯರ್…” ಅಂದಿದ್ದಾರೆ.
ಮೊನ್ನೆ ಮೊನ್ನೆ ಗಣೇಶ್ ಪ್ರಥಮ್ ನನ್ನು ಭೇಟಿಯಾಗಿ ಬಂದಿದ್ದರು. ಪರಿಸ್ಥಿತಿ ನೋಡಿದ್ರೆ ಅತ್ಯಂತ ಹೆಚ್ಚು ಸ್ಟಾರ್ ಗಳು ಕಾಣಿಸಿಕೊಂಡ ಚಿತ್ರ ಅಂದ್ರೆ ಅದು ನಟ ಭಯಂಕರ ಅನ್ನುವ ಹೆಸರು ಬರೋದು ಗ್ಯಾರಂಟಿ.
Discussion about this post