Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಅಸ್ತಮ ಕಾಯಿಲೆ ಭಯ ಬೇಡ : ಎಚ್ಚರಿಕೆ ಇರಲಿ – ವಿಶ್ವ ಆಸ್ತಮಾ ದಿನದ ಸ್ಪೆಷಲ್

Radhakrishna Anegundi by Radhakrishna Anegundi
May 5, 2020
in ಆರೋಗ್ಯ / ಆಹಾರ
Share on FacebookShare on TwitterWhatsAppTelegram

ಮೊದಲೆಲ್ಲಾ ಅಸ್ತಮಾ ಅಂದರೆ ಮುಗಿದೇ ಹೋಯ್ತು ಅನ್ನುವ ಪರಿಸ್ಥಿತಿ, ಆದರೆ ಈಗ ವೈದ್ಯಕೀಯ ಜಗತ್ತು ಸಾಕಷ್ಟು ಮುಂದುವರಿದಿದೆ. ಹೀಗಾಗಿ ಅಸ್ತಮಾದೊಂದಿಗೆ ಬದುಕುವುದು ಹೇಗೆ ಅನ್ನುವುದು ಅದು ಕಲಿಸಿಕೊಟ್ಟಿದೆ. ಅಸ್ತಮಾ ಅಂದ ತಕ್ಷಣ ಭಯಪಡುವ ಅಗತ್ಯವಿಲ್ಲ.
ಈಗಿನ ಜೀವನ ಶೈಲಿ, ವಾಯು ಮಾಲಿನ್ಯ, ಧೂಳು ಹೊಗೆಯ ಅಬ್ಬರ ಹೀಗೆ ಒಂದೇ ಎರಡೇ ಅಸ್ತಮಾ ರೋಗಕ್ಕೆ ಕಾರಣ.

ವೈದ್ಯಕೀಯ ಭಾಷೆಯಲ್ಲಿ ಅಸ್ತಮಾಟಿಕ್ ಬ್ರಾಂಖೈಟಿಸ್ (Asthmatic Bronchitis)ಎಂದು ಕರೆಯುವ ಈ ರೋಗ ಮಾರಕವಲ್ಲದಿದ್ದರೂ ಸೂಕ್ತ ಆರೈಕೆ, ಮಾಹಿತಿ ಮತ್ತು ಔಷಧಿಗಳ ಕೊರತೆಯಿಂದ ಜನರು ಅಸ್ತಮಾ ಅಂದ್ರೆ ಆಘಾತಕ್ಕೆ ಒಳಗಾಗುತ್ತಾರೆ.
ಆದರೆ ಇದಕ್ಕೆ ಭಯಪಡೋ ಅಗತ್ಯವಿಲ್ಲ. ಕೆಲವೊಂದು ಸರಳ ಟಿಪ್ಸ್ ಗಳನ್ನು ಪಾಲಿಸುವ ಮೂಲಕ ಅಸ್ತಮಾದೊಂದಿಗೆ ಆರಾಮದಾಯಕ ಜೇವನ ಸಾಗಿಸಬಹುದಾಗಿದೆ.

ಆಲರ್ಜಿ ವಸ್ತುಗಳಿಂದ ದೂರವಿರಿ
ಯಾವ ವಸ್ತು ಅಸ್ತಮಾವನ್ನು ಪ್ರಚೋದಿಸುತ್ತದೆ ಅನ್ನುವುದನ್ನು ತಿಳಿದುಕೊಳ್ಳಿ. ಉಸಿರಿನ ಮೂಲಕ ಯಾವ ವಸ್ತು ಒಳ ಬಂದಾಗ irritant ಆಗುತ್ತದೆ ಅನ್ನುವುದನ್ನು ಗಮನಿಸಿ ಅದರಿಂದ ದೂರವಿರಿ. ಆ ವಸ್ತುಗಳಿಂದ ದೂರವಿರೋದು ಅಸಾಧ್ಯ ಅನ್ನುವುದಾದರೆ  ಸೂಕ್ತ ರಕ್ಷಣೆಯನ್ನು ಪಡೆದುಕೊಳ್ಳಿ

ಔಷಧಿಗಳು ಜೊತೆಗಿರಲಿ
ವೈದ್ಯರು ಕೊಟ್ಟಿರುವ ಅಸ್ತಮಾದ ನಿತ್ಯ ಔಷಧಿಗಳನ್ನು ಸದಾ ನಿಮ್ಮೊಂದಿಗೇ ಕೊಂಡೊಯ್ಯಲು ಮರೆಯಬೇಡಿ. ಜೊತೆಗೆ ಕಾಲ ಕಾಲಕ್ಕೆ ಅಂದ್ರೆ ವೈದ್ಯರು ಸೂಚಿಸಿದ ಸಮಯಕ್ಕೆ ಸೇವಿಸಲು ಅದನ್ನು ಮರೆಯಬೇಡಿ. ಮಾತ್ರವಲ್ಲದೆ ಇನ್ ಹೇಲರ್ ಸದಾ ಜೊತೆಗಿರಲಿ. ಅಸ್ತಮಾ ಆಘಾತ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಬರುತ್ತದೆ. ಈ ಸಮಯದಲ್ಲಿ ಅಸ್ತಮಾ ರೋಗಿಗಳ ಆಪತ್ಬಾಂಧವ ಅಂದರೆ ಇನ್ ಹೇಲರ್.

ಹಣ್ಣು ಮತ್ತು ತರ್ಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಿ
ಹಣ್ಣುಗಳಲ್ಲಿ ಉತ್ತಮ ರೋಗ ನಿರೋಧಕ ಶಕ್ತಿಗಳಿವೆ. ಜೊತೆಗೆ ಅಸ್ತಮಾ ನಿಯಂತ್ರಣಕ್ಕೆ ವಿಟಮಿನ್ ಸಿ ಸಹಕಾರಿ. ಜೊತೆಗೆ ಪ್ರೋಟೀನ್ ಮತ್ತು ಇತರ ಪೋಷಕಾಂಶಗಳೂ ಕೂಡಾ ಅಗತ್ಯ. ಈ ಅಂಶಗಳು ಹೆಚ್ಚಿರುವ ಆಹಾರಗಳಾದ ಬಸಲೆ, ಪಾಲಕ್, ಸ್ಟ್ರಾಬೆರಿ, ಬ್ರೋಕೋಲಿ, ಟೊಮಾಟೋ ಮೊದಲಾದವನ್ನು ಆದಷ್ಟೂ ಸೇವಿಸಿ.
ಆಹಾರ ಆಲರ್ಜಿಗಳಿದೆ ಅನ್ನುವುದಾದರೆ ಅಹಾರಕ್ರಮದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವ ಮೂಲಕ ಎಚ್ಚರಿಕೆ ವಹಿಸಿ. ವೈದ್ಯರೇ ನಿಮಗೆ ಸೂಕ್ತವಾದ ಆಹಾರವನ್ನು ಸೂಚಿಸುತ್ತಾರೆ. ಹಾಗಾಗಿ ವೈದ್ಯರ ಸಲಹೆ ಇಲ್ಲದೇ ನೀವಾಗಿಯೇ ಬೇರಾವುದೇ ಆಹಾರವನ್ನು ಪ್ರಯತ್ನಿಸಲು ಹೋಗದಿರಿ.

ನೋ ಧೂಮಪಾನ
ಧೂಮಪಾನ ಯಾರಿಗೂ ಒಳ್ಳೆಯದಲ್ಲ. ಅದರಲ್ಲೂ ಅಸ್ತಮಾ ರೋಗಿಗಳಿಗೆ ಇದು ಸಾವಿಗೆ ಹತ್ತಿರದ ಸೇತುವೆ. ಒಂದು ವೇಳೆ ಅಸ್ತಮಾವಿದ್ದು  ನೀವು ಧೂಮಪಾನಿಯಾಗಿದ್ದರೆ ಹೊಗೆ ಬಿಡುವ ಅಭ್ಯಾಸದಿಂದ ಹೊರಬರುವುದು ಬೆಟರ್. 
ಧೂಮಪಾನದಿಂದ ಅಸ್ತಮಾ ಸ್ಥಿತಿ ಉಲ್ಬಣಿಸಬಹುದು. ನೀವು ಧೂಮಪಾನಿಯಲ್ಲದ ಅಸ್ತಮಾ ರೋಗಿಯಾಗಿದ್ದರೆ  ಇತರರು ಬಿಡುವ ಹೊಗೆ ನಿಮಗೆ ಮಾರಕ. ಅದಷ್ಟು ಅಂತಹವರ ಸಹವಾಸದಿಂದ ದೂರವಿರಿ, ಅಸಾಧ್ಯ ಅನ್ನುವುದಾದರೆ ವಸ್ತ್ರವೊಂದರ ಸಹಾಯದಿಂದ ಮೂಗು ಮುಚ್ಚಿಕೊಳ್ಳಿ. ಅಥವಾ ಅವರ ಬಳಿ ರಿಕ್ವೆಸ್ಟ್ ಮಾಡಿಕೊಳ್ಳಿ, ಧೂಮಪಾನ ಮಾಡಬೇಡಿ ಎಂದು.

3c3bd8e8c085bdf334fe9a0d238f62c9e8ac859ea3b31a5835542aadc291229c


ವ್ಯಾಯಾಮ ಮಾಡುವುದನ್ನು ಮರೆಯಬೇಡಿ
ಅಸ್ತಮಾ ರೋಗಿಗಳು ವ್ಯಾಯಾಮ ಮಾಡಬಾರದು ಅನ್ನುವ ಮಾತಿದೆ. ಆದರೆ ಇದು ಪೂರ್ತಿ ಸತ್ಯವಲ್ಲ. ವ್ಯಾಯಾಮ ಮಾಡುವಂತಿಲ್ಲ ನಿಜ. ಹಾಗಂತ ವ್ಯಾಯಾಮ ಬೇಡ ಅನ್ನಲಾಗದು. ಶ್ವಾಸಕೋಶದ ಸ್ನಾಯುಗಳು ಬಲಗೊಳ್ಳಲು ವ್ಯಾಯಾಮ ಅತೀ  ಅಗತ್ಯ.
ನಿಮ್ಯ ವೈದ್ಯರ ಸಲಹೆಯೊಂದಿಗೆ ವ್ಯಾಯಾಮ ಮಾಡಿ. ಪ್ರಾಣಾಯಾಮ, ಯೋಗ ಅಸ್ತಮಾ ರೋಗಿಗಳಿಗೆ ಸಾಕಷ್ಟು ನೆಮ್ಮದಿ ಕೊಡುತ್ತದೆ. ಸಾಕಷ್ಟು ನಡಿಗೆಯೂ ರಿಲ್ಯಾಕ್ಸ್ ಭಾವನೆ ತರಿಸುತ್ತದೆ. ವ್ಯಾಯಾಮ ಪ್ರಾರಂಭಿಸುವ ಮುನ್ನ ಅಸ್ತಮಾ ನಿಯಂತ್ರಣದಲ್ಲಿದೆಯೇ ಅನ್ನುವುದನ್ನು ಖಚಿತಪಡಿಸಿಕೊಳ್ಳಿ.

ShareTweetSendShare

Discussion about this post

Related News

Benefits of ghee 15-amazing-health-benefits

Benefits of ghee : ನಿತ್ಯ ಒಂದು ಚಮಚ ದೇಶಿ ದನದ ತುಪ್ಪ ತಿಂದ್ರೆ ಲಾಭ ಸಾವಿರಾರು

cracked heels ayurvedic-remedies

cracked heels : ಅಡುಗೆ ಮನೆಯೇ ಆಸ್ಪತ್ರೆ : ಹಿಮ್ಮಡಿ ಬಿರುಕಿಗೆ ಸಿಂಪಲ್ ಪರಿಹಾರ

High blood pressure : ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಸರಳ ಸೂತ್ರ

ಅತೀಯಾದ ಬಿಸ್ಕೆಟ್ ಸೇವನೆಯಿಂದ ಕ್ಯಾನ್ಸರ್ ಬರಲಿದೆ : ಕ್ಯಾನ್ಸರ್ ಕಾರಕ ಅಂಶಗಳಿರೋ ಬಿಸ್ಕೆಟ್ ಯಾವುದು ಗೊತ್ತಾ…?

100 ವರ್ಷದ ಸಂಶೋಧನೆಗೆ ಸಿಕ್ತು ಫಲ : ಕೊನೆಗೂ ಮಲೇರಿಯಾ ಸೋಲಿಸುವ ಲಸಿಕೆ ಸಂಶೋಧನೆ

2030ಕ್ಕೆ ಹೃದ್ರೋಗದಲ್ಲಿ ಭಾರತವೇ ನಂಬರ್ 1

ಡಯಾಬಿಟಿಸ್ ಕ್ಯಾಪಿಟಲ್ ಆಗುತ್ತಾ ಬೆಂಗಳೂರು… BBMP ಸರ್ವೇಯಲ್ಲಿ ಸ್ಫೋಟಕ ಮಾಹಿತಿ

ರೂಪಾಂತರಿಗೊಂಡ ಡೆಂಘೀ ವೈರಸ್ : ರಾಜ್ಯಕ್ಕೂ ಕಾದಿದೆ ಅಪಾಯ

ಹವಮಾನ ವರದಿಯ ನೇರ ಪ್ರಸಾರದಲ್ಲಿ ಟಿವಿ ಪರದೆ ಮೇಲೆ ಕಾಣಿಸಿಕೊಂಡ ನಾಯಿ ಮರಿ

ವಿದ್ಯಾರ್ಥಿ ಭವನಕ್ಕೆ ಶುಕ್ರವಾರ ರಜೆ ಯಾಕೆ…?

Latest News

afspa-extended-in-manipur-for-6-months-from-october-1-barring-19-police-stations-of-valley

Manipura ಮಣಿಪುರದಲ್ಲಿ ಮತ್ತೆ ಜಾರಿಯಾಗಿರುವ  ಆಫ್ಸ್ಪ ಕಾಯ್ದೆಯ ಬಗ್ಗೆ ನಿಮಗೆಷ್ಟು ಗೊತ್ತು..?

Actor Vijay set to make debut in Tamil Nadu politics

ಅಣ್ಣಾಮಲೈ ಬೆನ್ನಲ್ಲೇ ನಟ ವಿಜಯ್ ತಮಿಳು ಪಾಲಿಟಿಕ್ಸ್ ಗೆ ಎಂಟ್ರಿ : ಸನಾತನ ಧರ್ಮದ ವಿರುದ್ಧ ನಿಂತವರಿಗೆ ಶುರುವಾಗಿದೆ ನಡುಕ

jail

ಕುವೈತ್ ನಲ್ಲಿ ಜೈಲುಪಾಲಾದ ಕೇರಳ ಮೂಲದ 19 ಮಂದಿ ನರ್ಸ್

bantwal city police arrest two thef kannada news

ಕರಾವಳಿಯಲ್ಲಿ ಚಿಗುರಿದ ಕಳ್ಳರ ಗ್ಯಾಂಗ್ ಹೆಡೆಮುರಿ ಕಟ್ಟಿದ ಬಂಟ್ವಾಳ ಪೊಲೀಸರು

Chaitra Kundapura govinda-babu-poojari-ccb-police arrest

ಕಬಾಬ್ ವ್ಯಾಪಾರಿಗೆ ಎಲೆಕ್ಷನ್ ಸಮಿತಿ ಸದಸ್ಯನ ವೇಷ : ಸ್ವಯಂ ಘೋಷಿತ ಹಿಂದೂ ನಾಯಕಿಯ ಖತರ್ನಾಕ್ ಕಹಾನಿ

/ks-eshwarappa-meets-hd-kumaraswamy-bengaluru

ಜೆಡಿಎಸ್ ಬಿಜೆಪಿ ಮೈತ್ರಿ ಪ್ರಸ್ತಾಪ : ಕುಮಾರಸ್ವಾಮಿ ಶಕ್ತಿ ವರ್ಧನೆ ಸುಳಿವು ಬೆನ್ನಲ್ಲೇ ಚುರುಕಾದ ಈಶ್ವರಪ್ಪ

g20-summit-delhi-police-books-photographer-for-flying-drone-during-birthday-party

ಜನ್ಮದಿನ ಚಿತ್ರೀಕರಿಸಿದ ಕ್ಯಾಮಾರಮನ್ ವಿರುದ್ಧ ಕೇಸ್ : 1 ತಿಂಗಳ ಸೆರೆವಾಸ ಸಾಧ್ಯತೆ

https://torrentspree.com/karnataka-weather-forecast-and-rain-alert-for-monday-september-11/

11.09.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

puttur mahalingeshwara temple ex president N Sudhakar Shetty no more

ಪುತ್ತೂರು ದೇವಸ್ಥಾನದ ವ್ಯವಸ್ಥಾಪನಾ ‌ಸಮಿತಿ ಮಾಜಿ ಅಧ್ಯಕ್ಷ ಎನ್ ಸುಧಾಕರ ಶೆಟ್ಟಿ ಇನ್ನಿಲ್ಲ

brindavana-kannada-serial-ramji-colours-kannada

ರಾಮ್ ಜೀ ನಿರ್ದೇಶನದಲ್ಲಿ ಮತ್ತೊಂದು ಸೀರಿಯಲ್ : ಬಿಗ್ ಬಾಸ್ ನಂತ್ರ ಬೃಂದಾವನ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್