ಟೆಂಪೋ ಚಾಲಕನೊಬ್ಬನಿಗೆ ಪೊಲೀಸ್ ಪೇದೆ ಹಲ್ಲೆ ನಡೆಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವಾಚ್ಯ ಮತ್ತು ಅಶ್ಲೀಲ ಶಬ್ಧ ಬಳಕೆ ಮಾಡಿರುವುದು ರೆಕಾರ್ಡ್ ಆಗಿದೆ.
ಆದರೆ ಇಷ್ಟೆಲ್ಲಾ ಸಾಕ್ಷಿ ಕಣ್ಣ ಮುಂದಿದ್ದರೂ ಕ್ರಮ ಕೈಗೊಳ್ಳಲು ಬೆಂಗಳೂರು ಪೊಲೀಸರು ವಿಳಂಭ ಧೋರಣೆ ತೋರುವಂತೆ ಕಾಣುತ್ತಿದೆ.
ಖಾಕಿ ಇಲಾಖೆಯಲ್ಲಿ ರೌಡಿ ಪೇದೆ : ಟೆಂಪೋ ಚಾಲಕನ ಮೇಲೆ ಟ್ರಾಫಿಕ್ ಪೊಲೀಸಪ್ಪನ ದಾದಾಗಿರಿ
ಘಟನೆ ಕುರಿತಂತೆ ಪ್ರಜಾವಾಣಿ ಪತ್ರಿಕೆಯೊಂದಿಗೆ ಮಾತನಾಡಿರುವ ಪೂರ್ವ ಸಂಚಾರ ವಿಭಾಗದ ಡಿಸಿಪಿ ಜಗದೀಶ್, ವಿಡಿಯೋ ನೋಡಿದ್ದೇನೆ, ತನಿಖೆ ನಡೆಸಿ ವರದಿ ನೀಡುವಂತೆ ಎಸಿಪಿ ಅವರಿಗೆ ಸೂಚನೆ ಕೊಟಿದ್ದೇನೆ, ವರದಿ ಬಂದ ನಂತರ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಹಲಸೂರು ಗೇಟ್ ಪೊಲೀಸ್ ಠಾಣೆಯ ಮುಖ್ಯ ಪೇದೆ ಮಹಾಸ್ವಾಮಿ ಪುರಭವನ ಸಿಗ್ನಲ್ ಸಮೀಪ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಟೆಂಪೋ ಚಾಲಕನೊಂದಿಗೆ ಮಹಾಸ್ವಾಮಿ ಕ್ಯಾತೆ ತೆಗೆದಿದ್ದ, ಟೆಂಪೋ ಹತ್ತಿ ಠಾಣೆಗೆ ಹೋಗುವಂತೆ ಆದೇಶಿಸಿದ್ದ. ಬಳಿಕ ಸೈಡ್ ನಲ್ಲಿ ಹಾಕುವಂತೆ ಸೂಚಿಸಲಾಗಿತ್ತು. ಈ ವೇಳೆ ತಾಲಕ ಸಭ್ಯತೆಯಿಂದ ಮಾತನಾಡುತ್ತಿದ್ದರೂ ಪಿತ್ತ ನೆತ್ತಿಗೇರಿಸಿಕೊಂಡಿದ್ದ ಪೇದೆ ಚಾಲಕನ್ನು ಹಿಗ್ಗಾ ಮುಗ್ಗಾ ಥಳಿಸಿದ್ದ, ಮಾತ್ರವಲ್ಲದೆ ಅದ್ಯಾವ ಹೊಲಸು ಬಾಯಿಯೋ ಗೊತ್ತಿಲ್ಲ ಅಂತಹ ಪದ ಬಳಕೆಯೂ ನಡೆದಿತ್ತು.
ಪೊಲೀಸ್ ಪೇದೆ ಮಾಡಿದ ಕೃತ್ಯದ ಬಗ್ಗೆ ತನಿಖೆಯಾಗಬೇಕು,ವರದಿ ಬರಬೇಕು, ಆದರೆ ಇದೇ ಪೊಲೀಸ್ ಪೇದೆಯ ಮೇಲೆ ಚಾಲಕ ಹಲ್ಲೆ ಮಾಡಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಜಸ್ಟ್ ಥಿಂಕ್ ಮಾಡಿ.
Discussion about this post