ಬೆಂಗಳೂರು : ನಗರದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ನ ಜೆ.ಎನ್. ಟಾಟಾ ಆಡಿಟೋರಿಯಂನಲ್ಲಿ ಬಯೋ ಜಿನೆಸಿಸ್ ಹೆಲ್ತ್ ಕ್ಲಸ್ಟರ್ ಆಶ್ರಯದಲ್ಲಿ ಐದನೇ ವಿಶ್ವ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ಸಮಾವೇಶವನ್ನು ಪುದುಚೇರಿ ರಾಜ್ಯಪಾಲೆ ಕಿರಣ್ ಬೇಡಿ ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು 23 ನೇ ವಯಸ್ಸಿನಲ್ಲಿ ಎಸ್ ಪಿ ಯಾಗಿದ್ದೆ. ಪರ್ಸನಲ್ ಫಿಟ್ನೆಸ್ ಹಾಗೂ ಮೆಂಟಲ್ ಫಿಟ್ನೆಸ್ ಗೆ ಆದ್ಯತೆ ಕೊಡುತ್ತಿದ್ದೆ. ಬೆಳಗ್ಗೆ ಪೊಲೀಸ್ ಠಾಣೆಗೆ ಹೋಗುತ್ತಿದ್ದೆ. ನನ್ನ ವೃತ್ತಿ ಜೀವನದಲ್ಲಿ ಸಿಬ್ಬಂದಿಗಳಿಂದ ತುಂಬಾ ಕಲಿತಿದ್ದೇನೆ. ನಾವು ಮೊದಲು ಒಳ್ಳೆಯ ನಾಗರಿಕರಾಗಬೇಕು.ಐಪಿಎಸ್ ಅನ್ನೋದು ಜನರಿಗೆ ಸಹಾಯ ಮಾಡುವ ಸರ್ವೀಸ್ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ರಾಣಿ ಪ್ರಮೋದ ದೇವಿ ಒಡೆಯರ್, ನಾನು ಒಬ್ಬ ಉದ್ಯಮಿಯಾಗಿಲ್ಲ.ಆಗಿನ ಕಾಲದಲ್ಲಿ ಸಾಕಷ್ಟು ಸ್ವಾತಂತ್ರ್ಯವಿತ್ತು. ಎಲ್ಲರೂ ಒಂದೇ ಎಂಬ ಭಾವನೆ ಇತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಮಹಿಳಾ ಸಬಲೀಕರಣ ಬೇರೆ ಬೇರೆ ರೀತಿ ವರ್ಣಿಸಬಹುದು.. ಸಬಲೀಕರಣ, ಅವಕಾಶ, ವಿದ್ಯಾಭ್ಯಾಸ, ಹೀಗೆ ನಾನಾ ರೀತಿ ವರ್ಣಿಸಬಹುದು. ಸಂಸ್ಕ್ರತಿಯ ಜೊತೆ ಜೊತೆಗೆ ಕೆಲ ವಿಷಯಗಳನ್ನ ಉಳಿಸುವ ಜವಾವ್ದಾರಿ ಮಹಿಳೆಯರದ್ದಾಗಿದೆ. ಕೆಲಭಾಗಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕು. ಮಹಿಳೆಯರು ಆರೋಗ್ಯದ ಕಡೆ ಗಮನಹರಿಸಬೇಕು. ಎಂದು ಕಿವಿ ಮಾತು ಹೇಳಿದರು.
ಸಮಾವೇಶದ ಸಂಚಾಲಕ ಡಾ. ವಿ.ಪಿ. ರಾವ್ ಮಾತನಾಡಿ, ನನ್ನ 25 ವರ್ಷದ ಅನುಭವದಲ್ಲಿ ಅನೇಕ ಸ್ಪೂರ್ತಿದಾಯಕ ಮಹಿಳಾ ನಾಯಕರನ್ನು ಭೇಟಿಯಾಗಿದ್ದೇನೆ. ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಕಂಡವರು ಇದ್ದಾರೆ. ಈ ಮಹಿಳೆಯರು ಬಲವಾದ ಆತ್ಮವಿಶ್ವಾಸ, ಉತ್ಸಾಹ ಹೊಂದಿದ್ದಾರೆ. ಅಲ್ಲದೆ ನಾನು ಭೇಟಿಯಾಗಿದ್ದು ಅತ್ಯಂತ ಶಕ್ತಿಶಾಲಿ ಮಹಿಳೆಯರನ್ನ ಎಂದು ಭಾವಿಸುತ್ತೇನೆ. ಸಮ್ಮೇಳನದಲ್ಲಿ ಮಹಿಳೆಯರು ಪ್ರಸ್ತಾಪಿಸುವ ಹಾಗೂ ಚರ್ಚಿಸುವ ವಿಚಾರಗಳು ವಿಶ್ವ ಆರ್ಥಿಕತೆಗೆ ಕೊಡುಗೆ ನೀಡಲು ಸಹಾಯ ಮಾಡುತ್ತದೆ. ಆ ಮೂಲಕ ಲಿಂಗ ಸಮಾನತೆಯ, ಮತ್ತು ಮಹಿಳಾ ಸಬಲೀಕರಣಕ್ಕೆ ಇಲ್ಲಿ ನಾಂದಿ ಹಾಡಲಾಗುತ್ತದೆ ಎಂದು ಭವಿಷ್ಯ ನುಡಿದರು.

ಕಾರ್ಯಕ್ರಮದಲ್ಲಿ ಐಪಿಎಸ್ ಅಧಿಕಾರಿಗಳಾದ ಡಾ. ರಶ್ಮಿ ಕೃಷ್ಣನ್, ಡಾ. ಕಲ್ಪನಾ ಗೋಪಾಲನ್, ಡಾ ಸೌಮ್ಯ ಮಿಶ್ರಾ ಭಾಗವಹಿಸಿದ್ರು. ವಿಶ್ವ ಮಹಿಳಾ ಸಮಾವೇಶ ಅಧ್ಯಕ್ಷೆ ಡಾ. ಕಾಮಿನಿ ಎ. ರಾವ್, (ಡಬ್ಲ್ಯೂಸಿಡಬ್ಲ್ಯೂ) ಕಾರ್ಯದರ್ಶಿ ಡಾ. ಪದ್ಮಿನಿ ಪ್ರಸಾದ್ ಅವರು ಭಾಗಿಯಾದ್ರು. .ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಉಪಸ್ಥಿತರಿದ್ದರು.
Discussion about this post