ಮೈತ್ರಿ ಸರ್ಕಾರದ ಸಂಪುಟದಲ್ಲಿ ಕಳಂಕವಿಲ್ಲದ ಮಂತ್ರಿಗಳು ಎಷ್ಟು ಜನ ಇದ್ದಾರೆ. ಹುಡುಕಾಡಿದ್ರೆ ಒಂದೆರೆಡು ಮಂದಿ. ಹೋಗ್ಲಿ ಬಿಡಿ ನಾಳೆ ಬಿಜೆಪಿ ಸರ್ಕಾರ ಮಾಡಿದರೂ ಇದೇ ಕರ್ಮಕಾಂಡ.
ಮತದಾರರಾದ ನಮಗೆ ಕೇಸ್ ಹಾಕಿಸಿಕೊಂಡವರು, ಜೈಲಿಗೆ ಹೋಗಿ ಬಂದವರು ಚುನಾವಣೆಗೆ ನಿಂತ್ರೆ ಖುಷಿ. ಸಭ್ಯ, ಸಾಚಾಗಳು ಚುನಾವಣೆಗೆ ನಿಂತ್ರೆ ನಾವೆಲ್ಲಿ ಮತ ಹಾಕುತ್ತೇವೆ.
ನಿಜಕ್ಕೂ ಸಾಚಾಗಳು ಬೇಕು ಅನ್ನಿಸಿದ್ರೆ ಉಪೇಂದ್ರ ಅವರು ಪ್ರಜಾಕೀಯವನ್ನು ಗೆಲ್ಲಿಸಬಹುದಿತ್ತು. ಪಾಪ ಅವರು ಹಣ ಹೆಂಡ ಎಲ್ಲಾ ಹಂಚುವುದಿಲ್ಲ.
ಹೋಗ್ಲಿ ಬಿಡಿ… ಈಗ ವಿಷಯಕ್ಕೆ ಬರೋಣ. ಕರ್ನಾಟಕದಲ್ಲಿ ಐಎಂಎ ಅನ್ನುವ ಸಂಸ್ಥೆ ದೋಖಾ ಮಾಡಿದೆ. ಅದರ ನಾಯಕ ದುಬೈಗೆ ಓಡಿ ಹೋಗಿದ್ದಾನೆ. ದೋಖಾ ಹೋದವರಲ್ಲಿ ದೊಡ್ಡ ಸಂಖ್ಯೆಯ ಮಂದಿ ಅಲ್ಪಸಂಖ್ಯಾತರು.
ಈಗ ಸಂಸ್ಥೆಯ ಜೊತೆ ಲಿಂಕ್ ಹೊಂದಿದ್ದ ಅಲ್ಪಸಂಖ್ಯಾತ ನಾಯಕ ರೋಶನ್ ಬೇಗ್ ಕಾಂಗ್ರೆಸ್ ನಿಂದ್ ಉಚ್ಛಾಟಿತರಾಗಿದ್ದಾರೆ( ಕಾರಣ ಬೇರೆ) ಇದರೊಂದಿಗೆ ಈಗ ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿರುವ ಜಮೀರ್ ಅಹಮ್ಮದ್ ಹೆಸರು ಕೂಡಾ ಇದೇ ಹಗರಣದಲ್ಲಿ ಪ್ರಸ್ತಾಪವಾಗಿದೆ.
ಮಾತ್ರವಲ್ಲದೆ ಅವರಿಗೆ ಇಡಿ ನೋಟೀಸ್ ಬೇರೆ ಕೊಟ್ಟಿದೆ. ಅಂದ್ರೆ ಅವರ ಮೇಲೊಂದು ಸಂಶಯವಿದೆ. ಜನರಿಗೆ ದೋಖಾ ಮಾಡಿರುವ ಸಂಸ್ಥೆ ಜೊತೆ ನಂಟಿತ್ತು ಅಂದ ಮೇಲೆ ದೋಖಾದಲ್ಲಿ ನಿಮ್ಮ ನೆರಳು ಕೂಡಾ ಇದೆ ಅಂದಾಯ್ತು.
ಹಾಗಿದ್ದ ಮೇಲೆ ಕ್ಲೀನ್ ಹ್ಯಾಂಡ್ ಎಂದು ಅನ್ನಿಸಿಕೊಳ್ಳುವ ತನಕ ನೀವು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ತಾನೇ. ನೀವು ತಪ್ಪು ಮಾಡಿಲ್ಲ ಎಂದು ಸಾಬೀತಾಗಲಿ ಆಮೇಲೆ ಸಚಿವರಾಗಿ ಬನ್ನಿ.
ಇಡಿ ನೋಟೀಸ್ ಸ್ವೀಕರಿಸುವ ನಿಮ್ಮ ಮೇಲೆ ಜನರಿಗೊಂದು ಸಂಶಯವಿದೆ. ಹೀಗಾಗಿ ಸಚಿವ ಸ್ಥಾನದಲ್ಲಿದ್ದರೆ SIT ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿದೆ ಅನ್ನುವುದು ಅನುಮಾನ.
ಯಾವುದಕ್ಕೂ IMA ಹೂಡಿಕೆದಾರರಿಗೆ ನ್ಯಾಯ ಸಿಗಬೇಕಾದರೆ ಜಮೀರ್ ರಾಜೀನಾಮೆ ಕೊಡಬೇಕು ತಾನೇ. ಸಚಿವರಾಗಿದ್ರೆ ನ್ಯಾಯ ಅಸಾಧ್ಯ. ಜಮೀರ್ ಅವರೇ ರಾಜೀನಾಮೆ ಕೊಟ್ಟು IMA ವಿರುದ್ಧ ಧರಣಿ ಕುಳಿತುಕೊಳ್ಳಿ. ಬಡ ಮುಸ್ಲಿಂಮರಿಗೆ ನ್ಯಾಯ ಸಿಗಲಿ ಎಂದು ಆಗ್ರಹಿಸಿ.
ಇಡಿ ತನಿಖೆಯಲ್ಲಿ ನಿಮ್ಮ ತಪ್ಪಿಲ್ಲ ಎಂದು ಸಾಬೀತಾಗಲಿ. ಜಮೀರ್ ಸಚಿವರಾದರೆ ರಾಜ್ಯ ಸಂತೋಷ ಪಡುತ್ತದೆ. ಹಾಗಂತ ಜಮೀರ್ ಅವರನ್ನು ಕೆಳಗಿಳಿಸುವ ಅಧಿಕಾರ ಯಾರಿಗಿದೆ. ರಾಜ್ಯದ ಮುಖ್ಯಮಂತ್ರಿಗೋ… ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೋ.. ಕೆಪಿಸಿಸಿ ಅಧ್ಯಕ್ಷ ದಿನೇಶ್ ಅವರಿಗೋ… ವೇಣುಗೋಪಾಲ್ ಅವರಿಗೋ…. ರಾಹುಲ್ ಗಾಂಧಿ ಅವರಿಗೋ….
ಯಾರಿಗಿದೆ ಅನ್ನುವುದೇ ಗೊತ್ತಿಲ್ಲ. ಹಾಗಿದ್ದ ಮೇಲೆ ಹೂಡಿಕೆದಾರರಿಗೆ….?
Discussion about this post